ಗದಗ: ಲಾಕ್ ಡೌನ್ ನಡುವೆ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಹಿಳೆಯ ಪ್ರತಿಭಟನೆ ನಡೆಸಿರುವಂತಹ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದಲ್ಲಿ ನಡೆದಿದೆ. ಕದಾಂಪುರ ಗ್ರಾಮದಲ್ಲಿ ಹಲವು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಕಂಡು ಮಹಿಳೆಯರು ಗ್ರಾಮ ಪಂಚಾಯತ ಎದುರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕ ಬೇಕಿದ್ದ ಅಬಕಾರಿ ಇಲಾಖೆ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಬಗ್ಗೆ ಗ್ರಾಪಂ ಪಿಡಿಓ ಮುಂದೇ ಕಣ್ಣೀರು ಹಾಕುತ್ತಾ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನು ಗ್ರಾಮದ ಓರ್ವ ಯುವತಿ ನಂಗೆ ತಂದೆ ಇಲ್ಲಾ ತಾಯಿ ದುಡಿಯುತ್ತಾರೆ. ದುಡಿದ ಹಣ ಮನೆಯಲ್ಲಿಡುತ್ತಾರೆ. ಅದನ್ನು ನನ್ನ ಸಹೋದರರು ಹಣ ತಗೆದುಕೊಂಡು ಕುಡಿಯಲು ಹೋಗತ್ತಾರೆ ಅಂತಾ ಕಣ್ಣೀರು ಹಾಕಿದ್ದಾಳೆ. ಊರಲ್ಲಿ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿರೋದೇ ಇದಕ್ಕೆಲ್ಲಾ ಕಾರಣ ಎಂದು ಯುವತಿ ಪಿಡಿಓ ಮುಂದೆ ತನ್ನ ಗೋಳು ತೋಡಿಕೊಂಡಳು. ಇನ್ನು ತಕ್ಷಣವೇ ಅಕ್ರಮ ಮದ್ಯ ಬಂದ್ ಮಾಡಿಸುವ ಭರವಸೆಯನ್ನು ಪಿಡಿಓ ನೀಡಿದರು.
ಈ ವೇಳೆ ಗ್ರಾಪಂ ಸದಸ್ಯರು, ಸಿಬ್ಬಂದಿ, ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You May Also Like

ರೈಲು ಹಳಿ ದುರಂತ: 16 ಸಾವು

ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು…

ನಾಟಕಕಲೆ ವಿಲಾಸಕ್ಕಲ್ಲ ವಿಕಾಸಕ್ಕೆ

ಆಂಗಿಕ ಭುವನಂ ಯಸ್ಯ ವಾಚಿಕಂ ಸರ್ವಾಂಜ್ಞಮಯA ಆಚಾರ್ಯಂ ಚಂದ್ರಿತಾರಾದಿತA ನಮಃ ಸಾತ್ವಿಕಂ ನಟೇಶಂ ಎಂದು ಆ ನಟವರನಾದ ಶಿವನ ಸ್ತುತಿಯನ್ನು ಕೃತಿ ಆರಂಭದಲ್ಲಿಯೇ ಮಾಡಿದಂತೆ ನಟನ ಆಂಗಿಕ ಅಭಿನಯ ಸಂಭಾಷಣೆ, ವೇಷಭೂಷಣದೊಂದಿಗೆ ಮಾನವನ ನಿತ್ಯ ಬದುಕಿನಲ್ಲಾದ ಭಾವನೆಯನ್ನು ಕಲಾವಿದನ ಅಭಿವ್ಯಕ್ತಿಯನ್ನು ರಂಭೂಮಿಯ ಮೂಲಕ ವ್ಯಕ್ತಪಡಿಸುವ ಮಾಧ್ಯಮವೇ ನಾಟಕ.

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ.

ವರದಿ: ವಿಠಲ ಕೆಳೂತ್ ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ…

ಮಾವಿನ ಮಹಿಮೆ ಗೊತ್ತಾ ನಿಮಗೆ? ಹಣ್ಣುಗಳ ರಾಜನನ್ನು ತಿನ್ನಿ ಆರೋಗ್ಯವಾಗಿರಿ!!

ಇದು ಬೇಸಿಗೆ ಸಮಯ. ಕೊರೊನಾ ಕೂಡ ಈ ಸಮಯದಲ್ಲಿಯೇ ದೇಶವನ್ನು ಕಾಡುತ್ತಿದೆ. ಹೊರಗೆ ಬಿಸಿಲು, ಸೆಖೆ, ಉರಿ. ಆದರೆ ಬೇಸಿಗೆ ಸಮಯದಲ್ಲಿ ಖುಷಿಯ ವಿಚಾರ ಹಣ್ಣುಗಳ ರಾಜ ಮಾವಿನ ಹಣ್ಣು ಬೆಳೆಯ ಸಮಯ. ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ.