ಉತ್ತರಪ್ರಭ ಸುದ್ದಿ
ಶಿರಹಟ್ಟಿ: ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘ ತಾಲೂಕು ಘಟಕ ಆಶ್ರಯದಲ್ಲಿ ತಾಲೂಕಿನ ಕಡಕೋಳ ಗ್ರಾಮದ ಡಾ. ಶೇಖರ ಹೈದ್ರಿ ಅವರ ಮಹಾಮನೆಯಲ್ಲಿ 2ನೇ ಮಾಸಿಕ ಸಭೆ ಜರಗಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಕಾರ್ಯಧ್ಯಕ್ಷ ಬಸವರಾಜ್ ತುಳಿ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸರಕಾರಿ ಯೋಜನೆಗಳನ್ನು ಸಮುದಾಯದ ಕಟ್ಟಕಡೆಯ ಬಡ ಕುಟುಂಬಕ್ಕೂ ಒದಗಿಸಿಕೊಡುವುದೇ ಸಮಾಜ ಸಂಘಟನೆಯಾಗಿದೆ. ಯುವಕರು ಸಾಮಾಜ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ಹಿಂದುಳಿದ ಸಮುದಾಯದ ಜನರನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬಸವರಾಜ್ ಪಲ್ಲೆದ ಮಾತನಾಡಿ, ತಾಲೂಕಿನ ಹಳ್ಳಿಗಳಲ್ಲಿ ಗ್ರಾಮ ಘಟಕ ರಚನೆ, ವಧು ವರರ ಸಹಾಯಕೇಂದ್ರ, ಕುಟುಂಬಗಣತಿ ಸೇರಿದಂತೆ ವಿವಿಧ ರೀತಿಯಲ್ಲಿ ಕೆಲಸ ಮಾಡುವ ಕಾರ್ಯ ತಾಲೂಕ ಸಭೆಯಿಂದ ನೆಡಲಿದೆ ಎಂದರು.

ತಾಲೂಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಡವಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶರಣಪ್ಪ ಹೊಂಬಾಳ ವಂದಿಸಿದರು

ಸಭೆಯನ್ನು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಸವರಾಜ ಶಾಲಿ, ನ್ಯಾಯವಾದಿ ಎಸ್ ಎಸ್ ಪಾಟೀಲ್, ಚನ್ನವಿರಗೌಡ ಪಾಟೀಲ್,ಹಾಲಪ್ಪ ದುಗ್ಗಾಣಿ, ಚೆನ್ನಬಸಗೌಡ ಪಾಟೀಲ, ಶರಣಪ್ಪ ಹೊಂಬಾಳ, ಜಗದೀಶ ಸಾಸಲವಾಡ, ದೇವರಾಜ್ ಮೇಟಿ, ಸುರೇಶ್ ಬ್ಯಾಲಹುಣಸಿ, ಕಾಶಿನಾಥ್ ಗಿಡ್ಡವೀರಪ್ಪನವರು ಸೇರಿದಂತೆ ಕಡಕೋಳ ಗ್ರಾಮದ ಹಿರಿಯರು ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಕೋಟೆ ನಾಡಿನಲ್ಲಿ ತುಂತುರು ಮಳೆ

ಗಜೇಂದ್ರಗಡ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಗಜೇಂದ್ರಗಡದಲ್ಲಿ ತುಂತುರು ಮಳೆ ಸುರಿಯಿತು. ಗಜೇಂದ್ರಗಡದಲ್ಲಿ ಬೆಳಿಗ್ಗೆಯಿಂದಲೇ ದಟ್ಟನೆಯ…

ನಗರ ಸಭೆ ಚುನಾವಣೆ: 15,26 ನೇ ವಾರ್ಡನಲ್ಲಿ  ಬಿಜೆಪಿ 9, 16,10 ನೇ ವಾರ್ಡಿನಲ್ಲಿ  ಕಾಂಗ್ರೇಸ್ ಮತ್ತು 21 ನೇ ವಾರ್ಡಿನಲ್ಲಿ ಪಕ್ಷೇತರ

ನಗರ ಸಭೆ ಚುನಾವಣೆ: 15,26 ನೇ ವಾರ್ಡನಲ್ಲಿ  ಬಿಜೆಪಿ 9, 16,10 ನೇ ವಾರ್ಡಿನಲ್ಲಿ  ಕಾಂಗ್ರೇಸ್…

ಧಾರವಾಡ ಧಾರವಾಡ : ಜಿಲ್ಲೆಯೂ ಆರೇಂಜ್ ಜೋನ್ನಮಲ್ಲಿ ಇರುವ ಕಾರಣ ಹಾಗೂ ಹುಬ್ಬಳ್ಳಿಯಲ್ಲಿ ಕಂಟೋನ್ಮೆಂಟ್ ಜೋನ್ ಇರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹೊರತು ಪಡಿಸಿ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಧಾರವಾಡ : ಜಿಲ್ಲೆಯೂ ಆರೇಂಜ್ ಜೋನ್ನಮಲ್ಲಿ ಇರುವ ಕಾರಣ ಹಾಗೂ ಹುಬ್ಬಳ್ಳಿಯಲ್ಲಿ ಕಂಟೋನ್ಮೆಂಟ್ ಜೋನ್ ಇರುವ…

ಲಾರಿಯಲ್ಲಿದ್ದ ಮಶೀನ್ ಗೆ ಬೆಂಕಿ

ಚಲಿಸುತ್ತಿದ್ದ ಲಾರಿಯಲ್ಲಿದ್ದ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.