ಕಟಕ್​: ಖದೀಮರನ್ನು ಹಿಡಿದು ಶಿಕ್ಷೆಗೆ ಗುರಿಯಾಗಿಸಿ ಸರಿ ದಾರಿಗೆ ತರಬೇಕಾದ ಕರ್ತವ್ಯ ಪೊಲೀಸರದ್ದು. ಆದರೆ, ಕೆಲ ಪೊಲೀಸರೇ ಕಳ್ಳತನಕ್ಕೆ ಇಳಿದಾಗ ಅದಕ್ಕಿಂತ ನಾಚಿಕಿಗೇಡಿನ ಸಂಗತಿ ಬೇರೊಂದಿಲ್ಲ. ಒಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗುವುದು. ಇದೇ ರೀತಿಯ ಪ್ರಸಂಗ ಒಡಿಶಾದಲ್ಲಿ ಜರುಗಿದೆ.

ತಪ್ಪು ಮಾಡುವ ಜನರಿಗೆ ಬುದ್ಧಿವಾದ ಹೇಳುವ ಸ್ಥಾನದಲ್ಲಿರುವ ಪೊಲೀಸರಿಬ್ಬರು ಸ್ವತಃ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ. ಕೇವಲ ನುಗ್ಗೆಕಾಯಿ ಕದಿಯುವ ಮೂಲಕ ಪೊಲೀಸ್​ ಸಿಬ್ಬಂದಿ ತನ್ನ ಸಣ್ಣತನ ಪ್ರರ‍್ಶಿಸಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿರುವುದು ಒಡಿಶಾದ ಕಟಕ್​ ನಗರದ ಸಿಡಿಎ ಸೆಕ್ಟರ್​-7 ಏರಿಯಾದಲ್ಲಿ. ಈ ಪ್ರದೇಶದಲ್ಲಿ ವಾಸವಿರುವ ಹಿರಿಯ ನಾಗರಿಕ ಬಾಸುದೇವ್​ ಮಿಶ್ರಾ ಎಂಬುವರ ಮನೆಯಲ್ಲಿ ಒಡಿಶಾ ಸಹಾಯಕ ಪೊಲೀಸ್ ಪಡೆ (ಒಎಪಿಎಫ್​)ಯ ಸಿಬ್ಬಂದಿ ಕಳ್ಳತನ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಿಶ್ರಾ, ಇಬ್ಬರು ಒಎಪಿಎಫ್ ಸಿಬ್ಬಂದಿ ಎರಡು ಪಿಸಿಆರ್​ ಬೈಕ್​ನಲ್ಲಿ ಮಾರ್ಚ 4ರ ಬೆಳಗ್ಗೆ ನನ್ನ ಮನೆಯ ಬಳಿ ಬಂದರು. ನನ್ನ ಮನೆಯೆದುರು ನಾನು ಬೆಳೆಸಿದ್ದ ನುಗ್ಗೆ ಮರದಲ್ಲಿ ನುಗ್ಗೆಕಾಯಿಯನ್ನು ಕೀಳಲು ಆರಂಭಿಸಿದರು. ಅವರು ಕದಿಯುವುದು ನನ್ನ ಗಮನಕ್ಕೆ ಬಂದು ಅದನ್ನು ವಿರೋಧಿಸಿದೆ. ಆದರೆ, ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಸುಮಾರು 25 ಕೆಜಿ ತೂಕದ ನುಗ್ಗೆಕಾಯ ಕಿತ್ತುಕೊಂಡು ಬೈಕ್​ನಲ್ಲಿ ಹೊರಟು ಹೋದರು ಎಂದು ಆರೋಪಿಸಿದ್ದಾರೆ. ಮಿಶ್ರಾ ಅವರು ಈ ಬಗ್ಗೆ ಮರ್ಕಾತ್ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಹ್ಯಾಂಡ್ ಸಾನಿಟೈಸರ್ ಸ್ಪೋಟವಾಗುವುದು ನಿಜನಾ..?

ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಸ್ವಯಂಪ್ರೇರಿತ ದಹನಕ್ಕೆ ಸಮರ್ಥವಾಗಿರುವುದಿಲ್ಲ ಎಂದು ತಿಳಿದುಬಂದಿದೆ.

ಗರಿಷ್ಠ ಮಟ್ಟದ ಇಂಧನ ತೆರಿಗೆ ಪಡೆಯುವ ರಾಷ್ಟ್ರ ಯಾವುದು ಗೊತ್ತಾ?

ಭಾರತ ಸದ್ಯ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಗರಿಷ್ಠ ಮಟ್ಟದ ತೆರಿಗೆ ವಿಧಿಸಿದ ರಾಷ್ಟ್ರವಾಗಿದೆ. ಭಾರತ ಮೊದಲನೇ ಸ್ಥಾನದಲ್ಲಿದ್ದರೇ ಇಟಲಿ ಎರಡನೇ ಸ್ಥಾನದಲ್ಲಿದೆ.

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ, ರುಂಡವನ್ನೇ ಕತ್ತರಿಸಿ ಪ್ರಿಯಕರನಿಗೆ ಅರ್ಪಿಸಿದ!

ಹೈದರಾಬಾದ್ : ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ, ಅವಳ ರುಂಡವನ್ನೇ ಕತ್ತರಿಸಿ ಪ್ರಿಯಕರನ ಮನೆಯ ಮುಂದೆ ಇಟ್ಟ ಘಟನೆ ನಡೆದಿದೆ.

ಲಡಾಖ್‍ನಲ್ಲಿ ಪ್ರಧಾನಿ ಮೋದಿ ತೆರೆಯಿತೆ ಲಡಾಯಿಯ ಹಾದಿ?

ಜೂನ್ 15ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸಂಘರ್ಷ ವಲಯಗಳಾದ ಲಡಾಕ್ ಮತ್ತು ಲೇಹ್ ಪ್ರದೇಶಕ್ಕೆ ಇಂದು ಭೇಟಿ ನೀಡಿ, ದೇಶದ ಸೈನಿಕ ಪಡೆಗಳಿಗೆ ನೈತಿಕ ಸ್ಥೈರ್ಯ ತುಂಬಿದರು.