ಶಿರಹಟ್ಟಿ: ಸ್ಥಳೀಯ ಜ್ಞಾನ ಜ್ಯೋತಿ ಕೊಚಿಂಗ್ ಸೆಂಟರ್ ವಿದ್ಯಾರ್ಥಿ ಮಂಜುನಾಥ ಚಡಚಣ್ಣವರ ಮೊರಾರ್ಜಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಹಾಗೂ ಜಿಲ್ಲೆಗೆ 2ನೇ ಪಡೆದುಕೊಂಡಿದ್ದಾರೆ.
7 ವರ್ಷಗಳಿಂದ ಜಿಲ್ಲೆಯ ಹೆಚ್ಚು ವಿದ್ಯಾರ್ಥಿಗಳು ತೆರ್ಗಡೆಗೊಳಿಸುತ್ತಿರುವ ಸಂಸ್ಥೆಯ ವಿದ್ಯಾರ್ಥಿಯಾದ ಮಂಜುನಾಥ ಕಳೆದ ಫೆ.24ರಂದು ಪರೀಕ್ಷೆ ಬರೆದಿದ್ದು, ಈಗ ರ್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ. ವ್ಯಾಸಾಂಗ ಮಾಡುತ್ತಿರುವ ಸಿಸಿಎನ್ ಶಾಲೆಯ ಶಿಕ್ಷಕರು, ಕೊಚಿಂಗ್ ಸಂಸ್ಥೆಯ ಹಿರಿಯ ಮಾರ್ಗದರ್ಶಕ ಪ್ರಕಾಶ ನರಗುಂದೆ ಹಾಗೂ ಪ್ರಧಾನ ಸಂಯೋಜಕ ಸಂಗಮೇಶ ಮಡಿವಾಳರ ಹಾಗೂ ಪೋಷಕರು ವಿದ್ಯಾರ್ಥಿಯನ್ನು ಅಭಿನಂಧಿಸಿದ್ದಾರೆ.