ಚೆನ್ನೈ : ನಟಿ ಖುಷ್ಬೂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ತಮಿಳುನಾಡಿನ ಚಿದಂಬರಂಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.
ವಿಸಿಕೆ ಪಕ್ಷದ ನಾಯಕ, ಸಂಸದ ತಿರುಮವಾಲವನ್ ಅವರು ಮನುಸ್ಮೃತಿಯ ಬಗ್ಗೆ ಹೇಳಿದ್ದನ್ನು ವಿರೋಧಿಸಿ, ಚಿದಂಬರಂಗೆ ತೆರಳುತ್ತಿದ್ದರು.
ಈ ಕುರಿತು ಖುಷ್ಬೂ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ನಮ್ಮನ್ನು ಬಂಧಿಸಿ ಪೊಲೀಸ್ ವ್ಯಾನ್ ನಲ್ಲಿ ಕರೆದೊಯ್ಯಲಾಗಿದೆ. ಮಹಿಳೆಯರ ಘಟನತೆಗಾಗಿ ನಾವು ನಮ್ಮ ಕೊನೆಯವರೆಗೂ ಹೋರಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ. ನಾವೂ ಅದೇ ಹಾದಿಯಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.
ವಿಡುತಲೈ ಚಿರುಥೈಗಲ್ ಕಡ್ಚಿ ಪಕ್ಷದ ನಾಯಕರು ಹಾಗೂ ಸಂಸದರಾಗಿರುವ ತಿರುಮವಾಲವನ್ ಅವರು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.