11 ಎಕರೆ ಹೊಲದಾನ್ ಗೋವಿನ ಜೋಳ ಬೆಂಕಿಗೆ ಆಹುತಿ!

ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳ ಸುಟ್ಟು ಭಸ್ಮಗೊಂಡ ಘಟನೆ ಗದಗ ಜಿಲ್ಲೆಯ ನಾಗಾವಿ ತಾಂಡಾದಲ್ಲಿ ನಡೆದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ನಾಶವಾಗಿದೆ. ಲಕ್ಷ್ಮಣ್ ಪವಾರ್ ಎಂಬುವರಿಗೆ ಸೇರಿದ 11 ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಂದಾಜು 2.5 ಲಕ್ಷ ರೂ. ಮೌಲ್ಯದ ಬೆಳೆ ನಾಶವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದಿಸಲು ಪ್ರಯತ್ನಿಸಿದರು.

ಉತ್ತರ ಪ್ರಭ ಫಲಶೃತಿ: ಬೆಳೆ ಹಾನಿ ವೀಕ್ಷಿಸಿಸಿದ ಅಧಿಕಾರಿಗಳು

ರೋಣ: ಇತ್ತಿಚೆಗಷ್ಟೆ ಅಪಾರ ಮಳೆಯಿಂದ ರೈತರ ಬೆಳೆ ಹಾನಿಗೀಡಾಗಿತ್ತು. ಇದರಿಂದ ಸವಡಿ ಗ್ರಾಮದ ರೈತ ಮೇಘರಾಜ್ ಬಾವಿ ಅವರ ಜಮೀನಿನಲ್ಲಿ ಬೆಳೆದ ಬೆಳೆ ಹಾನಿ ಕುರಿತು ನಿಮ್ಮ ಉತ್ತರಪ್ರಭ ವರದಿ ಬಿತ್ತರಿಸಿತ್ತು. ವರದಿ ಪರಿಣಾಮ ಇಂದು ಸವಡಿ ಗ್ರಾಮಕ್ಕೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿಗೀಡಾದ ಬೆಳೆ ವೀಕ್ಷಿಸಿದರು.