ರೋಣ: ಗಜೇಂದ್ರಗಡ ತಹಶೀಲ್ದಾರ್ ತೋರಿದ ಪತ್ರಿಕಾ ಪ್ರತಿನಿಧಿ ಮೇಲೆ ತೋರಿದ ದರ್ಪ ಖಂಡಿಸಿ ರೋಣ ತಾಲೂಕ ಕಾರ್ಯ ನಿರತ ಪತ್ರಕರ್ತ ಸಂಘದಿಂದ ಮನವಿ ಸಲ್ಲಿಸಲಾಯಿತು.
ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಸುದ್ದಿ ಮಾಡಲು ಹೋದ ವರದಿಗಾರನ ಮೇಲೆ ಗಜೇಂದ್ರಗಡ ದಂಡಾಧಿಕಾರಿ ಅಶೋಕ ಕಲಘಟಗಿ ಅವರು ಅಧಿಕಾರದ ಮದದಲ್ಲಿ ಅಹಂಕಾರದಿಂದ ನಿನ್ನನ್ನು ಡಿಸ್ಮಿಸ್ ಮಾಡುತ್ತೇನೆ ಎಂದು ಅವಾಜ್ ಹಾಕಿರುವ ಘಟನೆ ಗುರುವಾರ ನಡೆದಿದೆ. ಪತ್ರಿಕಾ ಸ್ವಾತಂತ್ರ ಕಿತ್ತು ಕೊಳ್ಳುತ್ತಿರುವ ಇಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ರೋಣ ತಹಸೀಲ್ದಾರರ ಮುಖಾಂತರ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಶೋಕ ಕಲಘಟಗಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸದೇ ಹೋದರೆ ಮುಂದಿನ ದಿನಮಾನಗಳಲ್ಲಿ ಜಿಲ್ಲಾದ್ಯಾಂತ ಉಗ್ರ ಪ್ರತಿಭಟನೆ ಮಾಡಲಾಗುವದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರೋಣ ಕಾರ್ಯನಿರತ ಪತ್ರ ಕರ್ತರಾದ ಯಚ್ಚರಗೌಡ ಗೋವಿಂದಗೌಡರ, ಯಲ್ಲಪ್ಪ ತಳವಾರ, ಕೆ.ಡಿ. ಇಟಗಿ, ಚಂದ್ರು ನೆಲ್ಲೂರ, ಎಮ್.ಎಚ್.ಮೊತೆಖಾನ್, ಸೋಮಶೇಖರ್ ಲದ್ದಿಮಠ, ಪಿ.ಎಸ್.ಪಾಟೀಲ, ಪ್ರಕಾಶ ಗುದ್ನೇಪ್ಪನವರ, ಗಂಗಾಧರ ಕಿರೇಸೂರ ಇನ್ನಿತರರು ಪಾಲ್ಗೊಂಡಿದ್ದರು.