ರೋಣ : ತಾಲೂಕಿನ ಡಿ ಪೌಲ್ ಅಕ್ಯಾಡಮಿ ಶಾಲೆಯ ಶಿಕ್ಷಕನನ್ನು ಕೆಲಸದಿಂದ ವಜಾಗೊಳಿಸಿದ ಕಾರಣ ಮನನೊಂದು ಆತ್ಮ ಹತ್ಯೆಕ್ಕೆ ಯತ್ನಿಸಿದ ಘಟನೆ ನಡೆದಿದೆ.ಪಟ್ಟಣದ ಹೊರವಲಯದಲ್ಲಿ ಇರುವ ಡಿ ಪೌಲ್ ಅಕ್ಯಾಡಮಿ ಶಾಲೆಯಲ್ಲಿ ಬಹುದಿನಗಳಿಂದ ಒಂದಲ್ಲ ಒಂದು ದರ್ಘಟನೆಗಳು ನಡೆಯುತ್ತಲೇ ಇರುತ್ತವೆ. ಗುರುವಾರ ಸಹ ಶಿಕ್ಷಕನಾಗಿ ಸೇವೆ ಯಲ್ಲಿದ್ದ ಪಿ ನಾಗರಾಜ ಎಂಬ ವ್ಯಕ್ತಿಯನ್ನು ಸೇವೆಯಿಂದ ವಜಾಗೊಳಿಸಿ ಬೇರೆ ಶಿಕ್ಷಕರನ್ನು ನೇಮಕ ಮಾಡಿಕೊಂಡಿರುತ್ತಾರೆ.
ಮನನೊಂದ ನಾಗಾರಾಜನು ಸರ್ ಹೀಗೆ ಮಧ್ಯದಲ್ಲಿ ನನ್ನನ್ನು ವಜಾಮಾಡಿದರೆ ಮುಂದೆ ನನ್ನ ಭವಿಷ್ಯಕ್ಕೆ ತುಂಬಾ ತೊಂದರೆಯಾಗುವದು ಎಂದು ಫಾದರಗೆ ಮನವಿ ಮಾಡಿಕೊಂಡ . ಫಾದರ್ ನೀನು ಈ ಸಧ್ಯ ಬಿಡು ನಿನಗೆ ಏಪ್ರಿಲ್ ವರೆಗೂ ವೇತನ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಅಷ್ಟೇ ಅಲ್ಲಾ ನನ್ನ ಪಿ ಎಫ್ ದುಡ್ಡು ಕೇಳಿದರೆ ನಾಲ್ಕು ಸಾವಿರ ದುಡ್ಡು ಕೇಳುವರು, ಹಾಗೂ ನನ್ನ ನಾಲ್ಕು ಚೆಕ್ ಪಡೆದು ಅದರಲ್ಲಿ ನನ್ನ ಖಾತೆಯಿಂದ 8000 ಸಾವಿರ ಹಣ ಪಡೆದಿದ್ದಾರೆ ಇದನ್ನೆಲ್ಲಾ ವಿಚಾರಿಸಲು ಹೋದರೆ ನನಗೆ ಅವಾಜ್ ಹಾಕಿ ಏನ್ ಮಾಡ್ತಿಯಾ ನೀನು ಮಾಡ್ಕೋ ಹೋಗು ಎಂದು ಗದರಿಸುವರು ಆದಕಾರಣ ನಾನು ಅಸಹಾಯಕನಾಗಿ ಅಲ್ಲಿಯೇ ವಿಷ ಸೇವಿಸಿ ಬಿದ್ದರೂ ಕೂಡಾ ಖ್ಯಾರೇ ಎನ್ನದ ಆಡಳಿತ ಮಂಡಳಿಯವರು ನನ್ನನ್ನು ನೋಡಿಯೂ ಸ್ವಲ್ಪವು ಮಾನವೀಯತೆ ತೋರದೆ ಹಾಗೇ ಹೋದರು ಎಂದು ನೇರವಾಗಿ ಆರೋಪ ಮಾಡಿದ ನಾಗರಾಜ.
ಅಲ್ಲಿಂದ ಹೇಗೂ ಮಾಡಿ ತಾಲೂಕ ಸರಕಾರಿ ಆಸ್ಪತ್ರೆ ಹೋಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಿಸಿ ತನಿಖೆ ನಡೆಸಿದ್ದಾರೆ.
