ಉತ್ತರಪ್ರಭ

ನೇತ್ರದಾನ ಮಾಡಬೇಕೆಂದು ಕೊಂಡಿದ್ದೇನೆ
ನೊಂದಾಯಿಸಿಕೊಳ್ಳಿ ನನ್ನೆಯ ಹೆಸರನ್ನ
ಉರಿಯುವ ಬೆಂಕಿಯಲಿಟ್ಟರೆ ಬೂದಿಯಾಗುತ್ತೇನೆ
ಮಣ್ಣಿನೊಳಗೆ ಹುಗಿದರೆ ಕೊಳೆತು ಹೋಗುತ್ತೇನೆ

ಸತ್ತ ಮೇಲೆಯೂ ಉಪಕಾರಿಯಾಗ ಬೇಕಾಗಿದೆ
ಉಪಯೋಗವಾಗುವ ಅಂಗಾಂಗ ದಾನ ಕೊಟ್ಟು
ಬೆಳಕನ್ನೇ ಕಾಣದ ಅದೆಷ್ಟೋ ಅಂಧರಿದ್ದಾರೆ ಇಲ್ಲಿ
ಕಾಣದನ್ನು ಕಣ್ಣು ತೆರದು ನೋಡಲಿ ಅವರು ಇಲ್ಲಿ

ಬದುಕಿನ ತುಂಬಾ ಕತ್ತಲೆಯನ್ನೇ ತುಂಬಿಕೊಂಡಿದ್ದಾರೆ
ನೋಡಲಿ ಅವರು ಹೆತ್ತ ಮಡಿಲನ್ನ ಹೊತ್ತು ಹೆಗಲನ್ನ
ಬೆಳಕಿಲ್ಲದ ಮನೆಯೊಳಗೆ ವಾಸಿಸುವುದೇ ಕಷ್ಟ
ಅಂಧಕಾರದ ಮದ್ಯ ಬಳಲಿದ್ದಾರೇ ಬಲು ನಷ್ಟ

ನನ್ನ ಕಣ್ಣಿದ್ದಾದರು ನೋಡಲಿ ಪ್ರಕೃತಿಯ ಸೊಬಗನ್ನು
ಕಣ್ಣು ತುಂಬಿಕೊಳ್ಳಲಿ ಪ್ರಕೃತಿಯ ಸೌಂದರ್ಯವನ್ನು
ಒಬ್ಬರ ಕತ್ತಲೆಯ ಕಳೆಯುವ ಭಾಗ್ಯ ನನಗೆ ಸಿಕ್ಕಿದೆ
ಇದಕ್ಕಿಂತ ಹೆಚ್ಚೇನು ಬೇಡ ಅವರಿಗೆ ಬೆಳಕಾಗುವೆ

ದೀಪದಿಂದ ದೀಪವನ್ನು ಹಚ್ಚಿ ಇಡುವಂತೆ ಮಾನವ
ಧಾನ ಧರ್ಮವನ್ನು ಮಾಡುವುದು ಕಲೆಯಬೇಕಾಗಿದೆ
ದಾನದಿಂದ ಇನ್ನೊಬ್ಬರ ಹಾನಿಯನ್ನು ತಪ್ಪಿಸಬಹುದು
ಹಿಂದೇಟು ಏಕೆ? ನೊಂದಾಯಿಸಿಕೊಳ್ಳಿರೀ ಹೆಸರನ್ನು

ಕಷ್ಟಕ್ಕೆ ಪರಿಹಾರ ಬದುಕಿದ್ದಾಗಲೇ ಹುಡುಕೋಣ
ಸತ್ತ ಮೇಲೆ ಅಂಗಾಂಗಗಳ ಕೊಟ್ಟು ಹೋಗೋಣ
ಇಲ್ಲಿ ಇದಷ್ಟು ದಿನ ನಾವು ಆದರ್ಶವಾಗಿ ಬಾಳೋಣ
ಸತ್ತ ಮೇಲೆ ಇಲ್ಲಿ ಸಂದೇಶವ ಕೊಟ್ಟು ಸಾಗೋಣ.

ಮಹಾಂತೇಶ ಬೇರಗಣ್ಣವರ
ಜಾಹಿರಾತು
ಜಾಹಿರಾತು
Leave a Reply

Your email address will not be published. Required fields are marked *

You May Also Like

ಅನಾಮಧೇಯ ವ್ಯಕ್ತಿಯ ಶವಪತ್ತೆ: ಗುರುತು ಪತ್ತೆಗೆ ಮನವಿ

ಗಜೇಂದ್ರಗಡ : ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಸಮೀಪದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. ಪಟ್ಟಣದ…

ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದಲ್ಲಿ ಮತ್ತೊಬ್ಬ ಸೆರೆ

ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಎಪ್‌ಡಿಎ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ನಿವಾಸಿ ವೆಂಕಟೇಶ್ ಬಂಧಿತ ಆರೋಪಿ. ಈತ ಈಗಾಗಲೇ ಬಂಧಿತನಾಗಿರುವ ಆರೋಪಿ ರಾಚಪ್ಪನ ಚಿಕ್ಕಪ್ಪನ ಮಗನಾಗಿದ್ದಾನೆ.

ಇನ್ನು 5 ದಿನ ಮಳೆ : 7 ಜಿಲ್ಲೆಗಳಲ್ಲಿ ಹೈ ಅಲರ್ಟ್

ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಸತತ ಮಳೆಯಾಗುತ್ತಿದೆ. ಇನ್ನು ಐದು ದಿನಗಳ ಕಾಲ ಇದೇ ಹವಾಮಾನ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನರ‍್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ.

ಗದಗ – ಬೇಟಗೆರಿ ನಗರಸಭೆಯಲ್ಲಿ ಯಾರಿಗೆ ಎಷ್ಟು ಮತದಾನದ ಪಟ್ಟಿ ಪ್ರಕಟ

ಉತ್ತರಪ್ರಭ ಗದಗ: ಇಂದು ಗದಗ-ಬೇಟಗೆರಿ ಮತ ಏಣಿಕೆಯಲ್ಲಿ ಮುಗಿದಿದ್ದು, ಯಾವ ಅಭ್ಯರ್ಥಿಗೆ ಎಷ್ಟು ಮತ ಎಂದು…