ಗಜೇಂದ್ರಗಡ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸಮೀಪದ ಕುರಹಟ್ಟಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಶಾಸಕ ಕಳಕಪ್ಪ ಬಂಡಿ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಶಿವಾನಂದ ಮಲ್ಲಾಪುರ, ಮುತ್ತಣ್ಣ ಯರಗಟ್ಟಿ, ಸಿದ್ದಾರೂಢ ಐಹೋಳಿ, ಹನಮಂತಪ್ಪ ಅಡಗಲ್ಲ, ಶಿವಾನಂದ ಹುಯಿಲಗೋಳ, ಮಂಜುನಾಥ ಮಂಗಳೂರ, ಸದಾಶಿವಯ್ಯ ಹಿರೇಮಠ, ಹನಮಂತಪ್ಪ ನಾಯ್ಕರ, ಮುತ್ತಣ್ಣ ಮೇಣಸಗಿ, ಬಸಯ್ಯ ನಂದಿಕೇಶ್ವರ, ಮಲ್ಲಪ್ಪ ಜಿಗಳೂರ, ಯಲ್ಲಪ್ಪ ಕುರಿ, ಅನ್ನಪ್ಪ ಹುಯಿಲಗೋಳ, ಈಶ್ವರಪ್ಪ ಕಮತರ ಸೇರಿದಂತೆ ಇತರರು ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಸೇರ್ಪಡೆಯಾದರು.
ಮುತ್ತಣ್ಣ ಕಡಗದ, ಅಶೋಕ ವನ್ನಾಲ, ಉಮೇಶ ಮಲ್ಲಾಪುರ, ಬಸವರಾಜ ಕೋತಬಾಳ ಸೇರಿ ಇತರರು ಇದ್ದರು.