ಬೆಂಗಳೂರು: ಒಂದು ವಾರದ ಹಿಂದೆ ಧಾರವಾಡ ಎಸ್ ಡಿ ಎಮ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೊರೋನಾ ಸ್ಪೋಟಗೊಂಡಿತ್ತು, ಇದರಿಂದ ಪಾಲಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಆತಂತ ಉಂಟುಮಾಡಿತ್ತು. ಅದೇ ರೀತಿಯಲ್ಲಿ ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರಕರಣಗಳು ಪತ್ತೆಯಾಗಿದ್ದು. ವಿಶೇಷವಾಗಿ ವೈದ್ಯಕೀಯ ಕಾಲೇಜುಗಳಲ್ಲಿ ಬಹಳಷ್ಟು ಪ್ರಕರಣಗಳು ಕಂಡು ಬಂದ ಹಿನ್ನಲೆ. ಇಂದು ರಾಜ್ಯ ಸರ್ಕಾರ ಶೈಕ್ಷಣಿಕ ಸಭೆ ಸಮಾರಂಭಗಳನ್ನು ಮೂಂದುಡುವಂತೆ ಕೆಲವು ಮಾರ್ಗ ಸೂಚಿಗಳನ್ನು ಸೂಚಿಸಿ ಆದೇಶಿಸಿದೆ.