ಗದಗ: ಜಿಲ್ಲೆಯ ತಾಲೂಕಾ ಕೇಂದ್ರಗಳಿಗೆ ಲೋಕಾಯುಕ್ತ ಅಧಿಕಾರಿಗಳು ಪ್ರತಿ ತಿಂಗಳು ಭೇಟಿ ನೀಡುವ ಕಾರ್ಯಕ್ರಮ ನಿಗದಿಪಡಿಸಲಾಗಿದೆ.
ಮಾರ್ಚ.29 ರಂದು ಬೆಳಿಗ್ಗೆ 11 ಘಂಟೆಯಿಂದ ಮದ್ಯಾಹ್ನ 1 ಘಂಟೆಯವರೆಗೆ ತಾಲೂಕು ಪಂಚಾಯತ ಸಭಾಭವನ ಗದಗ, ತಾಲೂಕು ಪಂಚಾಯತ ಸಭಾ ಭವನ ರೋಣ, ತಹಶೀಲ್ದಾರ ಕಚೇರಿ ಸಭಾ ಭವನ ನರಗುಂದದಲ್ಲಿ ಹಾಗೂ ಮಾರ್ಚ 30 ರಂದು ಬೆಳಿಗ್ಗೆ 11 ಘಂಟೆಯಿಂದ ಮದ್ಯಾಹ್ನ 1 ಘಂಟೆಯವರೆಗೆ ತಹಶೀಲ್ದಾರ ಕಚೇರಿ ಸಭಾ ಭವನ ಶಿರಹಟ್ಟಿ, ತಾಲೂಕು ಪಂಚಾಯತ ಸಭಾ ಭವನ ಮುಂಡರಗಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿಗಳನ್ನು ಸ್ಥಳದಲ್ಲಿಯೇ ನೀಡಿ ಸದುಪಯೋಗ ಪಡೆದುಕೊಳ್ಳುವಂತೆ ಲೋಕಾಯುಕ್ತ ಆರಕ್ಷಕ ಉಪ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.