ಅಬುಧಾಬಿ : ಭಾರತ ತಂಡದ ನಾಯಕ ಹಾಗೂ ಆರ್ ಸಿಬಿಯ ಕಿಂಗ್ ಕೊಹ್ಲಿ ಶಾಲಾ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಆರ್ ಸಿಬಿ ಪಂದ್ಯ ಗೆಲ್ಲುವ ಫೆವರಿಟ್ ತಂಡಗಳಲ್ಲಿ ಒಂದಾಗಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಉತ್ತಮ ಫಾರ್ಮ್ ನಲ್ಲಿ ಇದ್ದಾರೆ. ಬೌಲರ್ ಗಳು ಕೂಡ ಮಿಂಚುತ್ತಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಮೂರರಲ್ಲಿ ಸೋತು 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡವು ಬೆಂಗಳೂರಿನ ಬೌಲರ್ ಗಳ ಮಾರಕ ಬೌಲಿಂಗ್ ತಬ್ಬಿಬ್ಬಾದರು. ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 84 ರನ್ ಗಳಿಗೆ ಆಲ್ ಔಟ್ ಆಯಿತು. ಈ ಸುಲಭದ ಗುರಿ ಬೆನ್ನಟ್ಟಿದ ಆರ್‌ ಸಿಬಿ ತಂಡ ಇನ್ನೂ 6.3 ಓವರ್ ಬಾಕಿ ಇರುವಾಗಲೇ 8 ವಿಕೆಟ್ ಗಳ ಅಂತರದ ಜಯ ಗಳಿಸಿ 14 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ. 

ಪಂದ್ಯ ಗೆದ್ದಿರುವ ಖುಷಿಯಲ್ಲಿರುವ ಕೊಹ್ಲಿ ಟ್ವೀಟ್ ಮಾಡಿದ್ದು, ಈ ಫೋಟೋವನ್ನು ನೋಡುತ್ತಿದ್ದರೆ, ನನ್ನ ಶಾಲಾ ದಿನಗಳೇ ನನಗೆ ನೆನಪಿಗೆ ಬರುತ್ತಿವೆ. ನಾಲ್ಕು ಹುಡುಗರು ಒಂದೇ ತರಗತಿಯವರು ಮತ್ತು ಎಬಿ ಮನೆಯಲ್ಲಿಯೇ ಹೋಂ ವಾರ್ಕ್ ಮಾಡಿ ತಯಾರಾಗಿ ಬಂದಿದ್ದಾರೆ. ಇದರ ಜೊತೆಗೆ ಉಳಿದ ಮೂವರು ಹುಡುಗರನ್ನು ತೊಂದರೆಗೆ ಸಿಲುಕಿಸಿದ್ದಾರೆ ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಗೇಮ್ಸ್ – ಗ್ರೌಂಡ್ ನಾಲೆಡ್ಜ್ ಮಕ್ಕಳಿಗೆ ಕೊಡಿ- ಎಂ.ವಿ.ಹಿರೇಮಠ

ಉತ್ತರಪ್ರಭ ಸುದ್ದಿ ಬಸವನ ಬಾಗೇವಾಡಿ: ಇಂದಿನ ಸ್ಪಧಾ೯ತ್ಮಕ ಯುಗದ ಆಟೋಟಗಳ್ಲಿ ಶಾಲಾ ಮಕ್ಕಳನ್ನು ಸಕ್ರಿಯವಾಗಿ ಭಾಗವಹಿಸುವಂತೆ…

ಚಿಕ್ಕ ವಯಸ್ಸಿನಲ್ಲಿಯೇ ಐಪಿಎಲ್ ನಲ್ಲಿ ಅಬ್ಬರಿಸಿದ ವೀರರು ಇವರು!

ದುಬೈ : ಐಪಿಎಲ್ ನ 6ನೇ ಪಂದ್ಯದ ಸಮಯದಲ್ಲಿ ಭಾರತದ ಯುವ ಆಟಗಾರ ಪೃಥ್ವಿ ಶಾ…

ಕೋಲ್ಕತ್ತಾ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ ದಿನೇಶ್ ಕಾರ್ತಿಕ್!

ಅಬುಧಾಬಿ : ಕೋಲ್ಕತ್ತಾ ತಂಡದ ನಾಯಕತ್ವ ಸ್ಥಾನದಿಂದ ದಿನೇಶ್ ಕಾರ್ತಿಕ್ ಹಿಂದೆ ಸರಿದಿದ್ದಾರೆ.

ರೈನಾರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಪಟ್ಟು ಹಿಡಿದ ಅಭಿಮಾನಿಗಳು!

ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾರೂ ಊಹಿಸದ ರೀತಿಯಲ್ಲಿ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಸೋಲು ಕಾಣುತ್ತಿದೆ.