ಆಲಮಟ್ಟಿ : ಮುಖ್ಯ ಮಂತ್ರಿಗಳು ಇಂದು ಮಂಡಿಸಿದ ಬಜೆಟ್ ರಾಜ್ಯದ ನೌಕರರಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ ತೀವ್ರ ನಿರಾಸೆ ಮೂಡಿಸಿದೆ ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಸಕಾ೯ರ ರಾಜ್ಯದ ಸಕಾ೯ರಿ ನೌಕರರಿಗೆ ಹಾಗೂ ಶಿಕ್ಷಕರಿಗೆ ಹಿಂದಿನ ವೇತನ ಆಯೋಗದ ಸೌಲಭ್ಯಗಳನ್ನು ಒದಗಿಸಿ ಐದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೆ.ಸುಧಾಕರರಾವ ಅವರ ಅಧ್ಯಕ್ಷತೆಯಲ್ಲಿ 7 ನೇ ವೇತನ ಆಯೋಗ ರಚನೆ ಮಾಡಿದ್ದು,ಶಿಕ್ಷಕರ ಸಂಘಟನೆ ಹಾಗೂ ಇತರೆ ಸಂಘಟನೆಗಳಿಂದ ಸೂಕ್ತ ವರದಿಯನ್ನು ಪಡೆದುಕೊಂಡಿದ್ದಾರೆ. ಆದರೆ ಇಂದಿನ ಬಜೆಟ್ ನಲ್ಲಿ 7 ನೇ ವೇತನ ಬಗ್ಗೆ ಮುಖ್ಯ ಮಂತ್ಕಿಗಳು ಕಿಂಚಿತ್ತೂ ಮಾತನಾಡದೆ ತೀವ್ರ ಸ್ವರೂಪದ ನಿರಾಸೆ ಮೂಡಿಸಿ ಸಮತ್ತ ನೌಕರರ ವಲಯ ಅಸಮಾಧಾನ ಪಡುವಂತೆ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಿ ಅವರ ಭಾವಚಿತ್ರ.


ಇಂದು ಮಂಡಿಸಿರುವ ಅಯವ್ಯದಲ್ಲಿ ಭವಿಷ್ಯವತಿ೯ಯಾಗಿ ವರದಿಯನ್ನು ನಿರೀಕ್ಷಿಸಿ,ವೇತನ ಆಯೋಗವನ್ನು ಜಾರಿಗೊಳಿಸುವುದಾಗಲಿ ಅಥವಾ ಸಕಾ೯ರಿ ನೌಕರರ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ಅನುದಾನವನ್ನು ಮೀಸಲಿಡುವ ಪ್ರಸ್ತಾಪವನ್ನಾಗಲಿ ಅಥವಾ ಈಗಾಗಲೇ ಹಿಂದಿನ ವೇತನ ಆಯೋಗದ ಸೌಲಭ್ಯಗಳನ್ನು ಪಡೆದು ಐದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರವನ್ನು ಘೋಷಿಸುವ ನಿರೀಕ್ಷೆಯನ್ನು ಹೊಂದಿದ್ದೆವು.ಆದರೆ ಈ ಕುರಿತು ಯಾವುದೇ ಪ್ರಸ್ತಾಪಗಳನ್ನು ಅವಯ್ಯವದಲ್ಲಿ ಮಂಡನೆಯಾಗದೇ ಇರುವುದು ಸಮಸ್ತ ರಾಜ್ಯದ ನೌಕರರಿಗೆ ಮತ್ತು ಶಿಕ್ಷಕರಿಗೆ ಬಹಳಷ್ಟು ನಿರಾಸೆ ಉಂಟು ಮಾಡಿದೆ. ಬಜೆಟ್ ನಲ್ಲಿ ನೌಕರರ ವಲಯಕ್ಕೆ ಮುಖ್ಯ ಮಂತ್ರಿಗಳು ಸಿಹಿ ಸುದ್ದಿ ನೀಡುತ್ತಾರೆ ಎಂಬ ವಿಚಾರದಲ್ಲಿ ಜಾತಕ ಪಕ್ಷಿಯಂತೆ ನೌಕರರು ಕಾದು ಕುಳಿತ್ತಿದ್ದರು. ಇಂಥ ಸಂದರ್ಭದಲ್ಲಿ ನಿರೀಕ್ಷೆ ಹುಸಿಗೊಳಿಸಿ ನಿರಾಸೆಯ ಕಾಮೋ೯ಡದಲ್ಲಿ ನೌಕರರನ್ನು ಸಿಎಂ ಅವರು ತಳ್ಳಿದ್ದಾರೆ ಎಂದು ಚಂದ್ರಶೇಖರ ನುಗ್ಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಶಿಕ್ಷಕರು ಮೊದಲೇ ವೇತನ ತಾರತಮ್ಯ ಸಮಸ್ಯೆ ಎದುರಿಸುತ್ತಿದ್ದು ಅಂಥದ್ದರಲ್ಲಿ 7 ನೇ ವೇತನ ಆಯೋಗ ಘೋಷಣೆ ಬಗ್ಗೆ ಬಜೆಟ್ ನಲ್ಲಿ ಮುಖ್ಯ ಮಂತ್ರಿಗಳು ತುಟಿಬಿಚ್ಚದೇ ಗೌಣವಾಗಿರುವುದು ಮತ್ತಿಷ್ಟು ಅಸಮಾಧಾನ ಬುಗಿಲೆಳುವಂತೆ ಮಾಡಿದೆ. ಒಂದೆಡೆ ಎನ್.ಪಿ.ಎಸ್ ರದ್ದು ಪ್ರಸ್ತಾವನೆವೂ ಇಲ್ಲ, ಮತ್ತೊಂದೆಡೆ ನೌಕರರಿಗೆ ಮಧ್ಯಂತರ ಪರಿಹಾರವೂ ಇಲ್ಲ ಪ್ರಸ್ತುತ ಮಂಡಿಸಿರುವ ಈ ಬಜೆಟ್ ನಲ್ಲಿ ಎಂದಿದ್ದಾರೆ.
ಸರ್ಕಾರಿ ನೌಕರರು, ಶಿಕ್ಷಕರು ಪ್ರಸ್ತುತ ಬಜೆಟ್ ನಲ್ಲಿ 7 ವೇತನ ಆಯೋಗದ ವರದಿ ನಿರೀಕ್ಷಿಸಿ ಅದಕ್ಕೆ ಅನುದಾನ ಮೀಸಲಿನ ನಿರೀಕ್ಷೆ ಇಟ್ಟುಕೊಂಡಿದ್ದೇವು, ಪ್ರಸ್ತುತ ಬಜೆಟ್ ನಲ್ಲಿ ಆ ವರದಿ ಅನುಸರಿಸಿ ಯಾವುದೇ ಅನುದಾನ ಭರವಸೆ, ಮಧ್ಯಂತರ ಪರಿಹಾರವಾಗಲಿ ಘೋಷಿಸದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸರ್ಕಾರಿ ಶಾಲೆಗಳ ಸಮಗ್ರ ನಿರ್ವಹಣೆಗಾಗಿ 150 ಕೋಟಿ ರೂಗಳ ಅನುದಾನ ನೀಡಲು ವಿನಂತಿಸಲಾಗಿತ್ತು. ಹೊಸ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರಂಭಿಸಲು ವಿನಂತಿಸಲಾಗಿತ್ತು‌. ನೌಕರರಿಗೆ ಮಾರಕವಾಗಿರುವ
ಎನ್. ಪಿ.ಎಸ್ ರದ್ದುಗೊಳಿಸಲು ಹೋರಾಟ ಹೆಚ್ಚಿತ್ತು. ಈ ವಿಷಯದ ಕುರಿತು ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಈ ಎಲ್ಲಾ ಅಂಶಗಳು ಇಡೀ ರಾಜ್ಯದ ಶಿಕ್ಷಕರಿಗೆ ತೀವ್ರ ನಿರಾಶೆಯಾಗಿದೆ ಎಂದು ಚಂದ್ರಶೇಖರ ‌ನುಗ್ಗಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

1ನೇ ಮತ್ತು 20ನೇ ವಾರ್ಡ ಕಾಂಗ್ರೇಸ್ 31ನೇ ವಾರ್ಡ ಬಿಜೆಪಿ

ಗದಗ ಬೇಟಗೇರಿ:ನಗರ ಸಭೆ 1, 20, 31ನೇ ವಾರ್ಡನ ಮತ ಎಣಿಕೆ ಮುಕ್ತಾಯವಾಗಿದ್ದು , 1ನೇ…

ಕುಣಿಯೊಳಗಿಳಿದು ಸ್ವ್ಯಾಬ್ ಟೆಸ್ಟ್: ಕಥೆಯ ಹಿಂದಿನ ಟ್ವಿಸ್ಟ್

ಕೊರೋನಾ ಕಷ್ಟಕಾಲದಲ್ಲಿ ಕೆಲಸ ಮಾಡುವುದು ಬಹಳಷ್ಟು ಕಷ್ಟದ ಕೆಲಸವಾಗಿದೆ. ಮೃತ ವೃದ್ಧನ ಸ್ವ್ಯಾಬ್ ಟೆಸ್ಟ್ ಮಾಡಿದ ತಪ್ಪಿಗೆ ಲ್ಯಾಬ್ ಟೆಕ್ನಿಷೀಯನ್ ಒಬ್ಬರು ಕುಟುಂಬದಿಂದಲೇ ಬಹಿಷ್ಕಾರಕ್ಕೆ ಒಳಗಾಗುವಂತಾಗಿದೆ. ಮುಖ್ಯವಾಗಿ ಹೆತ್ತ ಮಗನೇ ತಾಯಿಯ ಸಮೀಪಕ್ಕೂ ಬಾರದಂತಾಗಿದೆ.

ಹಳ್ಳಿ ಹಕ್ಕಿ‌ ಒಂಟಿಯಾಗಲು ಬಿಡಲ್ಲ: ಸಚಿವ ಸೋಮಶೇಖರ್

ಗದಗ: ಮಾಜಿ ಸಚಿವ ಎಚ್. ವಿಶ್ವನಾಥ‌ ಅವರು ಅನಾಥರಲ್ಲ. ವಿಶ್ವನಾಥ ಸಹ ನಮ್ಮ ಜೊತೆಯಲ್ಲೇ ಇದ್ದಾರೆ.…

ಜಿಪಂ ಅಧ್ಯಕ್ಷರಾಗಿ ಈರಪ್ಪ ಈಶ್ವರಪ್ಪ ನಾಡಗೌಡರ ಅವಿರೋಧ ಆಯ್ಕೆ

ರಾಜೀನಾಮೆಯಿಂದ ತೆರವಾದ ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಹುದ್ದೆಯ 5 ವರ್ಷದ ಬಾಕಿ ಉಳಿದ ಅವಧಿಗೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಮುಂಡರಗಿ ತಾಲ್ಲೂಕಿನ ಹಿರೇವಡ್ಡಟ್ಟಿ ಜಿ.ಪಂ ಕ್ಷೇತ್ರದ ಸದಸ್ಯರಾದ ಈರಪ್ಪ ಈಶ್ವರಪ್ಪ ನಾಡಗೌಡರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ