ಉತ್ತರಪ್ರಭ ಸುದ್ದಿ
ಶಿರಹಟ್ಟಿ: ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘ ತಾಲೂಕು ಘಟಕ ಆಶ್ರಯದಲ್ಲಿ ತಾಲೂಕಿನ ಕಡಕೋಳ ಗ್ರಾಮದ ಡಾ. ಶೇಖರ ಹೈದ್ರಿ ಅವರ ಮಹಾಮನೆಯಲ್ಲಿ 2ನೇ ಮಾಸಿಕ ಸಭೆ ಜರಗಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಕಾರ್ಯಧ್ಯಕ್ಷ ಬಸವರಾಜ್ ತುಳಿ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸರಕಾರಿ ಯೋಜನೆಗಳನ್ನು ಸಮುದಾಯದ ಕಟ್ಟಕಡೆಯ ಬಡ ಕುಟುಂಬಕ್ಕೂ ಒದಗಿಸಿಕೊಡುವುದೇ ಸಮಾಜ ಸಂಘಟನೆಯಾಗಿದೆ. ಯುವಕರು ಸಾಮಾಜ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ಹಿಂದುಳಿದ ಸಮುದಾಯದ ಜನರನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬಸವರಾಜ್ ಪಲ್ಲೆದ ಮಾತನಾಡಿ, ತಾಲೂಕಿನ ಹಳ್ಳಿಗಳಲ್ಲಿ ಗ್ರಾಮ ಘಟಕ ರಚನೆ, ವಧು ವರರ ಸಹಾಯಕೇಂದ್ರ, ಕುಟುಂಬಗಣತಿ ಸೇರಿದಂತೆ ವಿವಿಧ ರೀತಿಯಲ್ಲಿ ಕೆಲಸ ಮಾಡುವ ಕಾರ್ಯ ತಾಲೂಕ ಸಭೆಯಿಂದ ನೆಡಲಿದೆ ಎಂದರು.
ತಾಲೂಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಡವಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶರಣಪ್ಪ ಹೊಂಬಾಳ ವಂದಿಸಿದರು
ಸಭೆಯನ್ನು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಸವರಾಜ ಶಾಲಿ, ನ್ಯಾಯವಾದಿ ಎಸ್ ಎಸ್ ಪಾಟೀಲ್, ಚನ್ನವಿರಗೌಡ ಪಾಟೀಲ್,ಹಾಲಪ್ಪ ದುಗ್ಗಾಣಿ, ಚೆನ್ನಬಸಗೌಡ ಪಾಟೀಲ, ಶರಣಪ್ಪ ಹೊಂಬಾಳ, ಜಗದೀಶ ಸಾಸಲವಾಡ, ದೇವರಾಜ್ ಮೇಟಿ, ಸುರೇಶ್ ಬ್ಯಾಲಹುಣಸಿ, ಕಾಶಿನಾಥ್ ಗಿಡ್ಡವೀರಪ್ಪನವರು ಸೇರಿದಂತೆ ಕಡಕೋಳ ಗ್ರಾಮದ ಹಿರಿಯರು ಅನೇಕರು ಭಾಗವಹಿಸಿದ್ದರು.