ಜಕರ‍್ತಾ:  ಬ್ರೇಕ್ ವೈಫಲ್ಯವಾಗಿ ಪ್ರವಾಸಿ ಬಸ್ ಕಂದಕಕ್ಕೆ ಉರುಳಿ ಬಿದ್ದು 26 ಮಂದಿ ಪ್ರಯಾಣಿಕರು ಮೃತಪಟ್ಟು , 35ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಇಂಡೋನೇಷಿಯಾದಲ್ಲಿ ಸಂಭವಿಸಿದೆ. ಇಸ್ಲಾಮಿಕ್ ಜೂನಿಯರ್ ಹೈಸ್ಕೂಲ್ ವಿದ್ಯಾರ್ಥೀಗಳು ಮತ್ತು ಅವರ ಪೋಷಕರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಜಾವಾದ ದ್ವೀಪ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ ಬ್ರೇಕ್ ಫೇಲ್ಯೂರ್ ಆಗಿ ಈ ದುರ್ಘಟನೆ ಸಂಭವಿಸಿದೆ.

ಪರ‍್ವಾ ಜಾವಾದ ಸುಬಾಂಗ್ ಪಟ್ಟಣದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ತಸಿಕ್ ಮುಲಾಯಾ ಪ್ರದೇಶದಲ್ಲಿರುವ ಧರ‍್ಮಿಕ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಕಂದಕಕ್ಕೆ ಉರುಳಿ 26 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಕೊ ರಸೆಟಿಯೋ ರೊಬ್ಯಾಂಟೋ ತಿಳಿಸಿದ್ದಾರೆ.

ಇಕ್ಕಟ್ಟಾದ ಇಳಿಜಾರು ಪ್ರದೇಶದ ತಿರುವಿನಲ್ಲಿ ಬಸ್ನ ಬ್ರೇಕ್ ವೈಫಲ್ಯಗೊಂಡಿದ್ದು , ಚಾಲಕನಿಗೆ ಬಸ್ ನಿಯಂತ್ರಣ ಸಿಗದ ಹಿನ್ನೆಲೆಯಲ್ಲಿ 20 ಅಡಿ ಕಂದಕಕ್ಕೆ ಉರುಳಿ ಬಿತ್ತು. ಕಂದಕದಲ್ಲಿ ಸಿಲುಕಿಕೊಂಡಿದ್ದ 26 ಮೃತದೇಹಗಳನ್ನು ಹೊರ ತೆಗೆಯುವಲ್ಲಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ. ಗಂಭೀರವಾಗಿ ಗಾಯಗೊಂಡಿರುವ 35 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡಿರುವ 35 ಮಂದಿಯಲ್ಲಿ 13 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಬಸ್ ಅಪಘಾತದಲ್ಲಿ  ಚಾಲಕನು ದುರಂತದಲ್ಲಿ ಬಲಿಯಾಗಿದ್ದಾನೆ. ದುರಂತದಲ್ಲಿ ಒಟ್ಟು 26 ಅಮಾಯಕರು ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

ರೈತರ ಪ್ರತಿಭಟನೆ: ಭಾರೀ ಭದ್ರತಾ ಲೋಪ ಉಂಟಾಗಿ 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆಯೇ ಸಿಲುಕಿದ ಪ್ರಧಾನಿ

ಉತ್ತರಪ್ರಭ ಸುದ್ದಿಹೊಸದಿಲ್ಲಿ: ರೈತರ ಪ್ರತಿಭಟನೆಯಿಂದಾಗಿ ಭಾರೀ ಭದ್ರತಾ ಲೋಪ ಉಂಟಾಗಿ 20 ನಿಮಿಷಗಳ ಕಾಲ ಫ್ಲೈಓವರ್…

ಪಾಕ್ ನಂತೆ ಚೀನಾ ರಾಷ್ಟ್ರವು ಗಡಿಯಲ್ಲಿ ಉದ್ಧಟತನ ಮೆರೆಯುತ್ತಿದೆ – ರಾಜನಾಥ್ ಸಿಂಗ್!

ನವದೆಹಲಿ : ಗಡಿ ರೇಖೆಯ ಬಳಿ ಪಾಕ್ ನಂತೆ ಚೀನಾ ಕೂಡ ವಿವಾದ ಸೃಷ್ಟಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.

ಜಗತ್ತಿಗೆ ಕಾದಿದೆ ಇನ್ನೂ 2 ವಿಪತ್ತು ; ಬಿಲ್‌ ಗೇಟ್ಸ್‌

ಜಗತ್ತಿನಲ್ಲಿ ಕೊರೊನಾ ಸೋಂಕಿನ ಬಳಿಕ ಇನ್ನೂ ಎರಡು ವಿನಾಶಕಾರಿ ವಿಪತ್ತುಗಳು ವಿಶ್ವವನ್ನು ಕಾಡಲಿವೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.

ಅಮೇರಿಕ ಶ್ವೇತ ಭವನಕ್ಕೂ ಎಂಟ್ರಿ ಕೊಟ್ಟ ಸೋಂಕು!

ಅಮೇರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿಗೆ ಕೊರೋನಾ ವೈರಸ್ ತಗಲಿದೆ. ಶ್ವೇತ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಳೆದೊಂದು ವಾರದಲ್ಲಿ ಕೊರೊನಾ ಸೋಂಕು ತಗಲಿಸಿಕೊಂಡಿರುವ ಎರಡನೇ ವ್ಯಕ್ತಿ ಇವರಾಗಿದ್ದಾರೆ.