ಹಕ್ಕು ಪತ್ರಕ್ಕಾಗಿ ನೆರೆ ಸಂತ್ರಸ್ತರ ಸತ್ಯಾಗ್ರಹ

ರೋಣ: ಆಸರೆ ಮನೆಗಳ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿರುವ ವೇಳೆ ಹೆಜ್ಜೇನು ದಾಳಿ ಮಾಡಿದ ಘಟನೆ ನಡೆದಿದೆ.

ತಾಲೂಕಿನ ಗಾಡಗೋಳಿ ಗ್ರಾಮದ ನೆರೆ ಸಂತ್ರಸ್ತರ ಆಶ್ರಯ ಮನೆಗಳ ಹಕ್ಕು ಪತ್ರಕ್ಕಾಗಿ ಸುಮಾರು ದಿನಗಳಿಂದ ಮನವಿ ನಿಡಿದ್ದರು. ಅದಕ್ಕೆ ಅಧಿಕಾರಿಗಳು ಸ್ಪಂದಿಸದಿರದ ಕಾರಣ ಮಂಗಳವಾರ ಗ್ರಾಮಸ್ಥರು ತಹಸೀಲ್ದಾರ್ ಕಛೇರಿ ಮುಂದೆ ಧರಣಿ ಆರಂಭಿಸಿದ್ದರು.

ಐವರು ಆಸ್ಪತ್ರೆಗೆ ದಾಖಲು

ಹೆಜ್ಜೆನು ದಾಳಿಗೊಳಗಾದ ಹನಮಂತ ಛಲವಾದಿ ಹಾಗೂ ಪ್ರವೀಣ್ ಬಡಿಗೇರ್, ಶೇಕಪ್ಪಗಾಣಿಗೇರ, ಶಿವಪ್ಪ ಶಂಕ್ರಪ್ಪಅಗಡಿ, ಮೆಬೂಬಸಾಬ ಯ. ನದಾಫ್, ಮಾರುತಿ ಕುರುಬರ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಈ ವೇಳೆ ಹೆಜ್ಜೇನು ದಾಳಿ ಮಾಡಿದ್ದು, ದಾಳಿಗೊಳಗಾದ ವಿಶೇಷಚೇತನನಿಗೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇಷ್ಟೆಲ್ಲ ಘಟನೆ ನಡೆದಾಗಲೂ ಈ ಬಗ್ಗೆ ತಹಶೀಲ್ದಾರರು ಮಾತ್ರ ಸ್ಪಂದಿಸಲಿಲ್ಲ ಎನ್ನುವುದು ಪ್ರತಿಭಟನಾಕಾರರ ಅಸಮಾಧಾನ. ತಮ್ಮಕಾರ್ಯಾಲಯದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಹೆಜ್ಜೆನು ದಾಳಿ ನಡೆಸಿದಾಗಲೂ ತಹಶೀಲ್ದಾರರು ಮಾತ್ರ ತಮ್ಮ ಕೆಲಸದಲ್ಲಿ ತಲ್ಲೀನವಾಗಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟುಆಕ್ರೋಶ ಹೆಚ್ಚಿಸಿತು.

ಸತ್ರ ಗುಟಕ್ಕ ಬಡಿಯಾಕ್‌ ಜಾಗಾ ಇಲ್ಲಾ

ಸಾಹೇಬ್ರೆ ನಾವು ಹನ್ನೆರಡು ವರ್ಷಗಳಿಂದ ಹೋರಾಟ ಮಾಡ್ತಾ ಬಂದೀವಿ. ನಮಗೆ ನೀವು ಬರೀ ಆಶ್ವಾಸನೆ ಕೊಡ್ತಾನಾ ಬಂದೀರಿ. ನಿಮ್ಮಂತ ಅಧಿಕಾರಿಗಳು ಎಷ್ಟೋ ಜನ ಬಂದು ಹೋದರು. ಆದ್ರ ನಮಗೆ ಒಬ್ರೂ ಸರಿಯಾದ ನ್ಯಾಯ ನೀಡಲಿಲ್ಲ. ಅದಕ್‌ ನಾವು ಇವತ್ತಿನಿಂದ ಅಮರಣ ಉಪವಾಸ ಇದ್ದು ನಮ್ಮ ಹಕ್ಕು ಪತ್ರ ಪಡದ್ ಮ್ಯಾಲ ಇಲ್ಲಿಂದ ಹೋಗ್ತಿವಿ ಅಂತ ಪ್ರತಿಭಟನಾಕಾರರು ತಹಶೀಲ್ದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವಾಗ ವೃದ್ಧೆಯೊಬ್ಬರನ್ನು ಸಮಾಧಾನ ಪಡಿಸಲು ಮುಂದಾದ ತಹಶೀಲ್ದಾರ್, ಅಜ್ಜಿ.., ಅಜ್ಜಿ.. ಸ್ವಲ್ಪ ಸುಮ್ಮನಿರಿ ಎಂದು ಹೆಳ್ಳುತ್ತಿರುವಾಗ ಸಿಟ್ಟಿನಿಂದ ವೃದ್ಧೆಯೊಬ್ಬಳು ಏ ಎಪ್ಪಾ ಅಜ್ಜಿತಗೊಂಡು ಏನ್ ದಾಳಿ ಹೊಡಿತಿ. ನಾ ಸತ್ರ ಗೋಟಕ್ ಬಡಿಯಾಕ ಸ್ವಲ್ಪ ಜಾಗ ಇಲ್ಲಾ. ನಮ್ಮ ಹಕ್ಕು ಪತ್ರ ನಮಗ ಕೊಡ್ರಿ ಇಲ್ಲಂದ್ರ ನಮ್ಮನ್ನು ಇಲ್ಲೇ ಸಾಯಕ ಬಿಡ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಜ್ಜಿ ಮಾತಿಗೆ ಮೌನ ತಾಳಿ ತಹಶೀಲ್ದಾರ ಕಾರ್ಯಾಲಯಕ್ಕೆ ಮರಳಿದರು.

ದಶಕದಿಂದಲೂ ಆಶ್ರಯ ಮನೆಗಳ ಹಕ್ಕು ಪತ್ರ ಪಡೆಯಲು ಹೋರಾಟ ನಡೆಸುತ್ತಿದ್ದರೂ, ಅಧಿಕಾರಿಗಳು ಮಾತ್ರ ಸಂತ್ರಸ್ತರಿಗೆ ಹಕ್ಕು ಪತ್ರ ನೀಡುತ್ತಿಲ್ಲ. ಕೂಡಲೇ ಅಧಿಕಾರಿಗಳು ಸಂತ್ರಸ್ತರಿಗೆ ಹಕ್ಕು ಪತ್ರ ನೀಡಬೇಕು ಎಂದು ಈ ವೇಳೆ ಪ್ರತಿಭಟನಾಕಾರರು ಆಗ್ರಹಿಸಿದರು.

ಹಕ್ಕು ಪತ್ರ ನೀಡುವವರೆಗೂ ಹೋರಾಟ ನಿಲ್ಲುವದಿಲ್ಲ

ರೋಣ:ತಾಲೂಕಿನ ಗಾಡಗೋಳಿ ಗ್ರಾಮಕ್ಕೆ ನೆರೆ ಬಂದು 12 ವರ್ಷಗಳು ಗತಿಸಿದರು ಪರಿಹಾರವೆಂದು ನೀಡಿದ ಆಶ್ರಯ ಮನೆಗಳಿಗೆ ಇನ್ನೂ ತನಕ ಹಕ್ಕು ಪತ್ರ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದು ನಮಲ್ಲಿ ಸುಮಾರು 500 ಮನೆಗಳು ಅವಶ್ಯವಿದ್ದು ಇದುವರೆಗೂ ಹಕ್ಕು ಪತ್ರ ನೀಡುತ್ತಿಲ್ಲ 2009 ರಿಂದ ಇಲ್ಲಿಯ ವರೆಗೆ ಹೋರಾಟ ನಿಂತಿಲ್ಲ ನಮ್ಮ ಹಕ್ಕು ನಮಗೆ ನೀಡಿ ಇಲ್ಲಾಂದ್ರೆ ಹೋರಾಟ ನಿಲ್ಲಿಸುವದಿಲ್ಲ.

-ಲಲಿತಾ ಪಂಚಾಳ, ಗ್ರಾಮಸ್ಥೆ

ಎಸ್.ವೈ.ಗಾಣಿಗೇರ, ಸಿದ್ದು ಬೊಮ್ಮಣ್ಣಗೌಡ, ಮಹಾಂತೇಶ್ ಪೂಜಾರ, ವೀರಣ್ಣ ತಳವಾರ, ಶರಣಪ್ಪಜಂಗಣ್ಣವರ, ಪ್ರಭಾಕರ್ ಪಂಚಾಳ, ಯಲ್ಲಪ್ಪ ತಳವಾರ, ಮುತ್ತಣ್ಣ ಹಾಲನ್ನವರ, ಶಶಿಧರ್ ಪಂಚಾಳ, ಅಲ್ಲಯ್ಯ ಪಟ್ಟದಕಲ್ಲು, ಶಿವಾನಂದ್ ಬೀಳಗಿ, ಶಾರವ್ವ ದೇಸಾಯಿ, ಲಲಿತಾ ಪಂಚಾಳ, ಶಿವಕ್ಕ ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಜೂನ್ 15 ರಿಂದ ಶೈಕ್ಷಣಿಕ ವರ್ಷ ಆರಂಭ

ಬೆಂಗಳೂರು: ಶಾಲೆಗಳಿಗೆ ರಜೆ ಮುಗಿದು ಇನ್ನೇನು ಶಾಲೆಗಳು ಆರಂಭವಾಗುವಷ್ಟರಲ್ಲಿ ಮತ್ತೆ ಸರ್ಕಾರ ಜೂನ್ 14 ರವರೆಗೆ ಬೇಸಿಗೆ ರಜೆ ವಿಸ್ತರಿಸಿದೆ. ಆದರೆ ಜೂನ್ 15 ರಿಂದ 8, 9, 10ನೆ ತರಗತಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಇನ್ನು,ಪ್ರಾಥಮಿಕ ಶಾಲೆಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.

ಪ್ರಾಣಿಗಳ ಹಸಿವಿಗೆ ಮಿಡಿದ ಪೊಲೀಸರು

ಲಾಕ್ ಡೌನ್ ನಿಂದಾಗಿ ಮೂಕ ಪ್ರಾಣಿಗಳ ಮೂಕ ವೇದನೆ ಯಾರಿಗೆ ಅರ್ಥವಾಗಬೇಕು ಹೇಳಿ? ಆದರೆ ಪೊಲೀಸರು ಪ್ರಾಣಿಗಳ ಹಸಿವಿಗೆ ಮಿಡಿದಿದ್ದಾರೆ. ಈ ಮೂಲಕ ಖಾಕಿಯೊಳಗಿನ ಅಂತಃ ಕರಣದ ಮನಸ್ಸು ಜನರ ಮೆಚ್ಚುಗೆಗೆ ಕಾರಣವಾಗಿದೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಅಧಿಕಾರ ಇಲ್ಲವಂತೆ!

ಮೈಸೂರು : ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡುವ ಅಧಿಕಾರ ನಮಗಿಲ್ಲ. ಅದರ ಬಗ್ಗೆ ಮಾತನಾಡಿದರೆ,…

ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರಿಂದಲೇ ಶೆಟ್ಟರ್ ಗೆ ಸಿಎಂ ಮಾಡಲು ಯತ್ನ

ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋದವರು ಸಚಿವ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡಲು ಯತ್ನಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.