ಉತ್ತರಪ್ರಭ ಸುದ್ದಿ
ಗದಗ:
ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 108ನೇ ಜಯಂತ್ಯೋತ್ಸವ ಪ್ರಯುಕ್ತ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸಂಗೀತ ಪಾಠಶಾಲೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಮಾರ್ಚ್ 3ರಂದು ಶ್ರೀ ಸಾಯಿ ಜ್ಞಾನ ಯೋಗಾಶ್ರಮ ವಿಶ್ವೇಶ್ವರಯ್ಯ ನಗರ, ಕಳಸಾಪುರ ಗದಗದಲ್ಲಿ ಆಯೋಜನೆಗೊಂಡಿದ್ದು, ಡಾ. ವ್ಹಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನದಿಂದ ಪ್ರತಿ ಪ್ರತಿವರ್ಷದಂತೆ ನಾಡಿನ ವಿವಿಧ ಕ್ಷೇತ್ರಗಳಲ್ಲಿ

ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷರು ಹಾಗೂ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ ಶಾಖೆ ಜಿಲ್ಲಾ ಕಾರ್ಯಾಧ್ಯಕ್ಷರಾದ ಡಾ. ಶಾಂತಕುಮಾರ ಬಸಪ್ಪ ಭಜಂತ್ರಿ ಅವರಿಗೆ “ರಾಜ್ಯಮಟ್ಟದ ಸಾಹಿತ್ಯ ರತ್ನ” ಪ್ರಶಸ್ತಿ ನೀಡಲು ಪ್ರತಿಷ್ಠಾನದ ಸಮಿತಿ ತೀರ್ಮಾನಿಸಿದೆ. ಮಾರ್ಚ್ 3ರಂದು ಜರುಗುವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷೆ ಡಾ. ಶ್ರೀಮತಿ ವ್ಹಿ.ವಿ. ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸೆಪ್ಟಂಬರ್ ಮೊದಲ ವಾರದಲ್ಲಿ ಪದವಿ ತರಗತಿಗಳು ಆರಂಭ

ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಮಸವಾದ ವಿಷಯ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗುವುದು ಯಾವಾಗ ಎನ್ನುವುದು. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ತರಗತಿಗಳು ಯಾವಾಗ ಆರಂಭವಾಗುತ್ತೆವೆಯೋ ಎನ್ನುವುದನ್ನೇ ಎದುರು ನೋಡುತ್ತಿದ್ದರು.

ತಾಂಡಾ ಅಭಿವೃದ್ಧಿ ನಿಗಮದ ಉಪಯೋಗ ಪಡೆದುಕೊಳ್ಳಿ: ಶಾಸಕ ರಾಮಣ್ಣ ಲಮಾಣಿ

ಪ್ರತಿಯೊಂದು ಗ್ರಾಮಗಳಲ್ಲಿ ತಾಂಡಾ ಅಭಿವೃದ್ಧಿ ನಿಗಮದಿಂದ ಸಿಸಿ ರಸ್ತೆ, ಸಮುದಾಯ ಭವನ ಸೇರಿದಂತೆ ಅನೇಕ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು ತಾಂಡಾದ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ರೋಣ ತಾಲೂಕಿನಲ್ಲಿ ವಿಸ್ಟೇನ್ ಕಂಪನಿ ಕಾರ್ಯಕ್ಕೆ ಮೆಚ್ಚುಗೆ

ವಿಸ್ಟೇನ್ ಟೆಕ್ನಿಕಲ್ ಆಂಡ್ ಸರ್ವಿಸಸ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ಇಂಡಿಯಾ ವತಿಯಿಂದ ಶನಿವಾರ ತಾಲೂಕು ಮಾಡಲಗೇರಿ ಗ್ರಾಮದಲ್ಲಿ ಜಿಲ್ಲೆಯ 25 ಜನರಿಗ ಕೃತಕ ಕಾಲು, ಕೃತಕ ಕೈ, ವೀಲ್ ಚೇರ್, ವಾಕಿಂಗ್ ಸ್ಟಾಂಡ್, ವಾಕಿಂಗ್ ಸ್ಟಿಕ್, ಕಾಲಿಪರ್, ಶೂಸ್, ನೀ ಕ್ಯಾಪ್ ಇತ್ಯಾದಿ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.