ಮುಳಗುಂದ : ಸಮೀಪದ ಸೊರಟೂರ ಗ್ರಾಮದ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸಂಕ್ರಾಂತಿಯ ದಿನ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ “ಸೂರ್ಯ ನಮಸ್ಕಾರವೇ ಜೀವನ ಶಕ್ತಿಯ ಆಧಾರ” ಕಾರ್ಯಕ್ರಮ ನಡೆಯಿತು.
ನಿಯಮ ಬದ್ಧವಾಗಿ ಸೂರ್ಯ ನಮಸ್ಕಾರದ 12 ವಿದಗಳ ಆಸನಗಳನ್ನ ಉಸಿರಾಟದ ಮೂಲಕ ಯೋಗ ಪಟುಗಳು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಎಸ್.ಆರ್.ಮಡಿವಾಳರ, ಶಿಕ್ಷಕ ಹೊನಕೇರಪ್ಪ ಗಾರವಾಡ ಸೂರ್ಯ ನಮಸ್ಕಾರ ಮಾಡಿಸಿದರು.ಸಿಬ್ಬಂದಿಯವರೂ ಸಹಕಾರ ನೀಡಿದರು.