ಗದಗ: ಈ ಘಟನೆ ನಡೆಯಬಾರದಿತ್ತು. ಘಟನೆಗೆ ಸಂಬಂಧಿಸಿದಂತೆ ಈ ರೀತಿ ಮುಂದೆ ಆಗದಂತೆ ಎಚ್ಚರಿಕೆ ವಹಿಸುತ್ತೇನೆ. ನನ್ನಿಂದ ತಪ್ಪಾಗಿದೆ ಎಂದು ಗಜೇಂದ್ರಗಡ ತಹಶೀಲ್ದಾರ್ ಅಶೋಕ್ ಕಲಘಟಗಿ ಉತ್ತರಪ್ರಭಕ್ಕೆ ತಪ್ಪೊಪ್ಪಿಕೊಂಡಿದ್ದಾರೆ.
ಗಜೇಂದ್ರಗಡ ತಾಲೂಕಿನ ನರೇಗಲ್ಲ್ ಹೋಬಳಿಯಲ್ಲಿ ಗುರುವಾರ ಮಾದ್ಯಮ ಪ್ರತಿನಿಧಿಯ ಮೇಲೆ ತಹಶೀಲ್ದಾರ ದರ್ಪ ತೋರಿದ ಆರೋಪ ಕೇಳಿ ಬಂದಿತ್ತು.
ಜನಸಾಮಾನ್ಯರು ಆಧಾರ ಕೇಂದ್ರದಿಂದ ಸಮಸ್ಯೆ ಅನುಭವಿಸುತ್ತಿರುವ ಕುರಿತು ತಹಶೀಲ್ದಾರರ ಬಳಿ ತಮ್ಮ ಅಳಲನ್ನು ಹೇಳಿಕೊಳ್ಳುವಾಗ ವರದಿಗಾರನ ಕೈಯಲ್ಲಿದ್ದ ಮೊಬೈಲ್ ಕಸಿಯಲು ಪ್ರಯತ್ನಿಸಿದ್ದಲ್ಲದೆ. ನಿನಗೆ ವಿಡಿಯೋ ಹಾಗು ಫೋಟೊ ತೆಗೆಯಲು ಅನುಮತಿ ನೀಡಿದವರು ಯಾರು? ನಿನ್ನನ್ನು ಡಿಸ್ಮಿಸ್ ಮಾಡ್ತಿನಿ ಎಂದು ಆವಾಜ್ ಹಾಕಿದ್ದರು.
ಈ ಬಗ್ಗೆ ಉತ್ತರಪ್ರಭ ಪತ್ರಿಕೆ ಹಾಗು ಸುದ್ದಿ ತಾಣದಲ್ಲಿ ವರದಿ ಬಿತ್ತರಿಸಿತ್ತು. ಜೊತೆಗೆ ರೈಸ್ ಆಪ್ ಗದಗ ಕೂಡ ಸುದ್ದಿ ಬಿತ್ತರಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತಹಶೀಲ್ದಾರ ವರ್ತನೆ ವ್ಯಾಪಕ ಖಂಡನೆಗೂ ಕಾರಣವಾಗಿತ್ತು. ಇನ್ನು ರೋಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೆಳೆಯರು ಘಟನೆ ಖಂಡಿಸಿ ಕ್ರಮಕ್ಕೆ ಆಗ್ರಹಿಸಿ ರೋಣ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಮಾದ್ಯಮ ಗೆಳೆಯರ ಈ ಕಾರ್ಯ ನಿಜಕ್ಕೂ ಆತ್ಮಸ್ಥೈರ್ಯ ತುಂಬುವಂಥದ್ದು. ಇನ್ನು ಮುಖ್ಯವಾಗಿ ಘಟನೆ ಬಗ್ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿ ಪತ್ರಕರ್ತರೆ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಹೇಳುವ ಮೂಲಕ ನೈತಿಕ ಬಲ ತುಂಬಿದರು. ನಿಜಕ್ಕೂ ಜನಪರವಾಗಿ, ಜನರ ಧ್ವನಿಯಾಗುವತ್ತು ಪ್ರಯತ್ನಿಸುತ್ತಿರುವ ಉತ್ತರಪ್ರಭ ತಂಡಕ್ಕೆ ಸಂಘಟನೆಗಳು, ಮಾದ್ಯಮದ ಸಹೋದ್ಯೋಗಿ ಮಿತ್ರರು, ಪ್ರಮುಖರು, ಹೋರಾಟಗಾರರು, ರೈತರು, ಜನಸಾಮಾನ್ಯರು ನೀಡಿದ ನೈತಿಕ ಬೆಂಬಲ ನಮ್ಮ ಉತ್ಸಾಹ ಇಮ್ಮಡಿಗೊಳಿಸಿದೆ.
1 comment
Good job Sir