ಮುಳಗುಂದ: ಜೂನ್ 8 ಮತ್ತು 9 ರಂದು ನಡೆಯಬೇಕಿದ್ದ ಗದಗ ತಾಲೂಕಿನ ಹೊಸಳ್ಳಿ ಬೂದೀಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನ ಕೋವಿಡ್-19 ಕಾರಣ ಸರ್ಕಾರದ ಸೂಚನೆಯಂತೆ ರದ್ದುಪಡಿಸಲಾಗಿದೆ. ಭಕ್ತರು ಅಂದು ಮನೆಯಲ್ಲಿಯೇ ಪೂಜಾ ಕೈಂಕರ್ಯ ಮಾಡಿಕೋಳ್ಳಬೇಕು ಎಂದು ಶ್ರೀಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You May Also Like
11 ಎಕರೆ ಹೊಲದಾನ್ ಗೋವಿನ ಜೋಳ ಬೆಂಕಿಗೆ ಆಹುತಿ!
ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳ ಸುಟ್ಟು ಭಸ್ಮಗೊಂಡ ಘಟನೆ ಗದಗ ಜಿಲ್ಲೆಯ ನಾಗಾವಿ ತಾಂಡಾದಲ್ಲಿ ನಡೆದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ನಾಶವಾಗಿದೆ. ಲಕ್ಷ್ಮಣ್ ಪವಾರ್ ಎಂಬುವರಿಗೆ ಸೇರಿದ 11 ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಂದಾಜು 2.5 ಲಕ್ಷ ರೂ. ಮೌಲ್ಯದ ಬೆಳೆ ನಾಶವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದಿಸಲು ಪ್ರಯತ್ನಿಸಿದರು.
- ಉತ್ತರಪ್ರಭ
- November 23, 2020
ತಾಂಡಾ ಅಭಿವೃದ್ಧಿ ನಿಗಮದ ಉಪಯೋಗ ಪಡೆದುಕೊಳ್ಳಿ: ಶಾಸಕ ರಾಮಣ್ಣ ಲಮಾಣಿ
ಪ್ರತಿಯೊಂದು ಗ್ರಾಮಗಳಲ್ಲಿ ತಾಂಡಾ ಅಭಿವೃದ್ಧಿ ನಿಗಮದಿಂದ ಸಿಸಿ ರಸ್ತೆ, ಸಮುದಾಯ ಭವನ ಸೇರಿದಂತೆ ಅನೇಕ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು ತಾಂಡಾದ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
- ಉತ್ತರಪ್ರಭ
- April 19, 2021
ಶಾರ್ಟ್ ಸರ್ಕ್ಯೂಟ್: ಭಾರತ್ ಗ್ಯಾಸ್ ವಿತರಣಾ ಕಚೇರಿಯಲ್ಲಿ ಬೆಂಕಿ!
ಶಾರ್ಟ್ ಸರ್ಕ್ಯೂಟ್ ನಿಂದ ಗ್ಯಾಸ್ ಕಚೇರಿಗೆ ಬೆಂಕಿ ಬಿದ್ದ ಘಟನೆ ಗದಗ ನಗರದಲ್ಲಿ ನಡೆದಿದೆ. ಇಲ್ಲಿನ ಭಾರತ್ ಗ್ಯಾಸ್ ಆಫೀಸಿಗೆ ಬೆಂಕಿ ಬಿದ್ದಿದ್ದು,ಯಾವುದೇ ಪ್ರಾಣ ಹಾನಿ ಸಂಭವಿಸದೇ ಭಾರಿ ಅನಾಹುತ ತಪ್ಪಿದಂತಾಗಿದೆ.
- ಉತ್ತರಪ್ರಭ
- April 25, 2021