ಲಕ್ಕುಂಡಿ: ಸಮೀಪದ ತಿಮ್ಮಾಪೂರ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರೈತ ನಾಯಕ ಪ್ರೋ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ.ಆರ್.ನಾರಾಯಣರಡ್ಡಿ ಬಣದ ಸಂಘಕ್ಕೆ ತಾಲ್ಲೂಕಿನ ತಿಮ್ಮಾಪೂರ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಯಲ್ಲಪ್ಪ ರಾಮಪ್ಪ ಇಡ್ಲಿ (ಗೌರವಾಧ್ಯಕ್ಷ), ಹುಚೀರಪ್ಪ ಯಲ್ಲಪ್ಪ ಜೋಗಿನ (ಅಧ್ಯಕ್ಷ), ರಾಮಪ್ಪ ಸಣ್ಣಹನಮಪ್ಪ ಡಂಬಳ (ಉಪಾಧ್ಯಕ್ಷ), ಗಿರೀಶ್ ಬೀಮಪ್ಪ ಗುಡ್ಲಾನೂರ (ಖಜಾಂಚಿ), ವೆಂಕಟೇಶ ಬಸಪ್ಪ ಸತ್ಯಪ್ಪನವರು(ಪ್ರಧಾನ ಕಾರ್ಯದರ್ಶಿ), ಯಲ್ಲಪ್ಪ ಬೀಮಪ್ಪ ಜೋಗಿನ (ಸಹ ಕಾರ್ಯದರ್ಶಿ), ಮಾರುತಿ ಪರಸುರಾಮಪ್ಪ ಮ್ಯೆಗೇರಿ (ಸಂಘಟನ ಕಾರ್ಯ), ಬಾಳಪ್ಪ ಯಲ್ಲಪ್ಪ ಗಂಗರಾಹುತರ (ಕಾರ್ಯ ಅಧ್ಯಕ್ಷರು), ಕರಿಯಪ್ಪ ಹುಚ್ಚಪ್ಪ ಬಾಬರಿ (ಸಂಘಟನೆ ಸಲೆಹೆಗಾರರು), ಶರಣಪ್ಪ ಕಲ್ಲಪ್ಪ ಜೋಗಿನ (ಸಮೀತಿ ಕಾರ್ಯದರ್ಶಿ), ಕರಿಯಪ್ಪ ಮಲ್ಲಪ್ಪ ಮಾಯನ್ನನವರು (ಸಮೀತಿಯ ಸದಸ್ಯರು), ತಿಮ್ಮಾಪೂರ ಗ್ರಾಮದಲ್ಲಿ ಇನ್ನೂಳಿದ 90 ಜನ ರೈತರನ್ನು, ರೈತ ಸಂಘದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ನೇತೃತ್ವದಲ್ಲಿ ತಿಮ್ಮಾಪೂರ ಗ್ರಾಮ ಸಂಘಟನೆಯನ್ನು ಆಯ್ಕೆ ಮಾಡಲಾಯಿತು ಎಂದು ಯಲ್ಪಪ್ಪ ಹುಚ್ಚಪ್ಪ ಬಾಬರಿ ಪ್ರಕಟಣೆಯಲ್ಲಿ ತಿಳಿಸಿದರು.