ಗದಗ: ದೇವಾಲಯದ ಪಕ್ಕದಲ್ಲಿರುವ ಉದ್ಯಾನವನ ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಎನ್ನುವಂತಿದೆ. ಸರ್ಕಾರ ನೀಡಿದ ಲಕ್ಷಾಂತರ ಹಣ ದೇವರ ಹುಂಡಿಗೆ ಹಾಕಿದಂತಾಗಿದೆ. ನರೇಗಲ್ಲನ ಈಶ್ವರ ದೇವಾಲಯದ ಪಕ್ಕದಲ್ಲಿನ ಉದ್ಯಾನವನದ ಕಥೆ ಇದು.

ಹೌದು ಪಟ್ಟಣದ 16ನೇ ವಾರ್ಡಿನಲ್ಲಿ ಇರುವ ಈಶ್ವರ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ವಾರ್ಡಿನ ನಾಗರಿಕರಿಗೆ ಅನಕೂಲವಾಗಲಿ ಎನ್ನುವ ಉದ್ದೇಶದಿಂದ ಇಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿತ್ತು.

10 ಲಕ್ಷ 9 ವರ್ಷವಾದರೂ ಪ್ರಯೋಜನಕ್ಕಿಲ್ಲ
2010 -11ನೇ ಸಾಲಿನಲ್ಲಿ ಅಂದಾಜು 10 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಲ್ಪಟ್ಟಿದ್ದ ಉದ್ಯಾನವನ 9 ವರ್ಷಗಳು ಕಳೆದರು ಸಹ ಪ್ರಯೋಜನಕ್ಕೆ ಬಾರದಂತಾಗಿದೆ.


ಅಷ್ಟೇ ಅಲ್ಲದೇ ಈ ಉದ್ಯಾನವನಕ್ಕೆ ಹೋಗಲು ಸರಿಯಾದ ರಸ್ತೆ ಹಾಗೂ ದಾರಿ ಇಲ್ಲದೆ ಇರುವುದರಿಂದ ಉದ್ಯಾನವನ ಎಲ್ಲಿದೆ ಎಂದು ನೋಡುವ ಭಾಗ್ಯವೂ ಇಲ್ಲಿನ ದೇವಸ್ಥಾನಕ್ಕೆ ಬರುವ ಭಕ್ತರಿಗೆ, ವಾರ್ಡಿನ ನಾಗರಿಕರಿಗೆ ಸಿಕ್ಕಿಲ್ಲ. ಈ ಉದ್ಯಾನವನವೂ ಅಭಿವೃದ್ಧಿಗೊಂಡರೆ ಬಸ್ ನಿಲ್ದಾಣ ಸಮೀಪ ಇರುವುದರಿಂದ ಪ್ರಯಾಣಿಕರಿಗೆ, ವಾಹನ ಚಾಲಕರಿಗೆ, ನಿರ್ವಾಹಕರಿಗೆ ಬಂದು ವಿಶ್ರಾಂತಿ ಪಡೆಯಲು ಅನಕೂಲವಾಗುತ್ತದೆ. ಅಷ್ಟೇ ಅಲ್ಲದೆ ಬಸ್ ನಿಲ್ದಾಣ ಹಾಗೂ ಮಳಿಗೆಗಳ ಸುತ್ತಲೂ ವ್ಯಾಪರ ಮಾಡುವ ವ್ಯಾಪರಸ್ಥರಿಗೂ ಕೊಂಚ ವಿಶ್ರಾಂತಿಗೆ ಅನುಕೂಲವಾಗುತ್ತದೆ.
ಆದರೆ ಅಭಿವೃದ್ಧಿಯೂ ಮರಿಚಿಕೆಯಾಗಿದ್ದು, ಈ ಉದ್ಯಾನವನದಲ್ಲಿ ಕೂಡಾ ನೀರಿನ ವ್ಯವಸ್ಥೆ ಇಲ್ಲ ಗಿಡಗಳು ಕೆಳುವುದೆ ಬೇಡ.

ಐತಿಹಾಸಿಕ ಹಿನ್ನಲೇ ಹೊಂದಿರುವ ಈಶ್ವರ ದೇವಸ್ಥಾನದ ಆವರಣದಲ್ಲಿ ಉದ್ಯಾನವನ ನಿರ್ಮಿಸುತ್ತೇವೆ ಎಂದು ನಿರ್ಲಕ್ಷ್ಯತನ ತೋರಿರುವ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿಗಳು ದೇವಸ್ಥಾನಕ್ಕೆ ಹೋಗಲು ದಾರಿ, ಗಿಡಗಳನ್ನು ನೆಟ್ಟು ಅಭಿವೃದ್ಧಿ ಪಡಿಸಲು ಮುಂದಾಗಬೇಕು

– ಯಲ್ಲಪ್ಪ ಮಣ್ಣವಡ್ಡರ. ಬಸವರಾಜ ಹಿರೇಮಠ, ಶಿವಣ್ಣ ಬೇಕರಿ, ಸ್ಥಳೀಯ ನಿವಾಸಿಗಳು

1 comment
  1. 40 ಲಕ್ಷ ಖರ್ಚು ಮಾಡಿ ಅಭಿವೃಧ್ಧಿಪಡಿಸಿದ ಈಶ್ವರ ಗುಡಿ ದೇವಸ್ಥಾನದ ಉಧ್ಯಾನವನದ ಸ್ಥಿತಿ ನೋಡಿದರೆ ಸಂಬಂದಿಸಿದವರಿಗೆ ಕ್ಯಾಕರಿಸಿ ಉಗಿಯುವಂತಿದೆ.

Leave a Reply

Your email address will not be published. Required fields are marked *

You May Also Like

ಮುಳಗುಂದ : ಮರುಜೀವ ಪಡೆದ ಪಟ್ಟಣಶೆಟ್ಟಿ ಕೆರೆ

ಪಟ್ಟಣದ ಕಲ್ಲೂರ ರಸ್ತೆಗೆ ಹೊಂದಿಕೊಂಡ ಪಟ್ಟಣಶೆಟ್ಟಿ ಕೆರೆ ಈಗ ಅಭಿವೃದ್ದಿಗೊಂಡಿದ್ದು ಕಡಿಮೆ ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಿಸಿದ ಧರ್ಮಸ್ಥಳ ಅಭಿವೃದ್ದಿ ಸಮಿತಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ಎರಡುದಿನ ಭಾರಿ ಮಳೆ : ಗದಗ ಸೆರಿ ಇನ್ನು ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್..!

ಉತ್ತರಪ್ರಭ ಸುದ್ದಿ ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಹವಾಮಾನ ವೈಪರಿತ್ಯ ಹಿನ್ನೆಲೆ ರಾಜ್ಯದಲ್ಲಿ…

ಬಸವ ತತ್ವ, ಧರ್ಮಸೂತ್ರ ಪರಿಪಾಲಿಸಿ ಭವ್ಯ ಹಿಂದು ಧರ್ಮ ಉಳಿವಿಗೆ ಸಂಕಲ್ಪ ಮಾಡಿ- ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ

ಆಲಮಟ್ಟಿ: ಪವಿತ್ರ ಬಸವ ಭೂಮಿಯ ನಾಡಿನಲ್ಲಿ ಇನ್ನೂ ಅಸ್ಪೃಶ್ಯತೆ ಪೂರ್ಣ ತೊಲಗಿಲ್ಲ. ಕಂದಾಚಾರ,ಅನಾಚಾರ,ಮೂಡನಂಬಿಕೆಗಳಂಥ ಮೌಢ್ಯಗಳು ಅಲ್ಲಲ್ಲಿ…

ಮಲಗಿದೆ ರಾಜ್ಯ ಮಾಹಿತಿ ಹಕ್ಕು ವೆಬ್ ಸೈಟ್!: ಮಾಹಿತಿ ಮುಚ್ಚಿಡುವ ಯತ್ನದ ಆರೋಪ

ಜನರಿಗೆ ಮಾಹಿತಿ ಒದಗಿಸಲೆಂದೇ ಮಾಹಿತಿ ಹಕ್ಕು ಜಾರಿಗೆ ಬಂದಿದೆ. ಆದರೆ, ಜನರು ಬಯಸುವ ಮಾಹಿತಿ ನೀಡಲು ಮಾಹಿತಿ ಹಕ್ಕು ಆಯೋಗ ಹಿಂದೇಟು ಹಾಕುತ್ತಿದೆಯೇ ಎಂಬ ಸಂದೇಹ ಬರುವಂತಾಗಿದೆ. ಕಳೆದ ಒಂದು ತಿಂಗಳಿಂದ ರಾಜ್ಯದ ಮಾಹಿತಿ ಹಕ್ಕು ಅಂತರ್ಜಾಲ ತಾಣ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅರ್ಜಿ ಹಾಕಲು ಬಯಸುವವರು ನಿರಾಶರಾಗಿ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ.