ಡಾ.ಮಹೇಶ್ ಬುಜರಿ ಅವರ ಜೊತೆಗೆ ಡಾ. ಬಸವರಾಜ್ ಡಿ. ತಳವಾರ ಅವರು ಉತ್ತರಪ್ರಭಕ್ಕೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ..

ಸಂದರ್ಶಕ: ಆಯುರ್ವೇದದ ಮೂಲಕ ಕೊರೊನಾ ಮುಂಜಾಗ್ರತೆ ಹೇಗೆ ಕೈಗೊಳ್ಳಬೇಕು?
ಡಾ.ಬುಜರಿ: ಕೊರೊನಾ ಅಂದ್ರೆ ಜನರು ಭಯ ಪಡುತ್ತಿದ್ದಾರೆ. ಅದರ ಬಗ್ಗೆ ಭಯ ಬೇಡ ಮುಂಜಾಗ್ರತೆ ಬೇಕು. ಈ ಬಗ್ಗೆ ವೈದ್ಯಕೀಯ ಕ್ಷೇತ್ರದಲ್ಲಿರುವ ನಾವುಗಳು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಅಂದಾಗ ಮಾತ್ರ ಜನರಲ್ಲಿರುವ ಭಯ ಹೋಗುತ್ತದೆ. ಮುಂಜಾಗೃತ ಕ್ರಮ ಕೈಗೊಂಡರೆ ಖಂಡಿತವಾಗಿಯೂ ಕೊರೊನಾ ನಿಯಂತ್ರಣ ಸಾಧ್ಯ.


ಸಂದರ್ಶಕ: ಆಯುರ್ವೆದಲ್ಲಿ ಕೊರೊನಾಕೆ ಪರಿಹಾರ ಏನು?
ಡಾ.ಬುಜರಿ: ಆಯುರ್ವೇದ ಅನ್ನುವುದೇ, ನಿಸರ್ಗದತ್ತವಾಗಿ ಸಿಗುವಂತ ಗಿಡಮೂಲಿಕೆಗಳನ್ನು ಬಳಸಿ ದೇಹದ ರೋಗವನ್ನು ಕಡಿಮೆಗೊಳಿಸುವುದು. ಅಥವಾ ಯಾವುದೇ ರೋಗ ಬಾರದ ಹಾಗೆ ಮುಂಜಾಗೃತ ಕ್ರಮವಾಗಿ ನಾವು ಸೇವಿಸುವುದು ಆಗಿದೆ. ಹೀಗಾಗಿ ನಾವು ಸೇವಿಸುವ ಆಹಾರ ಸೇವನೆಯಲ್ಲಿಯೇ ಜಾಗೃತಿ ವಹಿಸಬೇಕು. ಈ ಮೂಲಕ ಕೊರೊನಾ ಮುಂಜಾಗೃತೆಯನ್ನು ನಾವು ಕೈಗೊಳ್ಳಬೇಕು. ಈಗ ಪ್ರಸ್ತುತ ಕೊರೊನಾ ಮುಂಜಾಗೃತೆ ಕ್ರಮವಾಗಿ ಒಂದು ಗ್ಲಾಸಿನಲ್ಲಿ ಬಿಸಿನೀರು, ಒಂದು ಚಮಚೆ ಅರಿಶಿಣ, ಎರಡು ಚಿಟಿಕೆ ಉಪ್ಪು ಬಳಸಿ ದಿನನಿತ್ಯ ಸೇವಿಸಬೇಕು. ಇದು ದೇಹದ ಉಷ್ಟವನ್ನು ಹೆಚ್ಚಿಸುತ್ತದೆ. ಈ ಮೂಲಕವಾಗಿ ನಾವು ದೇಹದ ರೋಗನಿರೊಧಕ ಶಕ್ತಿಯನ್ನು ಹೆಚ್ಚಿಸಬಹುದು.

ಸಂದರ್ಶಕ: ಋತುಗಳಲ್ಲಾಗುವ ದೈಹಿಕ ಬದಲಾವಣೆಗೆ ಆಹಾರ ಕ್ರಮ ಮುಖ್ಯವೇ?
ಡಾ.ಬುಜರಿ: ಇದಕ್ಕೆ ಪ್ರಕೃತಿದತ್ತವಾಗಿ ಸಿಗುವಂತಹ, ಆಯಾ ಋತುಮಾನಗಳಿಗೆ ಅನುಗುಣವಾಗಿ ಬೆಳೆಯುವ ಹಣ್ಣು, ತರಕಾರಿಗಳನ್ನು ಮಿತವಾಗಿ ಸೇವಿಸಬೇಕು. ಅದು ನಮ್ಮನ್ನು ಆರೋಗ್ಯವಂತರನ್ನಾಗಿಸಲು ಸಹಕಾರಿಯಾಗುತ್ತದೆ. ಅಗತ್ಯಕ್ಕೆ ತಕ್ಕಷ್ಟು ದೈಹಿಕ ಶ್ರಮವೂ ಇಲ್ಲಿ ಮುಖ್ಯವಾಗುತ್ತದೆ.

ಸಂದರ್ಶಕ: ಸಾಮಾನ್ಯ ಜನರು ಆಯುರ್ವೇದಿಕ್ ಚಿಕಿತ್ಸೆ ಪಡೆಯಬಹುದೇ?
ಡಾ.ಬುಜರಿ: ಹೌದು ನಾವು, ನಮ್ಮ ಚಿಕಿತ್ಸಾ ವ್ಯವಸ್ಥೆ ಇರುವುದೇ ಜನರ ಸೇವೆಗಾಗಿ. ಹೀಗಾಗಿ ನಮ್ಮ ಕೈಗೆಟುಕುವ ಹಾಗೂ ಮನೆಯಲ್ಲಿಯೇ ಇರುವಂತಹ ವಸ್ತುಗಳನ್ನು ಬಳಸಿಕೊಂಡು ಔಷಧಿ ಗುಣಗಳ ಆಹಾರ ಕ್ರಮವನ್ನು ಮನೆಯಲ್ಲಿಯೇ ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ವನಸ್ಪತಿ ಕೇಂದ್ರಗಳಿಗಳಿಗೂ ಭೇಟಿ ನೀಡಬಹುದು. ಅಲ್ಲಿ ನಿಮ್ಮ ಎಲ್ಲ ರೋಗಗಳಿಗೂ ಪರಿಹಾರ ಸಿಗುತ್ತದೆ.

ಸಂದರ್ಶಕ: ಇಂದು ನಾವು ಜೀವಿಸುವ ಬದುಕಿನ ಶೈಲಿ ಹೊಸ ರೋಗಕ್ಕೆ ಕಾರಣವೇ?
ಡಾ.ಬುಜರಿ:
ನಾವು ಸೂರ್ಯೋದಯದ ನಂತರದಲ್ಲಿ ಎಳುತ್ತಿದ್ದೇವೆ. ನಾವು ಏಳ ಬೇಕಾಗಿರುವುದು ಬ್ರಾಹ್ಮಿ ಮೂಹೂರ್ತದಲ್ಲಿ ಅಂದರೆ ಸುರ್ಯೋದಯಕ್ಕೂ ಮುಂಚೆನೆ ನಾವು ಎಳಬೇಕು. ಆದರೆ ಇಂದು ನಾವು ಎಳುವ ಸಮಯಲ್ಲಿ ಬದಲಾವಣೆಯಾಗಿದೆ ಆಗಿದೆ. ಬೆಳಿಗ್ಗೆ ಬೇಗ ಏಳುವುದರಿಂದ ಅತೀ ಹೆಚ್ಚಾಗಿ ನಮಗೆ ಆಮ್ಲಜನಕ ಸಿಗುತ್ತದೆ. ಹೀಗಾಗಿ ನಾವು ನಮ್ಮ ಬದುಕಿನ ಶೈಲಿ ಬದಲಾಯಿಸಿಕೊಳ್ಳವುದು ಅನಿವಾರ್ಯ.

ಸಂದರ್ಶಕ: ದಿನಕ್ಕೆ ನಮ್ಮ ದೇಹಕ್ಕೆ ಎಷ್ಟು ನೀರು ಅಗತ್ಯವಿದೆ?
ಡಾ.ಬುಜರಿ: ನಮ್ಮ ದೇಹಕ್ಕೆ ಕನಿಷ್ಟ 750 ಎಂಎಲ್ ನೀರು ಬೇಕು. ಕನಿಷ್ಟ ನಾವು ಇಷ್ಟು ನೀರನ್ನು ಸೇವಿಸಬೇಕು. ಹೀಗಾಗಿ ಅತೀ ಹೆಚ್ಚು ನೀರನ್ನು ಕುಡಿದಷ್ಟು ನಾವು ಆರೋಗ್ಯವಾಗಿ ಇರುತ್ತೇವೆ. ಹೆಚ್ಚಿನ ನೀರು ದೇಹದಲ್ಲಿರುವ ವಿಷಯುಕ್ತ ಅಂಶಗಳನ್ನು ಹೊರ ಹಾಕುತ್ತದೆ. ಹೀಗಾಗಿ ನಾವು ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಬೇಕು.

Leave a Reply

Your email address will not be published. Required fields are marked *

You May Also Like

ಚಂದನ ಶಾಲೆಯ ಪುಟಾಣಿಗಳ ಕೊರೋನಾ ಜಾಗೃತಿ

ಶಾಲೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಕೊರೋನಾ ಬಗ್ಗೆ ನೀಡಿದ ಜಾಗೃತಿ ಸಂದೇಶ ಅದ್ಭುತವಾದದ್ದು. ಇಂತಹ ಪ್ರಯತ್ನಕ್ಕೆ ಮುಂದಾದ ಚಂದನ್ ಶಾಲೆಯ ಪ್ರಯತ್ನ ಕೂಡ ಸಾಮಾಜಿಕ ಕಾಳಜಿ ತೋರಿಸುವಂತಹದ್ದು.

ಕೊರೋನಾ ಕಾವ್ಯ ಸರಣಿ ಆರಂಭ

ಕೊರೋನಾ ಸಂಕಷ್ಟದ ಈ ದಿನಗಳಲ್ಲಿ ಮನೆಯಲ್ಲಿಯೇ ಕಾಲ ಕಳಿಯುತ್ತಾ ಸದಾ ಓದು ಬರಹದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರ ಸಂಖ್ಯೆ ಬಹಳಷ್ಟಿದೆ. ಹೀಗಾಗಿ ಕವಿಗಳಿಗೊಂದು ಸೂಕ್ತ ವೇದಿಕೆ ಕಲ್ಪಿಸಲು ಕೊರೋನಾ ಕಾವ್ಯ ಸರಣಿ ಆರಂಭಿಸಿದ್ದೇವೆ. ಆಸಕ್ತರು ಕೊರೋನಾ ಬಗ್ಗೆ ಬರೆದಿರುವ ಕವನ ಕಳುಹಿಸಬಹುದು.

ಮೆದುಳು ಜ್ವರ ಲಸಿಕಾಕರಣದ ಅಭಿಯಾನ ಯಶಸ್ವಿಗೊಳಿಸಿ:ಜಿಲ್ಲಾಧಿಕಾರಿ ವೈಶಾಲಿ

ಉತ್ತರಪ್ರಭ ಸುದ್ದಿ ಗದಗ: ಜಿಲ್ಲೆಯಾದ್ಯಂತ ಡಿಸೆಂಬರ್ 5 ರಿಂದ 24 ರವರೆಗೆ ಮೆದುಳು ಜ್ವರ ಲಸಿಕಾಕರಣವನ್ನು…

ಸರಳ, ಸಹೃದಯಿ ಡಾ. ಕೆ.ಎಸ್.ಪರಡ್ಡಿ

ದ್ರವ್ಯಗುಣ ವಿಭಾಗದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವೈದ್ಯ (ದಿನಾಂಕ: 31.05.2021 ರಂದು ವಯೋನಿವೃತ್ತಿ ಹೊಂದುತ್ತಿರುವ ನಿಮಿತ್ತ ಲೇಖನ) ಸರಳ; ಸದ್ಗುಣ ಸುಸ್ವಭಾವದ, ಕಾರ್ಯಸಾಧನಾ ಚಟುವಟಿಕೆಯುಳ್ಳವರೂ ಆಗಿರುವ ಪ್ರಾಧ್ಯಾಪಕ ಡಾ. ಕೆ.ಎಸ್.ಪರಡ್ಡಿಯವರು, ಗದುಗಿನ ಶ್ರೀ ಶಿವಾನಂದ ಬೃಹನ್ಮಠದ, ಸುಪ್ರಸಿದ್ದ ಡಿ.ಜಿ.ಎಂ.ಆಯುರ್ವೇದ ಮಹಾವಿದ್ಯಾಲಯದಲ್ಲಿ ದ್ರವ್ಯಗುಣ ವಿಭಾಗದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದುತ್ತಲಿದ್ದಾರೆ.