ದೇಸೀ ಹುಡಗಿಯ ನಿರ್ಗಮನಕೆ ಭಾವಪೂರ್ಣ ಶ್ರದ್ಧಾಂಜಲಿ

ಪ್ರಸ್ತುತದಲ್ಲಿ ಜೀವಿಸುತ್ತಿರುವ ನಾವು ಅತ್ಯಾಧುನಿಕ ತಂತ್ರಜ್ಞಾನವನ್ನು ಅನುಭವಿಸುತ್ತಿರುವ ಅದೃಷ್ಟವಂತರು. ಆ ಕಾರಣದಿಂದಲೆ ಗೂಗಲ್ ಗೆ ಹೋಗಿ ‘ದೇಶಾಂಶ ಹುಡುಗಿ’ ಎಂದು ಟೈಪ್ ಮಾಡಿದರೆ ಸಾಕು, ಅನೇಕ ವೆಬ್ ಸೈಟ್ ಗಳು ಓಪನ್ ಆಗುತ್ತವೆ. ಕಣಜ ಡಾಟ್ ಇನ್, ನಾನುಗೌರಿ ಡಾಟ್ ಕಾಮ್, ಬುಕ್ ಬ್ರಹ್ಮ ಡಾಟ್ ಕಾಮ್, ಯಾವುದೇ ಇರಬಹುದು, ಎಲ್ಲದರಲ್ಲೂ ಈ ಹಿರಿಯ ಜೀವಿಯ ಸಾಹಿತ್ಯ, ಸಾಧನೆ ಅಪ್ ಲೋಡ್ ಆಗಿದೆ. ಬೆಳೆದು ನಿಂತ ಈ ಪೈರು ನೀಡಿದ ಫಸಲು ಅಪಾರ, ಅನನ್ಯ, ಅದ್ಭುತ.

ಮುಳುಗದ ರವಿ‌ ಬೆಳಗು

ಪತ್ರಕರ್ತ, ಕವಿ, ಕತೆಗಾರ, ಅನುವಾದಕ, ವಿವಾದಾತ್ಮಕ ಬರಹಗಾರ ರವಿ ಬೆಳಗೆರೆ ನಿರೀಕ್ಷಿತವಾಗಿ ದೈಹಿಕವಾಗಿ ಹೋಗಿದ್ದಾರೆ. ಕುಡಿತ, ಸಿಗರೇಟ್, ರಸಿಕತೆ ರವಿಯನ್ನು ಬಲಿ ತೆಗೆದುಕೊಂಡಿದೆ. ಯಾವತ್ತಾದರೂ ಒಂದು ದಿನ ಸಾಯೋದೇ, ಹ್ಯಾಗ ಬದುಕಿದರೆ ಏನು? ಎಂಬ ಉಡಾಫೆಯೂ ಇತ್ತಲ್ಲ! ಆದರೆ ರವಿ very very colourful ಕನಸುಗಾರ. ಬದುಕಿನ ರಹಸ್ಯಗಳನ್ನು ಬಿಚ್ಚಿಟ್ಟ ಎದೆಗಾರ. ತುಂಬಾ ಕಾಡಿ ಕನಲಿದ ಹುಟ್ಟಿನ ರಹಸ್ಯ ಬಿಚ್ಚಿಟ್ಟು ನಿರಾಳವಾದ ಹೊತ್ತಲ್ಲಿ ಜೀವ ಬಿಟ್ಟ ಜಾದೂಗಾರ.