ಗಜೇಂದ್ರಗಡ: ಸಮೀಪದ ಕೊಡಗಾನೂರ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಭಕ್ತರ ಹರ್ಷೊದ್ಘಾರದ ಮಧ್ಯೆ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ದೇಗುಲದಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಭಕ್ತಸಮೂಹ ಶ್ರೀ ವೀರಭದ್ರೇಶ್ವರ ಮಹಾರಾಜ ಕೀ ಜೈ ಎಂದು ಜಯಘೊಷ ಹಾಕುತ್ತಾ ಭಜನೆ, ಝಾಂಜಮೇಳ, ಡೊಳ್ಳು, ಕರಡಿ ಮಜಲು, ಡೊಳ್ಳು, ಸಂಗೀತ ವಾಧ್ಯ ವೈಭವದಿಂದ ನಂದಿಕೊಲು, ಛತ್ರ ಚಾಮರಗಳೊಂದಿಗೆ ಭಕ್ತಿ ಭಾವದಿಂದ ಭಕ್ತರು ಉತ್ತತ್ತಿ, ಬಾಳೆ ಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು.

ರಥ ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಭಕ್ತಾದಿಗಳು ಚಪ್ಪಾಳೆ ತಟ್ಟಿ ಭಕ್ತಿಭಾವದಿಂದ ಮರೆತರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಕಾಯಿ ಒಡೆಸಿ, ನೈವಿದ್ಯೆ ನೆರವೇರಿಸಿ ಕೃತಾರ್ಥರಾದರು.

Leave a Reply

Your email address will not be published. Required fields are marked *

You May Also Like

ಗೃಹ ಸಚಿವರ ತವರಲ್ಲಿ ಐಸ್ ಲಗಾ ಐಸಾ..! ಇನ್ನೂ ಸ್ವಲ್ಪ ಐಸಾ..!

ಐಸ್ ಲಗಾ ಐಸಾ..! ಇನ್ನೂ ಸ್ವಲ್ಪ ಐಸಾ..! ತಳ್ಳದೆ ಸ್ಟಾರ್ಟ್ ಆಗ್ತಿಲ್ಲಾ ಕರೊನಾ ವಾರಿಯರ್ಸ್ ರಥ..…

ಸೂರ್ಯಕಾಂತಿಗೆ ಕೋರಿ ಹುಳಗಳ ದಾಳಿ-ರೈತರು ಕಂಗಾಲು

ಉತ್ತರಪ್ರಭ ಸುದ್ದಿಆಲಮಟ್ಟಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡಿರುವ ಸೂರ್ಯಕಾಂತಿ ಬೆಳೆ ಹುಲುಸಾಗಿ ಬೆಳೆದು ನಿಂತಿದೆ. ಹಚ್ಚು ಹಸಿರಾಗಿ…

ಅಕ್ಟೋಬರ್ 15ರವರೆಗೆ ಮರಳು ಗಣಿಗಾರಿಕೆ ನಿಷಿದ್ಧ: ಹೈಕೋರ್ಟ್

ಜಿಲ್ಲೆಯ ಮರಳು ಗಣಿಗಾರಿಕೆ ಕುರಿತಂತೆ ಸಲ್ಲಿಸಲಾಗಿದ್ದ ದಾವೆಯೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಅಕ್ಟೋಬರ್ 15 ರವರೆಗೆ ಮರಳು ಗಣಿಗಾರಿಕೆ ನಿಷೇಧ ಮಾಡಿದೆ. ಬೆಂಗಳೂರು: ಸುಸ್ಥಿರ ಮರಳು ಗಣಿಗಾರಿಕೆ-2016ರ ಮಾರ್ಗಸೂಚಿಯನ್ನು ಉಲ್ಲೇಖಿಸಿರುವ ಹೈಕೋರ್ಟ್

ರಾಜ್ಯದಲ್ಲಿಂದು 20 ಕೊರೋನಾ ಪಾಸಿಟಿವ್ ಪತ್ತೆ

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 20 ಹೊಸ ಕರೋನಾ ಪ್ರಕರಣಗಳು ಕಂಡು ಬಂದಿದೆ.