ಉತ್ತರಪ್ರಭ ಸುದ್ದಿ
ಗದಗ:
ಗದಗ ಜಿಲ್ಲೆಯಲ್ಲಿರುವ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ಅರಣ್ಯ ತಡೆಯಲು ವಿಫಲವಾಗಿದೆ, ಅರಣ್ಯ ಇಲಾಖೆಯ ಅಧಿಕಾರಿಗಳೆ ಬೆಂಕಿ ಹಚ್ಚಿ ಅವರಿವರ ಮೇಲೆ ದೂಶಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ದಿನಾಂಕ: 26.02.2022 ರಂದು ಡಂಬಳ ವ್ಯಾಪ್ತಿಯಲ್ಲಿ ಬೆಂಕಿ ಹತ್ತಿ ಸಾಕಷ್ಟು ಅರಣ್ಯ ನಾಶವಾಗಿದೆ. ಅದು ಅಚಾನಕ ಆಗಿದೆ ಎಂದು ಮುಂಡರಗಿಯ ವಲಯ ಅರಣ್ಯ ಅಧಿಕಾರಿಗಳು ಸ್ಪಷ್ಟನೇ ನೀಡುತ್ತಾರೆ, ಆದರೇ ಈ ಅಧಿಕಾರಿ ಅರಣ್ಯ ಉಳಿಸುತ್ತಿದ್ದೇನೆ ಎಂದು ಬ್ರಮೇಯಲ್ಲಿಯೇ, ಇದ್ದಾರೆ ಹೊರತು ಬೆಂಕಿಯಿAದ ಸುಟ್ಟ ಅರಣ್ಯವನ್ನು ತರಲಿಕ್ಕೆ ಆಗತ್ತಾ ಇವರಿಗೆ ಸಂಬಳ ನೀಡುವುದು ಇದಕ್ಕೆನಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


ಇಂದು ಗದಗ ತಾಲೂಕಿನ ನಾಗಾವಿ ಗುಡ್ಡ ಬೆಂಕಿಯಿAದ ಹೊತ್ತಿ ಉರಿದು ಹೊಗಿದೆ , ಅರಣ್ಯ ಇಲಾಖೆಯ ಅಧಿಕಾರಿಗಳ ಅಸಡ್ಡೆ ಎನ್ನಬೇಕೆ? ಅಥವಾ ಅರಣ್ಯ ರಕ್ಷಕರ ಹೆಸರಿನಲ್ಲಿ ರಕ್ಷಣೆಯೇ ಮರೆತರಾ ಈ ಎಲ್ಲಾ ಘಟನೆಗಳು ಜನರಲ್ಲಿ ವಿಚಾರಮಾಡಲು ಎಡೆಮಾಡಿಕೊಟ್ಟದಂತು ನಿಜ. ನಾಗಾವಿಯಿಂದ ಹಿಡಿದು ಜಲಶಂಕರದವರೆಗೂ ಸುಟ್ಟು ಹೋಗಿದೆ. ಇದರ ಹೊಣೆಯನ್ನು ಹೊರುವವರು ಯಾರು? ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ಸಾಕ್ಷಿ ಎನ್ನುವಂತಾಗಿದೆ. ಇದಕ್ಕೆ ಅರಣ್ಯ ಇಲಾಖೆ ಸೂಕ್ತ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕನೂನು ಕ್ರಮ ಜರುಗಿಸಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಕುಣಿಯೊಳಗಿಳಿದು ಸ್ವ್ಯಾಬ್ ಟೆಸ್ಟ್: ಕಥೆಯ ಹಿಂದಿನ ಟ್ವಿಸ್ಟ್

ಕೊರೋನಾ ಕಷ್ಟಕಾಲದಲ್ಲಿ ಕೆಲಸ ಮಾಡುವುದು ಬಹಳಷ್ಟು ಕಷ್ಟದ ಕೆಲಸವಾಗಿದೆ. ಮೃತ ವೃದ್ಧನ ಸ್ವ್ಯಾಬ್ ಟೆಸ್ಟ್ ಮಾಡಿದ ತಪ್ಪಿಗೆ ಲ್ಯಾಬ್ ಟೆಕ್ನಿಷೀಯನ್ ಒಬ್ಬರು ಕುಟುಂಬದಿಂದಲೇ ಬಹಿಷ್ಕಾರಕ್ಕೆ ಒಳಗಾಗುವಂತಾಗಿದೆ. ಮುಖ್ಯವಾಗಿ ಹೆತ್ತ ಮಗನೇ ತಾಯಿಯ ಸಮೀಪಕ್ಕೂ ಬಾರದಂತಾಗಿದೆ.

ಕೋವಿಡ್-19 ಗದಗ ಜಿಲ್ಲೆ : ಪ್ರತಿಬಂಧಿತ ಪ್ರದೇಶಗಳ ಘೋಷಣೆ

ಗದಗ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕು ಸಕಾರಾತ್ಮಕ ಕಂಡುಬ0ದ ಪ್ರದೇಶಗಳನ್ನು ಪ್ರತಿಬಂಧಿತÀ ಪ್ರದೇಶಗಳನ್ನಾಗಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಘೋಷಿಸಿದ್ದಾರೆ.

ಕೃಷಿ ಅಧಿಕಾರಿಗಳು ಸಹ ಕೊರೊನಾ ವಾರಿಯರ್ಸ್‌ಗಳಂತೆ: ಬಿ.ಸಿ.ಪಾಟೀಲ

ಬೆಂಗಳೂರು: ರೈತರು ಕೋವಿಡ್ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಕೃಷಿ ಅಧಿಕಾರಿಗಳು ಸಹ ಕೊರೊನಾ…

ಮೀನು ಸಾರು ಮಾಡಿವಿ ಬಾ ಅಪ್ಪಾ, ಎನ್ನುವ ಕರುಳಿನ ಕೂಗಿಗೂ ಬಾರದೇ ಹೋದ ಅಪ್ಪ..!

ಕೂಲಿ ಕೆಲಸ ಮುಗಿಸಿ ಮನೆಗೆ ಬಂದ ಅಪ್ಪನನ್ನು ಕಂಡ ಮಕ್ಕಳು ಅಪ್ಪ, ಕೈಯಲ್ಲಿ ಹಿಡಿದುಕೊಂಡು ಬಂದ ಚೀಲವನ್ನೆ ಕಣ್ಣರಳಿಸಿ ನೋಡಿದ್ದಾರೆ. ಅಪ್ಪ ತಂದ ಮೀನು ಕಂಡು ಹಿರಿಹಿರಿ ಹಿಗ್ಗಿದ್ದಾರೆ. ಮಕ್ಳಾ ಮೀನು ಸಾರು ರೆಡಿ ಆಗ್ಲಿ ನಾನು ಸ್ವಲ್ಪ ಹೊರಗ್ ಹೋಗಿ ಬರ್ತಿನಿ ಅಂತ ಹೊರ ನಡೆದ ಅಪ್ಪ.