ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಹಲವೆಡೆ ಭಾರಿ ಪ್ರಮಾಣದ ಮಳೆ ಮಿಶ್ರಿತ ಗಾಳಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಸೋಮವಾರ ಸಂಜೆ ಮಳೆ ಮಿಶ್ರಿತ ಗಾಳಿ ಗಿಡ-ಮರಗಳು ಧರೆಗುರುಳಿವೆ. ಮನೆಗಳಿಗೂ ಹಾನಿ ಸಂಭವಿಸಿದೆ. ಭತ್ತದ ಗದ್ದೆಗಳು ಹಾನಿಗೀಡಾಗಿವೆ.

ಧರೆಗುರುಳಿದ ಮರಗಳು
ಭಾರಿ ಪ್ರಮಾಣದ ಗಾಳಿಗೆ ಕೊರ್ಲಹಳ್ಳಿ, ಗಂಗಾಪೂರ, ಬಿಡನಾಳ ಭಾಗದಲ್ಲಿ ರಸ್ತೆಗಳಲ್ಲಿ ಗಿಡಮರಗಳು ಧರೆಗುರುಳಿವೆ. ಕೊರ್ಲಹಳ್ಳಿ-ಗಂಗಾಪುರ ಮಾರ್ಗ ಮದ್ಯೆ ಮರವೊಂದು ನೆಲಕ್ಕುರುಳಿದ ಪರಿಣಾಮ ಕೆಲಕಾಲ ಸಂಚಾರ ಕೂಡ ಅಸ್ತವ್ಯಸ್ಥವಾಗಿತ್ತು. ಇನ್ನು ಕೊರ್ಲಹಳ್ಳಿ ಗ್ರಾಮದ ಜನತಾ ಪ್ಲಾಟ್ ನಲ್ಲಿಯೂ ಕೂಡ ತೆಂಗು, ಬೇವು ಸೇರಿದಂಗೆ ಹಲವು ಮರಗಳು ನೆಲಕ್ಕಪ್ಪಳಿಸಿವೆ.

ಬೆಳೆಗಳಿಗೂ ಹಾನಿ
ಈ ಭಾಗದ ಕೆಲವು ಭತ್ತದ ಗದ್ದೆಗಳು ಹಾನಿಗೀಡಾಗಿವೆ. ಭಾರಿ ಗಾಳಿಗೆ ಭತ್ತದ ಬೆಳೆ ನೆಲಕ್ಕೊರಗಿದ ದೃಷ್ಯಗಳು ಸಾಮಾನ್ಯವಾಗಿವೆ. ಇನ್ನು ಕೊರ್ಲಹಳ್ಳಿ ಹೊರ ವಲಯದಲ್ಲಿ ಶಾಸ್ತ್ರೀಯವರ ಮನೆ ಎದುರಿಗೆ 4 ಕ್ಕೂ ಅಧಿಕ ತೆಂಗು, 20ಕ್ಕೂ ಹೆಚ್ಚು ಬಾಳೆ ಗಿಡಗಳು ಹಾನಿಗೀಡಾಗಿವೆ. ಇನ್ನು ಹಲವು ಬಾಳೆ ತೋಟಗಳಿಗೂ ಹಾನಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ರೈತ ಚಂದ್ರಶೇಖರ್ ಅವರ ಗದ್ದೆಯಲ್ಲಿನ ಭತ್ತದ ಬೆಳೆ ಇನ್ನೆರೆಡು ದಿನದಲ್ಲಿ ಕಟಾವು ಮಾಡಬೇಕಿತ್ತು. ಅಷ್ಟರಲ್ಲಾಗಲೇ ಬೆಳೆ ಹಾನಿಗೀಡಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಮನೆಗಳಿಗೂ ಹಾನಿ
ಕೊರ್ಲಹಳ್ಳಿ ಭಾಗದಲ್ಲಿ 20ಕ್ಕೂ ಹೆಚ್ಚು ಮನೆಗಳು ಗಾಳಿ ಬೀಸಿದ ಪರಿಣಾಮ ಮನೆಯ ಮೇಲ್ಛಾವಣೆ ಕಿತ್ತಹೋದ ಪರಿಣಾಮ ಮನೆಗಳು ಹಾನಿಗೀಡಾಗಿವೆ.
ಇದನ್ನೂ ಓದಿ: ಉತ್ತರಪ್ರಭ ಬಳಗಕ್ಕೆ ಗ್ರಾಮ ಪಂಚಾಯತಿಗೊಬ್ಬ ಪ್ರತಿನಿಧಿ ಬೇಕಾಗಿದ್ದಾರೆ.
ಭಾರಿ ತೊಂದರೆಯಾಗಿದೆ
ಮಳೆ ಮಿಶ್ರಿತ ಅಪಾರ ಪ್ರಮಾಣದ ಗಾಳಿಯಿಂದ ಈ ಭಾಗದಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಈಗಾಗಲೇ ಹಲವು ಕಾರಣದಿಂದ ರೀವ್ರ ಸಂಕಷ್ಟದಲ್ಲಿದ್ದ ರೈತರು ಹಾಗು ಜನಸಾಮಾನ್ಯರಿಗೆ ಇದೀಗ ಮತ್ತೆ ಗಾಳಿಯಿಂದ ಸಂಭವಿಸಿದ ಹಾನಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾನಿಗೆ ಸಂಬಂಧಪಟ್ಟಂತೆ ಸರ್ಕಾರ ಪರಿಹಾರ ನೀಡಬೇಕು ಎಂದು ಸ್ಥಳೀಯರಾದ ಪ್ರಶಾಂತ ಪುರದ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಉತ್ತರಪ್ರಭ ಬಳಗಕ್ಕೆ ಗ್ರಾಮ ಪಂಚಾಯತಿಗೊಬ್ಬ ಪ್ರತಿನಿಧಿ ಬೇಕಾಗಿದ್ದಾರೆ.