ಉತ್ತರಪ್ರಭ ಸುದ್ದಿ
ನಿಡಗುಂದಿ:
ಯುವಜನ ಸಬಲೀಕರಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಮಣಗೂರ ಆಶ್ರಯದಲ್ಲಿ ನಿಡಗುಂದಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ದಿ.12 ರಂದು ಸೋಮವಾರ ನಡೆಯಲಿದೆ. ಪಟ್ಟಣದ ಹೊರವಲಯದ ಮಣಗೂರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿರುವ ಈ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಶಾಸಕ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಾಸಕ ಸೋಮನಗೌಡ ಪಾಟೀಲ ಉದ್ಘಾಟಿಸಲ್ಲಿದ್ದು ಕ್ರೀಡಾ ಜ್ಯೋತಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಸ್ವೀಕರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ನಾನಾ ಜನಪ್ರತಿನಿಧಿಗಳು ಸೇರಿದಂತೆ ಬಿಇಓ ಎಸ್.ಬಿ.‌ ಬಳಬಟ್ಟಿ, ತಹಶೀಲ್ದಾರ್ ಅನಿಲಕುಮಾರ ಢವಳಗಿ, ಇಓ ವಿ.ಎಸ್. ಹಿರೇಮಠ, ಚಂದ್ರಶೇಖರ ನುಗ್ಗಲಿ, ಬಿ.ಟಿ.ಗೌಡರ, ಶಿವಾನಂದ ಮಂಗಾನವರ, ಆರ್.ಎ. ನದಾಫ್, ಎಂ.ಎಸ್. ಮುಕಾರ್ತಿಹಾಳ ಇನ್ನೀತರರು ಆಗಮಿಸಲಿದ್ದಾರೆ ಎಂದು ಬಸವನಬಾಗೇವಾಡಿ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಎಸ್.ಎಸ್. ಅವಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಯುವಕರಲ್ಲಿ ಆತ್ಮಸ್ಥೈರ್ಯ ಕುಗ್ಗಿಸಿದ ಬಿಜೆಪಿ : ರಾಮಕೃಷ್ಣ ದೊಡ್ಡಮನಿ

ಈಗಿನ ಯುವಕರಲ್ಲಿ ಆತ್ಮಸ್ಥೆರ್ಯ ಕುಗ್ಗಿಹೋಗಿದೆ. ಅವರಲ್ಲಿ ಆತ್ಮಸ್ಥೆರ್ಯ ತುಂಬಿದರೆ ನೀರುದ್ಯೋಗದ ಸಮಸ್ಯೆ ಬಗೆಹರಿಸಬಹುದಾಗಿತ್ತು. ಆದರೆ ಬಿಜೆಪಿಯವರು ಇವು ಯಾವುದೆ ಕೆಲಸ ಮಾಡಿಲ್ಲ ಅನೇಕ ಯುವಕರು ನೀರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಎದುರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಇಂದು ಬಿಸಿಸಿಐ ಸಭೆ: ಐಪಿಎಲ್ ಮತ್ತೆ ಮೈದಾನಕ್ಕೆ?

ಕೋರೊನಾ ಬಿಕ್ಕಟ್ಟಿನ ಕಾರಣಕ್ಕೆ ಕ್ರಿಕೆಟ್ ಮಲಗಿದೆ. ತಿಂಗಳುಗಳ ನಂತರ ಇಂದು ಬಿಸಿಸಿಐ ಮಹತ್ವದ ಸಭೆ ನಡೆಸುತ್ತಿದ್ದು,…

ಕೋಮು ಸೌಹಾರ್ದತೆ ಮತ್ತು ಅಜ್ಜನವರು

ಕೋಮುವಾದ ಈಗ ಇದೊಂದು ವಿಚಿತ್ರ ಶಬ್ದ. ಸೌಹಾರ್ದತೆಯ ಹುಡುಕಾಟ ಅನಿವಾರ್ಯವಾದ ಕಾಲ.