ಗದಗ: ಅಡವಿ ಸೋಮಾಪೂರ ಗ್ರಾಮದಲ್ಲಿ ಗ್ರಾಮಸ್ಥರಿಂದ ನಿರ್ಮಾಣಗೊಳ್ಳುತ್ತಿರುವ ಗ್ರಾಮದ ಆರಾಧ್ಯ ದೈವರಾದ ಗೋಣಿ ಬಸವೇಶ್ವರ ದೇವಸ್ಥಾನದ ರಥ ನಿರ್ಮಾಣ ಕಾರ್ಯಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರು ನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದ ಸಮಿತಿಯ ಸದಸ್ಯರಿಗೆ ರಥದ ನಾಲ್ಕು ಗಾಲಿಗಳಿಗೆ ಸಹಾಯ ಹಸ್ತ ನೀಡುವದಾಗಿ ಘೋಷಿಸಿದರು.
ಗ್ರಾ.ಪಂ ಅಧ್ಯಕ್ಷ ಶಾಮ ಸುಂದರ ಡಂಬಳ ನೇತೃತ್ವದ ರಥ ನಿರ್ಮಾಣ ಸಮಿತಿಯ ಸದಸ್ಯರಾದ ರಾಮನಗೌಡ ಪಾಟೀಲ, ನಾಗರಾಜ ನೀಲಗುಂದ, ಮಂಜುನಾಥ ಜಡಿ, ಮಲ್ಲಪ್ಪ ಹೊಸಳ್ಳಿ ಗೀರೀಶ ದೊಡಮನಿ, ಬೂದಪ್ಪ, ಸೋಮಣ್ಣ ಅಣ್ಣಿಗೇರಿ, ಗೀರೀಶ, ಆನಂದಪ್ಪ ಪುರದ ಮುಂತಾದವರು ಉಪಸ್ಥಿತರಿದ್ದರು.