ಉತ್ತರಪ್ರಭ

ವರದಿ:ವಿಠ್ಠಲ ಕೆಳೊತ

ಮಸ್ಕಿ: ರಾಯಚೂರು ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ಶರಣೇಗೌಡ ಪಾಟೀಲ್ ಬಯ್ಯಾಪೂರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಪಟಾಕಿ ಸಿಡಿಸಿ ಕಾಂಗ್ರೆಸ್ ಪಕ್ಷಕ್ಕೆ, ಗೆಲುವು ಸಾಧಿಸಿದ ಬಯ್ಯಾಪುರ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು.
ಈ ವೇಳೆ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಅವರು ಮಾತನಾಡಿ, ರಾಯಚೂರು ಕೊಪ್ಪಳದಲ್ಲಿ ಕಾಂಗ್ರೆಸ್ ಮುಖಂಡರು ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ‌. ಇಲ್ಲಿನ ಕಾಂಗ್ರೆಸ್ ಕೋಟೆಗೆ ಕೆಡವಲು ವಿರೋಧಿ ಪಕ್ಷ ಎಷ್ಟೇ ಪ್ರಯತ್ನ ಮಾಡಿದರು. ಸಫಲ ಆಗಲ ಕೊನೆಗೆ ಕಾಂಗ್ರೆಸ್ ಪಕ್ಷವೇ ಜಯ ಸಾಧಿಸುತ್ತದೆ ಎಂದರು.


ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ಸಿದ್ದಣ್ಣ ಹೂವಿನಭಾವಿ, ಎಚ್.ಬಿ.ಮುರಾರಿ, ಮೈಬುಸಾಬ ಮುದ್ದಾಪೂರು, ವೆಂಕಟರೆಡ್ಡಿ ಹಾಲಾಪುರ, ಬಸನಗೌಡ ಮುದವಾಳ, ಕೃಷ್ಣಾ ಚಿಗರಿ‌, ಆನಂದ ವಿರಾಪೂರ, ಪಂಪನಗೌಡ ಗುಡದೂರು, ಚಾಂದಶೇಡ್ಮಿ, ಮಲ್ಲಯ್ಯ ಬಳ್ಳಾ, ನಾಗರಬೆಂಚಿ ಮಲ್ಲಪ್ಪ, ಸುರೇಶ್ ಬ್ಯಾಳಿ, ಬಸನಗೌಡ ಮಾರಲದಿನ್ನಿ, ಮಲ್ಲನಗೌಡ್ರು ಗೋನಾಳ, ಶರಣಪ್ಪ ಎಲಿಗಾರ, ಆಲಂಪಾಷ, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You May Also Like

ಎಲ್ಲರಿಗೂ ಕೊರೋನಾ ವಿಮೆ ಒದಗಿಸಿ: ಎಚ್.ಕೆ. ಪಾಟೀಲ್ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ದಿನೆದಿನೇ ಸೋಂಕಿನ ಹಬ್ಬುವಿಕೆ ಹೆಚ್ಚುತ್ತಿದೆ. 40 ಸಾವಿರ ಪ್ರಕರಣಗಳ ಟೆಸ್ಟ್ ಫಲಿತಾಂಶ ಬಾಕಿಯಿದೆ.…

ಕೊರೊನಾ ಚಿಕಿತ್ಸಾ ವೆಚ್ಚಕ್ಕೆ ಸಿದ್ದರಾಮಯ್ಯ ವಿರೋಧ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ @CMofKarnataka ನಿಗದಿಪಡಿಸಿರುವ ವೆಚ್ಚದ ವಿವರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ. ಒಂದು…

ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಂಧೆ

ಲಕ್ಷ್ಮೇಶ್ವರ :ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಂಧೆ ನಡೆಯುತ್ತಿದ್ದು ಅಕ್ಕಿಯ ಲೋಡಿನ ಗಾಡಿಯನ್ನು…

ಆಗಸ್ಟ್ ನಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ

ಕೊರೊನಾ ತಡೆಯಲು ಲಾಕ್ ಡೌನ್ ಸಂದರ್ಭದಲ್ಲಿ ವಿಮಾನ ಸಂಚಾರವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು. ಈ ನಡುವೆ ದೇಶೀಯ ವಿಮಾನ ಯಾನಕ್ಕೆ ಅವಕಾಶವನ್ನೂ ನೀಡಿದೆ. ಆದರೆ, ಆಗಸ್ಟ್ ತಿಂಗಳಿನಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅವಕಾಶವನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.