ಸಿಡ್ನಿ: ಆಸ್ಟೇಲಿಯಾದಲ್ಲಿ ಇಲಿಗಳ ಹಾವಳಿಯಿಂದ 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆಯಂತೆ! ಆಸ್ಟ್ರೇಲಿಯಾ ಪೂರ್ವದ 3 ರಾಜ್ಯಗಳ ಮೇಲೆ ಲಕ್ಷಾಂತರ ಸಂಖ್ಯೆಯಲ್ಲಿ ಇಲಿಗಳು ದಾಳಿ ಮಾಡುತ್ತಿದ್ದು, ಸಾವಿರಾರು ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳನ್ನ ಇಲಿಗಳು ತಿಂದುಹಾಕಿವೆ. ಈ ಸಮಸ್ಯೆ ಆಸ್ಟ್ರೇಲಿಯಾಗೆ ತಲೆನೋವಾಗಿದ್ದು ಇಲಿ ಪಾಷಾಣ ಪೂರೈಕೆಗಾಗಿ ಭಾರತಕ್ಕೆ ಆರ್ಡರ್ ನೀಡಿದೆ.
ಇನ್ನು ದೇಶದಲ್ಲಿ ಇಲಿಗಳ ಹಾವಳಿಗೆ ತಡೆವೊಡ್ಡದಿದ್ದರೇ, ನ್ಯೂ ಸೌತ್ ವೇಲೆಸ್ ರಾಜ್ಯ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ಅಲ್ಲಿನ ಕೃಷಿ ಸಚಿವ ಆಡಮ್ ಮಾರ್ಷಲ್ ಹೇಳಿದ್ದಾರೆಂದು ವರದಿಯಾಗಿದೆ.
ಇನ್ನು ಇಲಿ ಹಾವಳಿಗೆ ಕಡಿವಾಣ ಹಾಕಲು ನ್ಯೂ ಸೌತ್ ವೇಲ್ಸ್ ಸರ್ಕಾರ ನಿಷೇಧಿತ ವಿಷ ಬ್ರೋಮಾಡಿಯೋಲೋನ್ ನ 5,000 ಲೀಟರ್ ಅನ್ನು ಭಾರತದಿಂದ ತರಿಸಿಕೊಳ್ಳಲು ಆರ್ಡರ್ ನೀಡಿದೆ.

Leave a Reply

Your email address will not be published. Required fields are marked *

You May Also Like

ಯುರೋಪಿನ ಜರ್ಮನಿಯಲ್ಲಿ ಭಯಾನಕ ಪ್ರವಾಹ!

ಈ ಪ್ರವಾಹವೂ ಪಶ್ಚಿಮ ಯುರೋಪಿನಿಂದ ಶುರುವಾಗಿದ್ದು 125 ಜನ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 1300 ಜನರು ಕಾಣೆಯಾಗಿದ್ದಾರೆ ಹಾಗೆ ಅವರ ಸುಳಿವು ಇನ್ನೂ ಕಂಡುಬಂದಿಲ್ಲ ಹಾಗೂ ಅಲ್ಲಿನ ರಸ್ತೆ ಹದಗೆಟ್ಟು ನೀರಿನ ರಭಸಕ್ಕೆ ಒಂದರಮೇಲೊಂದು ಪಟ್ಟಣದ ಹಾಗೆ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾವೆ ಎಂದು ಹೇಳಲಾಗಿದೆ.

ದೇಶದಲ್ಲಿ 25 ಗಂಟೆಗಳಲ್ಲಿ 73,272 ಪಾಸಿಟಿವ್ ಪ್ರಕರಣಗಳು ಪತ್ತೆ!

ದೇಶದಲ್ಲಿ ಕೊರೊನಾ ಅಟ್ಟಹಾಸ ಎಗ್ಗಿಲ್ಲದೆ ಸಾಗುತ್ತಿದೆ. ಕಳೆದ 25 ಗಂಟೆಗಳಲ್ಲಿ 73,272 ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 69,79,424ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಅಯ್ಯೋ..! ಸದ್ಯದಲ್ಲಿಯೇ ದೇಶದ ಅರ್ಧದಷ್ಟು ಜನರು ಮಹಾಮಾರಿಗೆ ಬಲಿಯಾಗಲಿದ್ದಾರಂತೆ!

ನವದೆಹಲಿ : 2021ರ ಫೆಬ್ರವರಿ ತಿಂಗಳ ಒಳಗಾಗಿ ದೇಶದ ಕನಿಷ್ಠ ಶೇ. 50ರಷ್ಟು ಭಾರತೀಯರಲ್ಲಿ ಸೋಂಕು ಕಂಡು ಬರಲಿದೆ ಎಂದು ಸರ್ಕಾರದ ಸಮಿತಿ ಅಭಿಪ್ರಾಯಪಟ್ಟಿದೆ.

ಜೈಲುವಾಸದಿಂದ ಇಂದು ಶಶಿಕಲಾ ಬಿಡುಗಡೆ

ಕಳೆದ ೪ ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದ ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ಬಿಡುಗಡೆಯಾಗುವರು. ಕೊರೊನಾ ಸೋಂಕು ತಗುಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿಯೇ ಪ್ರಕ್ರಿಯೆ ಪೂರ್ಣಗೊಳಿಸಲಿರುವ ಜೈಲ್ ಸಿಬ್ಬಂದಿ ಅವರನ್ನು ಬಿಡುಗಡೆ ಮಾಡಲಿದ್ದಾರೆ ತಿಳಿಸಿದೆ.