ಉತ್ತರಪ್ರಭ
ಮುಳಗುಂದ: ಸಮೀಪದ ಬಸಾಪೂರ ಗ್ರಾಮದ ಹತ್ತಿರದ ತೋಟದಲ್ಲಿ ನೀರು ಹಾಯಿಸಲು ಮೋಟರ್ ಸ್ವಿಚ್ ಹಾಕುವ ವೇಳೆ ವಿದ್ಯುತ್ ಸ್ಪರ್ಶವಾಗಿ ಅಬ್ದುಲ್ ಗಪಾರ ಮ. ಶೇಖ(54) ಎನ್ನುವ ವ್ಯಕ್ತಿ ಮೃತಪಟ್ಟ ಘಟನೆ ಅವರ ಸ್ವಂತ ತೋಟದಲ್ಲೆ ಗುರುವಾರ ಸಂಜೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಪಟ್ಟಣದ ಶೇಖ ಓಣಿಯ ನಿವಾಸಿಯಾಗಿದ್ದು ಅವರ ಸ್ವಂತ ತೋಟದಲ್ಲೆ ಘಟನೆ ನಡೆದಿದೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.