ನವದೆಹಲಿ : ದೇಶದಲ್ಲಿ  ಕೊರೊನಾ ಅಟ್ಟಹಾಸ ಪ್ರಾರಂಭವಾದ ಸಂದರ್ಭದಲ್ಲಿ  ಹಲವು ರಾಜ್ಯಗಳ ಅದರ ಹೊಡೆತಕ್ಕೆ ಸಿಲುಕಿ ನಲುಗಿದ್ದವು. ಆದರೆ, ಇಂದು ಅಂತಹ ರಾಜ್ಯಗಳಲ್ಲಿ ಕೂಡ ಚೇತರಿಕೆ ಕಂಡು ಬರುತ್ತಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದೇಶದ ಒಟ್ಟಾರೆ ಗುಣಮುಖರಾದ ಸೋಂಕಿತರ ಪ್ರಮಾಣದಲ್ಲಿ ಶೇ. 81ರಷ್ಟು ಪ್ರಕರಣಗಳು ಕೇವಲ ಈ 10 ರಾಜ್ಯಗಳಿಂದಲೇ ವರದಿಯಾಗಿದ್ದವು. ದೇಶದಲ್ಲಿ ನಿತ್ಯ ಸುಮಾರು 74 ಸಾವಿರ ಜನ ಸೋಂಕಿತರು ಗುಣಮುಖರಾಗುತ್ತಿದ್ದು, ಈ ಪೈಕಿ  ಶೇ. 81ರಷ್ಟು ಗುಣಮುಖ ಪ್ರಕರಣಗಳು 10 ರಾಜ್ಯಗಳಿಂದ ವರದಿಯಾಗುತ್ತಿವೆ. ಅಷ್ಟೆ ಅಲ್ಲದೇ, ಈ 10 ರಾಜ್ಯಗಳಲ್ಲಿಯೇ ದೇಶದ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 48ರಷ್ಟು ಇದೆ. 

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು, ಇಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 16,177 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 13,217 ಜನ ಗುಣಮುಖರಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಕೇರಳದಲ್ಲಿ 7,593 ಜನ ಸೋಂಕಿತರು ಗುಣಮುಖರಾಗಿದ್ದು, ತಮಿಳುನಾಡಿನಲ್ಲಿ 4,314, ಆಂಧ್ರ ಪ್ರದೇಶದಲ್ಲಿ 3,723, ಪಶ್ಚಿಮ ಬಂಗಾಳದಲ್ಲಿ 3, 608, ಛತ್ತೀಸ್ ಘಡದಲ್ಲಿ 2,996, ರಾಜಧಾನಿ ದೆಹಲಿಯಲ್ಲಿ 2,727, ರಾಜಸ್ಥಾನದಲ್ಲಿ 2,654 ಮತ್ತು ಉತ್ತರ  ಪ್ರದೇಶದಲ್ಲಿ 2,581 ಜನ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

Leave a Reply

Your email address will not be published. Required fields are marked *

You May Also Like

ಆಗಸ್ಟ್ 15ಕ್ಕೆ ದೇಶಕ್ಕೆ ಕೊರೋನಾ ಮೆಡಿಸಿನ್ ಸಿಗುತ್ತಾ?

ಕೊರೋನಾ ಲಸಿಕೆ ಉತ್ಪಾದನೆ ಹೇಗೆ? ದೆಹಲಿ: ಜುಲೈ 3 ಶುಕ್ರವಾರದಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್…

ಯಾವುದೇ ಆತಂಕ ಬೇಡ ಅಮಿತ್ ಶಾ ಆರೋಗ್ಯವಾಗಿದ್ದಾರಂತೆ

ನಾನು ಆರೋಗ್ಯವಾಗಿದ್ದೇನೆ. ಯಾವುದೇ ಆತಂಕಕ್ಕೆ ಆಸ್ಪದವಿಲ್ಲ ಎಂದು ಗೃಹ ಮಂತ್ರಿ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ಮೂರನೇ ಅಲೆ ಶುರುವಾಗಿದೆಯೇ?

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಮಹಾಮಾರಿಯ ಅಬ್ಬರ ಶುರುವಾಗಿದೆ. ಅಲ್ಲದೇ, ನಗರದಲ್ಲಿ ಮೂರನೇ ಅಲೆ ಶುರುವಾಗಿದೆ ಎಂಬ ಆತಂಕ ಶುರುವಾಗಿತ್ತು. ಸದ್ಯ ಮೂರನೇ ಅಲೆ ಶುರುವಾಗಿರುವುದನ್ನು ಸ್ವತಃ ಸಿಎಂ ಅರವಿಂದ್ ಕೇಜ್ರಿವಾಲ್ ಅವರೇ ಒಪ್ಪಿಕೊಂಡಿದ್ದಾರೆ.

ಒಂದು ವರ್ಷದವರೆಗೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ: ಉಲ್ಲಂಘನೆಗೆ 10 ಸಾವಿರ ದಂಡ

ತಿರುವನಂತಪುರ: ಇನ್ನೂ ಒಂದು ವರ್ಷ ಕಾಲ ಫೇಸ್ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ನಿಯಮ…