ಶಿರಹಟ್ಟಿ: ರೈತರು ಕೃಷಿ ಜೊತೆಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಅರವಿಂದ ಸರಾಫ್ ಹೇಳಿದರು.
ಸ್ಥಳೀಯ ಪಶು ಆಸ್ಪತ್ರೆಯಲ್ಲಿ ಗುರುವಾರ ನಡೆದ ಹೈನುಗಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಹೈನುಗಾರಿಕೆಯಲ್ಲಿ ಇನ್ನು ಹೆಚ್ಚಿನ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಹಾಲು ಉತ್ಪಾದನೆಯಲ್ಲಿ ದ್ವಿಗುಣ ಸಾಧಿಸಬೇಕು. ಈ ಭಾಗದ ರೈತರು ಕೃಷಿಯೊಂದಿಗೆ ಹೈನುಗಾರಿಕೆ ಮಾಡುವುದರಿಂದ ಮೇವಿನ ಕೊರತೆ ಇರುವುದಿಲ್ಲ. ಹೆಚ್ಚಾಗಿ ಜೋಳ, ಶೇಂಗಾ ಬೆಳೆಯುವುದರಿಂದ ಹಸುಗಳಿಗೆ ಪೌಷ್ಟಿಕ ಆಹಾರ ದೊರೆಯುತ್ತಿದ್ದು, ಹೆಚ್ಚು ಹಾಲು ನೀಡುತ್ತವೆ ಎಂದು ಹೇಳಿದರು.
ರೈತರು ದೇಶಿಯ ತಳಿಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ದೇಶಿಯ ತಳಿಯ ಹಸುವಿನ ಹಾಲಿನಲ್ಲಿ ಂ-2 ಪ್ರೋಟೀನ್ ಇದ್ದು, ಇದರ ಸೇವನೆಯಿಂದ ಮನುಷ್ಯರ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೆ ಹೃದಯಾಘಾತ, ಮಧುಮೇಹದಂತಹ ದೊಡ್ಡಕಾಯಿಲೆಗಳು ದೂರವಾಗುತ್ತವೆ. ಹೈನುಗಾರಿಕೆಯಲ್ಲಿ ತಾಂತ್ರಿಕತೆ ವೃದ್ಧಿಯಾಗಿದ್ದು, ಕೆಲವೇ ದಿನಗಳಲ್ಲಿ ಹಸುವಿನ ಗರ್ಭಧಾರಣೆಯಲ್ಲಿ ಹೆಣ್ಣುಕರು ಬೇಕೋ ಅಥವಾ ಗಂಡು ಕರು ಬೇಕೋ ಅದನ್ನೇ ಪಡೆದುಕೊಳ್ಳುವ ಅವಕಾಶವಿದೆ ಎಂದು ತಿಳೀಸಿದರು
ಜಿ.ಪಂ ಸದಸ್ಯ ಈಶಣ್ಣ ಹುಲ್ಲಲ್ಲಿ, ಪಶುವೈದ್ಯ ಎನ್.ಎ. ಹವಳದ, ಎಸ್.ಎಸ್. ಹೊಸಮಠ, ತಿಪ್ಪಣ್ಣ ತಳಕಲ್, ದಯಾನಂದ ಹಕ್ಕಾಪಕ್ಕಿ, ಸಿ.ಎಸ್. ಹೊಸಮನಿ, ಮಂಜುನಾಥ ಅಮರಾಪುರ ಮುಂತಾದವರು ಉಪಸ್ಥಿತರಿದ್ದರು.