ಲಕ್ಷ್ಮೇಶ್ವರ: ಸರ್ಕಾರ ಅನೇಕ ಯೋಜನೆಗಳನ್ನು ಅದರಲ್ಲೂ ಮುಖ್ಯವಾಗಿ ನೀರಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಕೇವಲ ಪೈಪ್ ಹಾಕಿ ಟ್ಯಾಂಕರ್ ನಿರ್ಮಿಸಿದರೆ ಇಲಾಖೆಯ ಜವಾಬ್ದಾರಿ ಮುಗಿಯುವುದಿಲ್ಲ. ನೀರು ಸರಬರಾಜು ಆಗುತ್ತದೆಯೋ ಇಲ್ಲೋವೋ ಎನ್ನುವುದನ್ನು ಅಧಿಕಾರಿಗಳು ಮನದಟ್ಟ ಮಾಡಿಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಗುರಿಕಾರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾ.ಪಂ ಸಾಮಾನ್ಯ ಸಭೆಯೂ ಅಧ್ಯಕ್ಷ ಪರಶಪ್ಪ ಇಮ್ಮಡಿ ಅಧ್ಯಕ್ಷತೆಯಲ್ಲಿ ಜರುಗಿತು. ತಾ.ಪಂ ಸದಸ್ಯರಾದ ಗಿರಜವ್ವ ಲಮಾಣಿ, ಸುಶೀಲವ್ವ ಲಮಾಣಿ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಮೊಟ್ಟೆ ಪೂರೈಕೆ ಆಗುತ್ತಿಲ್ಲ. ಕಾರ್ಯಕರ್ತರನ್ನು ಪ್ರಶ್ನಿಸಿದರೆ ನಾವೆ ಕೈಯಿಂದ ಹಣ ಕೊಟ್ಟು ಮೊಟ್ಟೆ ತರಬೇಕಾಗಿದೆ.
ಅನುದಾನ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಿಡಿಪಿಓ ಅವರಿಗೆ ಪ್ರಶ್ನಿಸಿದಾಗ ಗಲಿಬಿಲಗೊಂಡ ಸಿಡಿಪಿಓ, ಅನುದಾನ ಸಮರ್ಪಕವಾಗಿ ಬಿಡುಗಡೆಯಾಗದಿರುವುದರಿಂದ ಈ ಗೊಂದಲ ಉಂಟಾಯಿತು. ಈಗ ಎಲ್ಲವೂ ಸರಿಯಾಗಿದ್ದು ಮುಂಚಿತವಾಗಿ ಮೊಟ್ಟೆ ಖರೀದಿಗೆ ಹಣ ನೀಡಲಾಗುವುದು ಎಂದು ಹೇಳಿದರು.
ಪರಶಪ್ಪ ಇಮ್ಮಡಿ ಮಾತನಾಡಿ, ಪ್ರಮುಖವಾಗಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಮೇಲೆ ನಡೆದ ಚರ್ಚೆಯಲ್ಲಿ ಆದ್ರಳ್ಳಿ, ಬಟ್ಟೂರು, ಬಾಳೆಹೋಸೂರು ಮತ್ತಿತ್ತರ ಗ್ರಾಮಗಳಲ್ಲಿ ಬೇಸಿಗೆ ಪೂರ್ವದಲ್ಲಿಯೇ ನೀರಿನ ಹಾಹಾಕಾರ ತಲೆದೂರಿದೆ. ಸರಕಾರ ನೀರು ಸರಬರಾಜಿಗಾಗಿ ಕೋಟಿ ಕೋಟಿ ಹಣ ವಿನಿಯೋಗಿಸುತ್ತಿದ್ದರು, ಇಲಾಖೆಯು ಜವಾಬ್ದಾರಿಯಿಂದ ಕಾರ್ಯನಿರ್ವಹಿಸದೆ. ಇರೋದರಿಂದ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಜಿಪಂ, ಅರಣ್ಯ ಸಾಮಾಜಿಕ ಅರಣ್ಯ, ಶಿಕ್ಷಣ ಸೇರಿದಂತೆ ಅನೇಕ ಇಲಾಖೆಗಳ ಮೇಲೆ ಚರ್ಚೆ ಜರುಗಿತು.
ಜಿ.ಪಂ ಇಲಾಖೆಯ ಶ್ರೀಧರ, ಆರ್ಡ್ಲೂಎಸ್ ಮಲ್ಲಿಕಾರ್ಜುನ, ಸಿ. ತೋಟಗಾರಿಕೆ ಇಲಾಖೆಯ ಸುರೇಶ ಕುಂಬಾರ, ಶಿಕ್ಷಣ ಇಲಾಖೆಯ ಆರ್.ಎಸ್.ಬುರಡಿ ಲೋಕೋಪಯೋಗಿ ಇಲಾಖೆಯ ನರೇಂದ್ರ. ಡಿ.ಬಿ, ಅರಣ್ಯ ಇಲಾಖೆಯ ಎಚ್.ಮುಲ್ಲಾ, ತಾ.ಪಂ. ಉಪಾಧ್ಯಕ್ಷೆ ಜನನಿ ಅತ್ತಿಗೇರಿ, ಸುಶೀಲವ್ವ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.