ರೋಣ: ಸಾಹಿತ್ಯ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯು ನಡೆಯಿತು. ಈ ಸಭೆಯು ಶ್ರೀ ಬಸವಂತಪ್ಪ ಹೆಚ್. ತಳವಾರ ರೋಣ ತಾಲೂಕ ನಾಯಕ ಸಂಘದ ಅಧ್ಯಕ್ಷರು ಇವರು ರೋಣ ತಾಲೂಕಿನ ಹಳ್ಳಿಗಳ ಜಾತ್ರೆಯ ಪೋಸ್ಟರ ದೇಣಿಗೆ ಪುಸ್ತಕ ಉದ್ಘಾಟಿಸಿ ಮಾತನಾಡಿದರು. ಶ್ರೀ ವಾಲ್ಮೀಕಿ ಜಾತ್ರೆಯ ದೇಣಿಗೆ ಪುಸ್ತಕ ಹಾಗೂ ಪೋಷ್ಟರ್‍ಗಳನ್ನು ಎಲ್ಲಾ ಹಳ್ಳಿಗೆ ಮುಟ್ಟಿಸಿ ದೇಣಿಗೆ ಸಂಗ್ರಹ ಮಾಡಿಕೊಡಬೇಕೆಂದು ವಾಲ್ಮೀಕಿ ಜನಾಂಗದವರಿಗೆ ಕರೆ ನೀಡಿದರು.

ರೋಣ ತಾಲೂಕಿನ ಹಳ್ಳಿಗಳ ಜಾತ್ರೆಯ ಪೋಸ್ಟರ ದೇಣಿಗೆ ಪುಸ್ತಕ ಉದ್ಘಾಟನೆ

ಶ್ರೀ ಪ್ರಸನ್ನಂದಾ ಮಹಾಸ್ವಾಮಿಗಳು ಅಪ್ಪಣೆ ಮೇರೆಗೆ ಎಲ್ಲಾ ಕೆಲಸಗಳನ್ನು ನಿಂತು ಮಾಡಿಕೊಡುವೆ ಎಂದು ಭರವಸೆ ನೀಡಿದರು. ಎಂತಾ ಕಷ್ಟ ಬಂದರು ವಾಲ್ಮೀಕಿ ಜನಾಂಗದವರಿಗೆ ಏಳಿಗೆಗಾಗಿ ಶ್ರಮಪಟ್ಟು ದುಡಿಯುತ್ತಿವೆ ಎಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಯಾವ ರೀತಿ ಗ್ರಾಮದ ವಾಲ್ಮೀಕಿ ಜನಾಂಗದವರಿಗೆ 5 ಜನ ಕಮೀಟಿ ಮಾಡಿ ದೇಣಿಗೆ ಪುಸ್ತಕವನ್ನು ಚಾಲನೆ ನೀಡಿದರು. ಈ ಸಭೆಯಲ್ಲಿ ಉಮೇಶ ಗೌಡರ, ಜಾತ್ರಾ ಸಮಿತಿ ಅಧ್ಯಕ್ಷರು ಮಾತನಾಡಿ ಎಲ್ ಹಳ್ಳಿಗಳಿಗೆ ಹೋಗಿ ದೇಣಿಗೆ ಪುಸ್ತಕವನ್ನು ಕೊಟ್ಟು ಶ್ರಮಿಸಿವೆ ಎಂದು ಅವರು ಮಾತನಾಡಿದರು.


ಈ ಸಂದರ್ಭದಲ್ಲಿ ಬಸವರಾಜ ತಳವಾರ ಉಪಾಧ್ಯಕ್ಷರು, ಶಿವಕುಮಾರ ತಳವಾರ, ಸಂತೋಷ ಕಡಿವಾಲ, ಹನಮಪ್ಪ ತಳವಾರ, ಪಿ. ಪಿ. ಜಿಗಳೂರ, ನಾಗಪ್ಪ ತಳವಾರ, ಬಾಳಪ್ಪ ತಳವಾರ, ರಾಜು ಅಮರಗೋಳ, ಗೋವಿಂದ ಜುಮ್ಮನವರ, ಯಲ್ಲಪ್ಪ ಕೋಡಿ, ಮುಂತಾದವರು ಸಭೆಯಲ್ಲಿದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು 10 ಕೊರೊನಾ ಪಾಸಿಟಿವ್: ಶತಕ ದಾಟಿದ ಸೋಂಕಿತರ ಸಂಖ್ಯೆ!

ಜಿಲ್ಲೆಯಲ್ಲಿಂದು ಮತ್ತೆ 7 ಕೊರೊನಾ ಪಾಸಿಟಿವ್ ಪ್ರಕರಣ ದೃಡಪಟ್ಟಿದ್ದು ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. ಈವರೆಗೆ ಕೇಸ್ ಗಳು ಗುಣಮುಖ ಹೊಂದಿ ಬಿಡುಗಡೆಯಾಗಿದ್ದು, ಇದರಲ್ಲಿ ಸಕ್ರೀಯ ಪ್ರಕರಣಗಳಿವೆ. ಇದರಲ್ಲಿ 2 ಕೇಸ್ ಗಳು ಮೃತ ಪಟ್ಟಿವೆ.

ಇಂದು ಗದಗನಲ್ಲಿ 6 ಕೊರೊನಾ ಪಾಸಿಟಿವ್..!

ಗದಗ: ಇಂದು ಜಿಲ್ಲೆಯಲ್ಲಿ 6 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಈ ಮೂಲಕ ಸೋಂಕಿತರ ಸಂಖ್ಯೆ…

ಪಿಎಂ ಕೇರ್ಸ್ ಯಾರೊಬ್ಬರ ಮನೆಯ ಆಸ್ತಿಯಲ್ಲ: ಸಿದ್ದರಾಮಯ್ಯ

ಬೆಂಗಳೂರು: ದೇಶದ ಜನರ ದೇಣಿಗೆಯ ಪಿಎಂ ಕೇರ್ಸ್ ಫಂಡ್ (PMCaresFund) ಯಾರೊಬ್ಬರ ಮನೆಯ ಆಸ್ತಿ ಅಲ್ಲ. ಅದು ಈ ದೇಶದ ಪ್ರಜೆಗಳ ದುಡ್ಡು, ಅದು ಸದುಪಯೋಗವಾಗಬೇಕು ಎಂದು ಹೇಳುವ ಅಧಿಕಾರ ಪ್ರತಿಯೊಬ್ಬರಿಗೆ ಇದೆ. ಅದನ್ನೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾಗಾಂಧಿಯವರು ಹೇಳಿದ್ದಾರೆ ತಪ್ಪೇನಿದೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕಾಲೇಜ್ ಆರಂಭಕ್ಕೆ ಸರ್ಕಾರದ ಮಾರ್ಗಸೂಚಿ

ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟ ಕಾಲೇಜು ಆರಂಭಗೊಳ್ಳುತ್ತಿವೆ‌. ಹೀಗಾಗಿ ಕಾಲೇಜು ಆರಂಭಗೊಳ್ಳುತ್ತಿರುವ ಹಿನ್ನೆಲೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ ಹಿರೇಮಠ ಕೋವಿಡ್-19 ಹಿನ್ನಲೆಯಲ್ಲಿ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನದ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.