ಮುಳಗುಂದ : ಇಲ್ಲಿನ ಯಳವತ್ತಿ ರಸ್ತೆಗೆ ಹೊಂದಿಕೊಂಡಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10 ವಿದ್ಯಾರ್ಥಿಗಳು ಮತ್ತು ಒಬ್ಬ ಸಿಬ್ಬಂದಿಗೆ ಸೋಮವಾರ ಕೋವಿಡ್ ಸೋಂಕು ಧೃಡಪಟ್ಟ ಬಗ್ಗೆ ವರದಿಯಾಗಿದೆ.


ಈ ಕುರಿತು ಗದಗ ಟಿ.ಎಚ್.ಒ ಡಾ.ಪ್ರೀತ್ ಖೋನಾ ಮಾತನಾಡಿ, ವಸತಿ ಶಾಲೆಯ ಕೆಲವರಿಗೆ ನೆಗಡಿ, ಕೆಮ್ಮು, ಜ್ವರದಂತ ಲಕ್ಷಣಗಳು ಕಂಡುಬಂದ ಹಿನ್ನೆಲೆ ಜ.29 ರಂದು 39 ವಿದ್ಯಾರ್ಥಿಗಳಿಗೆ ಕೋವಿಡ್ ರ್ಯಾಡಂ ಪರೀಕ್ಷೆಗೆ ಒಳಪಡಿಸಿ ಗಂಟಲು ಮಾದರಿ ಸಂಗ್ರಹಿಸಲಾಗುತ್ತು. ಈ ಪೈಕಿ 10 ವಿದ್ಯಾರ್ಥಿಳು ಮತ್ತು ಒಬ್ಬ ಸಿಬ್ಬಂದಿಗೆ ಸೋಂಕು ದೃಡಪಟ್ಟಿದೆ. ಆರೋಗ್ಯ ಸಿಬ್ಬಂದಿ ಶಾಲೆಗೆ ಭೇಟಿಕೊಟ್ಟಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ, ಸೌಮ್ಯ ಲಕ್ಷಣಗಳಿದ್ದು ಎಲ್ಲರೂ ಕ್ವಾರಂಟೈನ ವ್ಯವಸ್ಥೆ ಮತ್ತು ಅಗತ್ಯ ಚಿಕಿತ್ಸೆ ನೀಡಲಾಗಿದೆ. 3 ದಿನ ತರಗತಿಗೆ ರಜೆ ಕೊಡುವಂತೆ ಪ್ರಾಚಾರ್ಯರಿಗೆ ತಿಳಿಸಲಾಗಿದೆ. ಎಂದು ಹೇಳಿದರು.

ಸೋಂಕು ಧೃಡಪಟ್ಟ ಹಿನ್ನೆಲೆ ವಸತಿ ಶಾಲೆಗೆ ಸ್ಥಳೀಯ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರ ಎಂ.ಎಸ್.ಬೆಂತೂರ ಭೇಟಿ ನೀಡಿದ್ದರು. ಪೌರಕಾರ್ಮಿಕರಿಂದ ವಿದ್ಯಾರ್ಥಿಗಳ ಕೊಠಡಿಗಳಿಗೆ ಸೋಂಕು ನಾಶಕ ದ್ರಾವಣ ಸಿಂಪಣೆ ಮಾಡಿಸಿದ್ದು ಅಗತ್ಯ ಸ್ವಚ್ಛತೆ ಕ್ರಮ ಕೈಗೊಳ್ಳಲಾಗಿದೆ. ಎಂದು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಕೊರೋನಾ ಸೋಂಕಿತರ ಸಂಖ್ಯೆ ಬಹಿರಂಗಕ್ಕೂ ಮೀನಾಮೇಷವೇ..?

ಲಾಕ್ ಡೌನ್ ಸಡಿಲಿಕೆಯಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಕೇಂದ್ರ ಸರ್ಕಾರ ಅಂಕಿಸಂಖ್ಯೆಯನ್ನು ಬಹಿರಂಗ ಪಡಿಸಲು ಮೀನಾಮೇಷ ಎಣಿಸುತ್ತಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ.

ಗೋಹತ್ಯೆ ನಿಷೇಧದಿಂದ ರೈತರಿಗೆ ಲಾಭ ; ಸಚಿವ ಚವ್ಹಾಣ್

ದೀಪಾವಳಿಗೆ ಗೋಮಾತೆ ಪೂಜಿಸುತ್ತೀರಿ, ಸಂಕ್ರಾಂತಿಗೆ ಪೂಜೆ ಮಾಡ್ತೀರಿ ಮತ್ತೆ ಗೋಮಾತೆಯನ್ನು ಕಟ್ ಯಾಕ್ ಮಾಡ್ತೀರಿ, ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಪ್ರಶ್ನಿಸಿದರು.

ಸರ್ವಜ್ಞನ 501ನೇ ಜಯಂತಿ ಕಾರ್ಯಕ್ರಮ

ತಾಲ್ಲೂಕು ಕುಂಬಾರ ಸಂಘ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಕುಂಬಾರ ಓಣಿಯಲ್ಲಿರುವ ಕುಂಬಾರ ಸಮುದಾಯ ಭವನದಲ್ಲಿ ತ್ರಿಪದಿ ಕವಿ ಸರ್ವಜ್ಞನ 501ನೇ ಜಯಂತಿ ಕಾರ್ಯಕ್ರಮ ಫೆ.28 ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

ನಮ್ಮದು ಬೆಂಕಿ ಆರಿಸುವ ಸಂಸ್ಕೃತಿ

ಸಮಾಜವನ್ನು ಒಡೆಯುವ ಸಂಸ್ಕೃತಿ ತಮ್ಮದಲ್ಲ. ನಾವು ಬೆಂಕಿ ಹಚ್ಚುವವರಲ್ಲ. ಹಚ್ಚಿದ ಬೆಂಕಿಯನ್ನು ಆರಿಸುವವರು ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಕೇಸರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.