ಉತ್ತರಪ್ರಭ

ನರೆಗಲ್: ವಿಧಾನ ಪರಿಷತ್‍ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ ಮಾಜಿ ಶಾಸಕ ಜಿ.ಎಸ್.ಪಾಟೀಲ ಮಂಗಳವಾರ ಪಟ್ಟಣದ ವಿವಿಧೆಡೆ ಮತ ಯಾಚಿಸಿದರು. ಶ್ರೀ ಅನ್ನದಾನ ಶಿಕ್ಷಣ ಸಂಸ್ಥೆ.ಸರಕಾರಿ ಪಿ.ಯು. ಕಾಲೇಜು. ಸರಕಾರಿ ಪದವಿ ಕಾಲೇಜು. ಸರಕಾರಿ ಪ್ರೌಢಶಾಲೆ.ಹಾಗೂ ಶ್ರೀ ಕನಕದಾಸ ಶಿಕ್ಷಣ ಸಂಸ್ಥಗೆ ಭೇಟಿ ನೀಡಿದ ಪಾಟೀಲ ಶಿಕ್ಷಕರಲ್ಲಿ ಮತಯಾಚನೆ ಮಾಡಿದರು.

ಬಳಿಕ ಮಾತನಾಡಿದ ಪಾಟೀಲ ಅವರು,ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಕಣ ರಂಗೇರಿದ್ದು. ನಿವೃತ್ತ ಶಿಕ್ಷಕ ಸಂಘಟನಾ ಚತುರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ‘ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗುರಿಕಾರ ಅವರು ಸಂಘವನ್ನು ಸ್ಥಾಪಿಸಿ, ಹಲವು ಹೋರಾಟಗಳನ್ನು ಮಾಡಿದ್ದಾರೆ. ಶಿಕ್ಷಕರ ಅಭ್ಯುದ್ಯಕ್ಕಾಗಿ ಜೀವನವನ್ನು ಮೀಸಲಿಟ್ಟಿದ್ದಾರೆ. ಇಂತಹವರು ಪರಿಷತ್ ಸದಸ್ಯರಾದರೆ ಶಿಕ್ಷಕರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಾಗಾಗಿ, ಎಲ್ಲರೂ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಮಾತನಾಡಿ ಶಿಕ್ಷಣ ಕ್ಷೇತ್ರ ಇರುವುದು ವಿಶ್ವದಾಖಲೆ ಮಾಡಲು ಅಲ್ಲ. ಶಿಕ್ಷಕರ ಕಷ್ಟ.ಸುಖ.ಬಗೇಹರಿಸಲು ಶಿಕ್ಷಕರು ಈ ಬಾರಿ ಬದಲಾವಣೆ ಬಯಸಿರುವ ಕಾರಣ ನನ್ನ ಗೆಲುವು ಖಚಿತ ಎಂದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ. ಡಾ: ಕೆ.ಬಿ.ಧನ್ನೂರ, ವಿ.ಆರ್. ಗುಡಿಸಾಗರ, ಬಸವರಾಜ ಕಳಕೊಣ್ಣವರ, ನಿಂಗನಗೌಡ ಲಕ್ಕನಗೌಡ್ರ, ಎಂ.ಎಸ್.ದಡೆಸೊರಮಠ, ಪ್ರಬು ಮೇಟಿ, ಯೂಸುಫ್ ಇಟಗಿ, ಬಸವರಾಜ ನವಲಗುಂದ, ಸೂಡಿ ಶೆಟ್ಟರ, ಎ.ಆರ್.ಮಲ್ಲನಗೌಡ್ರ, ಅಶೋಕ ಬೇವಿನಕಟ್ಟಿ, ಅಲ್ಲಾಭಕ್ಷಿ ನಧಾಫ್, ಶಿವನಗೌಡ ಪಾಟೀಲ, ಶೇಖಪ್ಪ ಜುಟ್ಲ, ಗುಡದಪ್ಪ ಗೊಡಿ ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರರು. ಮುಖ್ಯೋಪಾಧ್ಯಾಯರು ಶಿಕ್ಷಕರು ಇದ್ದರು.

Leave a Reply

Your email address will not be published. Required fields are marked *

You May Also Like

ಹಾಲಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಆಗ್ರಹ: ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸಲು ಒತ್ತಾಯ

ಕುರುಬರು ಮೂಲತ: ಬುಡಕಟ್ಟು ಜನಾಂಗದವರಾಗಿದ್ದು, ರಾಜ್ಯದಲ್ಲಿ ಈಗಾಗಲೇ ಜೇನು ಕುರುಬ, ಕಾಡು ಕುರುಬರು, ಗೊಂಡ, ರಾಜಗೊಂಡ, ಕುರುಬ, ಕುರುಮನ್ಸ್ ಜಾತಿಗಳು ಪರಿಶಿಷ್ಟ ಪಂಗಡದಲ್ಲಿವೆ. ಆದರೆ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಕುರುಬರಿಗೂ ಎಸ್.ಟಿ.ಮೀಸಲಾತಿ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಎಸ್.ಟಿ ಮೀಸಲಾತಿ ಹೋರಾಟ ಸಮೀತಿ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಹಾಲಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ತಿಳಿಸಿದರು.

ಎಂಎಚ್ಎಂ ಶಾಲೆಯಲ್ಲಿ ಸ್ನೇಹ ಸಮ್ಮೇಳನ ಸಂಭ್ರಮ ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪಗೆ ಭಾರತರತ್ನ ಪ್ರಶಸ್ತಿ ನೀಡಿ

ಚಿತ್ರವರದಿ : ಗುಲಾಬಚಂದ ಜಾಧವಆಲಮಟ್ಟಿ(ವಿಜಯಪುರ ಜಿಲ್ಲೆ) : ಉತ್ಕಟ ಕಾಯಕದ ತತ್ವ ಶಾಸ್ತ್ರ ಪರಿಪಾಲಿಸಿ ಶರಣ…

ಕಮಲ ಕೈಯಲ್ಲಿ ಹಿಡಿದ ರಾಜರಾಜೇಶ್ವರಿ – ಹ್ಯಾಟ್ರಿಕ್ ಗೆಲುವು ಸಾಧಿಸಿದ ಮುನಿರತ್ನ!

ಬೆಂಗಳೂರು : ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ಸನಿಹಕ್ಕೆ ಬಂದು ನಿಂತಿದ್ದಾರೆ.

ಸರ್ಕಾರದ ಆದೇಶದಲ್ಲಿ ಗೊಂದಲ ಗೂಡು ಸೇರಲು ಗದಗ ಜಿಲ್ಲೆಯ ಕಾರ್ಮಿಕರ ಪರದಾಟ..!

ಕಾರ್ಮಿಕರಿಗೆ ನಿಗದಿತ ದರದಲ್ಲಿ ಊರು ಸೇರಿಸಬೇಕು ಎನ್ನುವ ನಿಯಮವಿದೆ. ಆದರೆ ಉಡುಪಿಯಲ್ಲಿ ಮಾತ್ರ ಗದಗ ಜಿಲ್ಲೆಯ ಕಾರ್ಮಿಕರು ಊರು ಸೇರಲು ಪರದಾಡುವಂತಾಗಿದೆ. ಈಗಾಗಲೇ ಒಂದುವರೆ ತಿಂಗಳಿಂದ ಕೆಲಸವಿಲ್ಲದೇ ಕಾರ್ಮಿಕರು ಒಪ್ಪತ್ತಿನೂಟಕ್ಕೂ ಪರದಾಡಿದ ಕಾರ್ಮಿಕರು ಊರು ಸೇರಲು ಪರದಾಡುವಂತಾಗಿದೆ.