ಬೆಂಗಳೂರು : ಚಿರಂಜೀವಿ ಸರ್ಜಾಗೆ ಗಂಡು ಮಗು ಜನಿಸಿದ್ದಕ್ಕೆ ಹಿರಿಯ ನಟಿ ತಾರಾ ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ಅಂದೇ ಹೇಳಿದ್ದೆ. ಚಿರು ಮತ್ತೆ ಹುಟ್ಟಿ ಬರುತ್ತಾನೆ ಎಂದು. ಮೇಘನಾಗೆ ಗಂಡು ಮಗು ಹುಟ್ಟಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ನಾನು ಚಿರು ಸಾವಿನ ದಿನವೇ ಚಿರು ಮತ್ತೆ ಬರುತ್ತಾನೆ ಎಂದು ಹೇಳಿದ್ದೆ. ಇಂದು ನಾನು ಹೇಳಿದ್ದ ಮಾತು ನಿಜವಾಗಿದೆ. ನನ್ನ ಈ ಖುಷಿಗೆ ಪಾರವೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಮೇಘನಾ ಧೈರ್ಯವಂತೆ, ಚಿರು ಇಲ್ಲದ ಕಷ್ಟದ ದಿನಗಳನ್ನು ಆಕೆ ಧೈರ್ಯದಿಂದ ಎದುರಿಸಿದ್ದಾಳೆ. ಈಗ ಮತ್ತೆ ಚಿರು ಬಂದಿದ್ದಾನೆ. ಮತ್ತೆ ಮೇಘನಾಳ ಕುಟುಂಬದಲ್ಲಿ ನಗೆ ಬೀಸಿದೆ ಎಂದು ಹೇಳಿದ್ದಾರೆ.

ಚಿರು ಸ್ನೇಹಿತ ಪನ್ನಗಾಭರಣ ಈ ಕುರಿತು ಸಂತಸ ಹಂಚಿಕೊಂಡಿದ್ದು, ಚಿರಂಜೀವಿ ಮತ್ತೆ ಹುಟ್ಟಿ ಬರುತ್ತಾನೆ ಎಂಬ ನಿರೀಕ್ಷೆ ಇತ್ತು. ವಿಶೇಷ ಎಂದರೆ ಚಿರಂಜೀವಿ ಹಾಗೂ ಮೇಘನಾ ನಿಶ್ಚಿತಾರ್ಥದ ದಿನವೇ ಮಗು ಹುಟ್ಟಿರುವುದು ತುಂಬಾ ಸಂತಸ ತಂದಿದೆ. ಚಿರು ಮತ್ತೆ ಸಿಕ್ಕ ಖುಷಿಯಾಗುತ್ತಿದೆ. ಈ ತಿಂಗಳಲ್ಲಿಯೇ ಚಿರು ಸಹ ಹುಟ್ಟಿದ್ದು, ಅವನು ಅಂದುಕೊಂಡತೆಯೇ ಎಲ್ಲ ನೆರವೇರಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಡ್ರಗ್ಸ್ ಮಾಫಿಯಾ – ವಿಚಾರಣೆಗೆ ಹಾಜರಾದ ನಿರೂಪಕಿ ಅನುಶ್ರೀ!

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಹಾಗೂ ಕಿರುತೆರೆ ನಟಿ ಅನುಶ್ರೀ ಅವರು ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಇಂದ್ರಸೇನಾ ಅವತಾರ ತಾಳಲಿದ್ದಾರೆ ಶಿವಣ್ಣ!

ಬೆಂಗಳೂರು: ನಟ ಶಿವಣ್ಣ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. ಅಲ್ಲದೇ, ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.…

ಸಹೃದಯಿ ಗಾಯನದ ದೈತ್ಯ ಪ್ರಭೆ: ಎಸ್.ಪಿ.ಬಿ.‌

ನಟ, ಗಾಯಕ, ನಿರ್ಣಾಯಕ ಹೀಗೆ ಹತ್ತಾರು ವಿಭಿನ್ನ ರೀತಿಯಲ್ಲಿ ಪರದೆ ಮೇಲೆ ಮೂಡುತ್ತಿದ್ದ ಎಸ್.ಪಿ. ಅತಿ ಸೂಕ್ಷ್ಮ ಜೀವಿ. ಸಾವಿರಾರು ಹಾಡುಗಳನ್ನು ನೂರಾರು ಗಾಯಕರು ಹಾಡಿ ಕೀರ್ತಿ ಗಳಿಸಿದ್ದಾರೆ. ಆದರೆ ಎಸ್.ಪಿ. ತರಹ ಕಲೆಯ ವಿವಿಧ ಮಗ್ಗುಲುಗಳನ್ನು ಅರ್ಥ ಮಾಡಿಕೊಂಡವರು ವಿರಳ. ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಮೂಡಿ ಬಂದ ಜನಪ್ರಿಯ ಶೋ.