ಬೆವರಿನ ಫಲದಲ್ಲಿ ಬೇರೆಯವರ ಸಂಕಷ್ಟಕ್ಕೂ ಸ್ಪಂದಿಸಿದ ರೋಣದ ಹೂಗಾರ ಮೂಕಪ್ಪ
ಪ್ರಕಾಶ್ ಗುದ್ನೆಪ್ಪನವರ್
ರೋಣ: ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ, ಕೊಟ್ಟು ಕೆಟ್ಟಿತೆನಬೇಡ, ಕೊಟ್ಟು ಕುದಿಯಲು ಬೇಡ, ಕೊಟ್ಟು ಹಂಗಿಸಬೇಡ… ಹೀಗೆ ದಾನದ ಬಗ್ಗೆ ೧೨ನೇ ಶತಮಾನದಲ್ಲಿ ಶರಣರು ಸಾರಿ ಹೇಳಿದ್ದಾರೆ. ಆದರೆ ಪಟ್ಟಣದ ವ್ಯಕ್ತಿಯೊಬ್ಬರು ದುಡಿದ ಬೆವರಿನ ಫಲದಲ್ಲಿ ಸಂಕಷ್ಟದಲ್ಲಿರುವವರಿಗೆ, ನೊಂದವರಿಗೆ ನೆರವು ನೀಡಿ, ಶರಣರ ನಿಜ ನಡೆಯನ್ನು ಪಾಲಿಸುವ ಮೂಲಕ ಮಾದರಿಯಾಗಿದ್ದಾರೆ.

ನಮ್ಮ ನಗರದ ಸೂಡಿ ಕ್ರಾಸಿನಲ್ಲಿ ಹೂವು ಮಾರಿಕೊಂಡು ಉಪಜೀವನ ಮಾಡುತ್ತಿರುವ ಮೂಕಪ್ಪ, ಬಡತನ ಎಂದರೆ ಏನೆಂಬುದನ್ನು ಅರಿತು ಬಡತನದ ಬೆಗೆಯಲ್ಲಿ ಬೆಂದು ಬೆಳದ ವ್ಯಕ್ತಿ. ತಾನು ಅಲ್ಪ ಸ್ವಲ್ಪ ದುಡಿದ ದುಡಿಮೆಯ ಫಲದಲ್ಲಿ ಕರೋನ ವಾರಿಯರ್ಸ್ಗೆ ಒಂದು ದಿನ ಊಟೋಪಚಾರ ಮಾಡಿಸಿದರೆ, ಇನ್ನೊಂದು ಗುಡಿಸಲುಗಳಲ್ಲಿರುವ ಚನ್ನದಾಸರ ಕುಟುಂಬಗಳಿಗೆ ಪಹಾರ ನೀಡಿದ್ದರು.
ಅಷ್ಟೇ ಅಲ್ಲದೇ ಭಾನುವಾರ ತಾಡಪತ್ರೆ ಹೊಲೆದು ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ನೀಡಿರುವುದು ಕಂಡು ಬಂದಿತು. ಯಾವುದೇ ಪ್ರಚಾರ ಹಂಗಿಲ್ಲದೇ ನಿಷ್ಕಲ್ಮಶ ಮನಸ್ಸಿನಿಂದ ಈ ಸೇವಾ ಕಾರ್ಯದ ಮೂಲಕ ಮೂಕಪ್ಪ ಮಾದರಿಯಾಗಿದ್ದಾರೆ. ಕೈಲಾದಷ್ಟು ಸಹಾಯ ಮಾಡುತ್ತಿರುವ ಮೂಕಪ್ಪ ಅವರೇನು ದೊಡ್ಡ ಶ್ರೀಮಂತರಲ್ಲ. ಹೂವು ಮಾರಿ ಜೀವನ ಸಾಗಿಸುವ ಕುಟುಂಬ ವರದ್ದು. ಆದರೆ ಬಡತನದ ಬೇಗೆಯಲ್ಲಿ ಬೆಂದು ಬೆಳೆದವರಾದ ಮೂಕಪ್ಪ ಅವರಿಗೆ ಜೀವನದಲ್ಲಿ ಬಡತನವೇ ಬಹುದೊಡ್ಡ ಪಾಠ ಕಲಿಸಿದೆ. ಈ ಕಾರಣಕ್ಕಾಗಿ ಕೊರೊನಾದ ಸಂಕಷ್ಟದಲ್ಲಿ ಕೈಲಾದಷ್ಟಾದರೂ ಸ್ಪಂದಿಸಬೇಕು ಎನ್ನುವ ಕಾರ್ಯಕ್ಕೆ ಅಣಿಯಾಗಿದ್ದಾರೆ. ಮೂಕಪ್ಪ ಅವರ ಬಡವರ ಹಸಿವು ನಿಗಿಸುವ ಕಾರ್ಯ ವೈಖರಿ ಸಾರ್ವಜನಿಕರು ಮೆಚ್ಚುಗೆಗೆ ಪಾತ್ರರಾಗಿದ್ದಾನೆ.
ಒಟ್ಟಿನಲ್ಲಿ ದುಡಿಯುವ ಕೈ ಕಟ್ಟಿ ಹಾಕಿದ ಕರೋನ ಮಹಾಮಾರಿಯ ಹೊಡೆತಕ್ಕೆ ಎಷ್ಟೋ ಬಡ ಜೀವಿಗಳು ನಲುಗಿ ಹೋಗಿರುತ್ತವೆ. ಮದ್ಯೆ ಮೂಕಪ್ಪ ಹೂಗಾರ ತಮಗೆ ಯಾವುದೇ ಪ್ರಚಾರ ಬೇಡ. ಪ್ರಚಾರಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ ದು ಹೇಳಿದ್ದಾರೆ. ಇಂದು ಕೊರೊನಾ ವಿಚಾರ ಅದೆಷ್ಟೋ ಜನರಿಗೆ ಪ್ರಚಾರದ ದಾಳವಾಗಿರುವ ಸಂದರ್ಭದಲ್ಲಿ ಮೂಕಪ್ಪ ಅವರ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು.


ಅವರ ಖುಷಿಯಲ್ಲಿ ತನ್ನ ಖುಷಿ ಕಂಡುಕೊಳ್ಳುವ ಮೂಕಪ್ಪ
ದುಡಿಯುವ ಕೈ ಕಟ್ಟಿ ಹಾಕಿರುವ ಕರೋನ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರನ್ನು ಗುರುತಿಸಿ ಬಡತನದ ಹಸಿವು ಅರಿತ ಮೂಕಪ್ಪ ಹೂಗಾರ ತಾನು ದುಡಿದ ಅಲ್ಪ ಸ್ವಲ್ಪ ದುಡಿಮೆಯಿಂದ ಬಂದAತಹ ಹಣದಲ್ಲಿ ದಿನಸಿ ಸಾಮಾನುಗಳನ್ನು ನೀಡಿ ಅವರ ಖುಷಿಯಲ್ಲಿ ತಾನು ಖುಷಿ ಕಂಡುಕೊಳ್ಳುತ್ತಾನೆ.
-ಗಂಗಯ್ಯ ಗುಮಟಿ, ಸ್ಥಳೀಯರು


ಪ್ರಚಾರಕ್ಕಾಗಿ ಮಾಡುತ್ತಿಲ್ಲ
ನಮಗೆ ಬಡತನದ ಹಸಿವು ಯಾವ ರೀತಿ ಇದೆ ಎಂಬ ಅನುಭವವಿದೆ. ದುಡಿಮೆ ಇಲ್ಲದೇ ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಕುಟುಂಬಗಳನ್ನು ಗುರುತಿಸಿ ಅಂತವರಿಗೆ ನಾವು ವ್ಯಾಪಾರ ಮಾಡಿ ಬಂದAತಹ ಅಲ್ಪ ಲಾಭದಲ್ಲಿ ಆಹಾರ ಹಾಗೂ ದಿನಸಿ ಸಾಮಾನುಗಳನ್ನು ನೀಡುತ್ತಿದ್ದೇನೆ. ನನಗೆ ಯಾವುದೇ ಪ್ರಚಾರ ಬೇಡ. ನಾನು ಪ್ರಚಾರಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ.
-ಮೂಕಪ್ಪ ಹೂಗಾರ, ಸ್ಥಳೀಯರು

Leave a Reply

Your email address will not be published. Required fields are marked *

You May Also Like

ಗದಗ: ನಗರಾಭಿವೃದ್ಧಿ ಕೋಶ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ಉತ್ತಮ ಆಡಳಿತ ನಡೆಸುತ್ತಿರುವ ರಾಜ್ಯ ಯಾವುದು ಗೊತ್ತಾ?

ಬೆಂಗಳೂರು : ದೇಶದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದೆ ಈ ಪೈಕಿ ಕೇರಳ ಹಾಗೂ ಗೋವಾ ರಾಜ್ಯಗಳು ಮೊದಲ ಸ್ಥಾನ ಗಳಿಸಿವೆ.

ಶೋಷಿತ ಸಮುದಾಯಗಳು ಮೀಸಲಾತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಿ

ರಾಜ್ಯದ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟದ ಹಾದಿ ಹಿಡಿದಿವೆ. ಇದಕ್ಕೆ ನಮ್ಮ ವಿರೋಧ ಖಂಡಿತಾ ಇಲ್ಲ. ಶೋಷಿತ ಸಮುದಾಯಗಳು ಮೀಸಲಾತಿ ಪಡೆಯುವುದು ಅವುಗಳ ಸಂವಿಧಾನಬದ್ಧ ಹಕ್ಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು 6 ರಿಂದ 8 ನೇ ತರಗತಿ ಆರಂಭದ ಬಗ್ಗೆ ನಿರ್ಧಾರ

ಆರರಿಂದ ಎಂಟನೇ ತರಗತಿಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಲು ಸರ್ಕಾರ ಚಿಂತನೆ ನಡೆದಿದೆ. ಶಾಲೆ ಪುನಾರಂಭ ಕುರಿತಂತೆ ಇಂದು ಮಹತ್ವದ ಸಭೆ ನಡೆಯಲಿದೆ.