ಲಕ್ಷ್ಮೇಶ್ವರ: ಬೀದಿಬದಿ ವ್ಯಾಪಾರಸ್ಥರು ಕೊರೋನಾ ಪರಿಣಾಮದಿಂದಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದು ಅವರ ಅನುಕೂಲಕ್ಕಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಮಹೇಶ್ ಹೊಗೆಸೊಪ್ಪಿನ್ ಹೇಳಿದರು.
ಅವರು, ಪಟ್ಟಣದಲ್ಲಿ ಬುಧವಾರ ಬೀದಿಬದಿ ವ್ಯಾಪಾರಸ್ಥರ ದಿನಾಚಣೆ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಬೀದಿಬದಿ ವ್ಯಾಪಾಸ್ಥರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಹಾಗು ಅವರ ಬವಿಷ್ಯಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಈ ಮೂಲಕ ಅವರಿಗೂ ಸಹ ಸಮಾಜದಲ್ಲಿ ಉತ್ತಮ ರೀತಿಯ ಬದುಕು ನಡೆಸಲು ಯೋಜನೆಗಳನ್ನು ಜಾರಿಗೆ ತರಬೇಕು. ಬಿದಿಬದಿ ವ್ಯಾಪಾರಸ್ಥರು ಅಲ್ಪಸ್ವಲ್ಪ ಬಂಡವಾಳ ತೊಡಗಿಸಿ ಜೀವನ ನಿರ್ವಹಣೆ ಮಾಡುತ್ತಿದ್ದು ಪ್ರತಿದಿನವೂ ಅವರಿಗೆ ಬೇಕಾಗುವ ಬಂಡವಾಳವನ್ನು ನೀಡಬೇಕು ಎಂದು ಆಗ್ರಹಿಸಿದರು.
ದಾದಾಪೀರ ಬೆಂಡಿಗೇರಿ, ಸುಲೇಮಾನ ಕಟಗಿ, ಮುನಿರಸಾಬ ಸಿದ್ದಾಪೂರ, ಮಂಜು ಬಸಾಪೂರ, ಹನಮಂತಪ್ಪ ರಾಮಗೇರಿ, ಮಹೇಶ ಬಮ್ಮನಹಳ್ಳಿ, ಇಸ್ಮಾಲ್ ಆಡೂರ್, ಮಾಬೂಸಾಬ ಅಣ್ಣಿಗೇರಿ ಇದ್ದರು.