ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ ಪ್ರೊ.ತಾರಾ

ಗದಗ: ಕೊರೊನಾದ ಈ ಸಂಕಷ್ಟದಲ್ಲಿ ಅದೆಷ್ಟೋ ಜನರು ಬಡ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ಕೆಲವರು ಪ್ರಾಮಾಣಿಕ ಸಹಾಯ ಮಾಡಿದರೆ ಇನ್ನು ಕೆಲವರ ಸಹಾಯದ ಉದ್ದೇಶವೇ ಬೇರೆಯದ್ದಾಗಿರುತ್ತದೆ. ಆದರೆ ಕಾಲೇಜು ಉಪನ್ಯಾಸಕಿಯೊಬ್ಬರು ಹಳ್ಳಿಯೊಂದರ ನೂರಾರು ಕುಟುಂಬಕ್ಕೆ ದಿನಸಿ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಲಾಕ್ ಡೌನ್ ಹಿನ್ನೆಲೆ ದುಡಿಯುವ ಕೈಗಳು ಕೆಲಸವಿಲ್ಲದೇ ಮನೆಯಲ್ಲಿ ಉಳಿದಿದುಕೊಂಡಿದ್ದಾರೆ. ಇದರಿಂದಾಗಿ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿರುವ 100 ಬಡ ಕುಟುಂಬಗಳಿಗೆ ಪ್ರಾಧ್ಯಾಪಕಿ ತಾರಾ ಅವರು ತಮ್ಮ ಸ್ವಂತ ಹಣದಿಂದ ಆಹಾರ ಕಿಟ್‌ ವಿತರಿಸಿ ಮಾನವೀಯತೆ ಮೆರೆದಿದರು.

ಮಲ್ಲಸಮುದ್ರ ಗ್ರಾಮದಲ್ಲಿರುವ ಬಡ ಕುಟುಂಬಗಳ ಮನೆ ಮನೆಗೆ ತೆರಳಿ ಸಕ್ಕರೆ, ಟೀ ಫೌಡರ್‌, ಎಣ್ಣೆ ಪಾಕೇಟ್‌, ರವಾ, ಅವಲಕ್ಕಿ, ಗೋಧಿ ಹಿಟ್ಟು ಸೇರಿದಂತೆ ಇತರೇ ದಿನಸಿಗಳ ಕಿಟ್‌ ಸಿದ್ಧಪಡಿಸಿ ವಿತರಿಸಿದರು. ಪ್ರಾದ್ಯಾಪಕಿಯ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *

You May Also Like

ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕಾಕರಣ

ಗದಗ : ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರ, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷದ ಮೇಲ್ಪಟ್ಟ ಸಹ…

ಕುಂದ್ರಳ್ಳಿ ವಿದ್ಯಾರ್ಥಿಗಳು ಶಾಲಿಗ್ಹೋಗಾಕ್ 3ಕಿಮಿ ನಡಿಬೇಕಂತ!

ಕೊರೊನಾದಿಂದಾಗಿ ಲಾಕ್‌ಡೌನ್ ಮಾಡಲಾಗಿತ್ತು. ಇದಾದ ನಂತರ ಇತ್ತಿಚೆಗಷ್ಟೆ ಶಾಲೆಗಳು ಆರಂಭಿಸಲಾಗಿದೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹರಸಾಹಸ ಪಡುವಂತಾಗಿದೆ. ಇದಕ್ಕೆ ಕಾರಣ ಬಸ್ ಸೌಲಭ್ಯ ಕೊರತೆ.

ಉತ್ತರಪ್ರಭ ಫಲಶೃತಿ: ಏನರಾ ಆಗ್ಲಿ ಧೂಳಿಗೆ ತೆರಿಗೆ ಕಟ್ಟೊ ಕಾಟ ತಪ್ಪಿದ್ರ ಸಾಕು..!

ಮನೆ, ಜಾಗೆ, ನೀರು, ಕಟ್ಟಡ ಹೀಗಿಲ್ಲ ತೆರಿಗೆ ಕಟ್ಟುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಅಷ್ಟೆ ಏಕೆ ಸ್ವತಃ ಕಟ್ಟಿದ್ದೇವೆ. ಆದರೆ ಇದ್ಯಾವುದಿದು ಧೂಳಿಗೆ ಕರ ಕಟ್ಟುವುದು ಅಂದ್ಕೊಂಡ್ರಾ?

ನದಿ ಪಾತ್ರದ ಜನರ ಬದುಕು ಮೂರುಬಟ್ಟೆ ಮಾಡಿದ ವರುಣ!

ರಾಯಚೂರು : ಮಳೆರಾಯನ ಅಟ್ಟಹಾಸಕ್ಕೆ ಇಡೀ ಉತ್ತರ ಕರ್ನಾಟಕವೇ ನಲುಗಿ ಹೋಗುತ್ತಿದೆ.