ಲಕ್ಷ್ಮೇಶ್ವರ: 2020-21 ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.
ಚುನಾವಣೆಯಲ್ಲಿ ಎ” ವರ್ಗದ ಸದಸ್ಯ ಸಂಘಗಳಿಂದ ಈ ಕೆಳಕಂಡಂತೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ)
1.ಗದಿಗೆಪ್ಪ ಬಸಪ್ಪ ಯತ್ತಿನಹಳ್ಳಿ (ಲಕ್ಷ್ಮೇಶ್ವರ)
2.ಬಸನಗೌಡ ವೆಂಕನಗೌಡ ಪಾಟೀಲ್ (ಹೊಸೂರು)
3.ಸತೀಶಗೌಡ ಶಂಕರಗೌಡ ಪಾಟೀಲ್ (ಬಡ್ನಿ)
4.ಶೇಖಣ್ಣ ಮಲ್ಲಪ್ಪ ಕಾಳೆ (ರಾಮಗೇರಿ)
5.ಜಗದೀಶ ಬಸವಂತಪ್ಪ ಸಾಸಲವಾಡ (ದೇವಿಹಾಳ)
“ಸಿ” ವರ್ಗದ ಸದಸ್ಯರಿಂದ ಈ ಕೆಳಕಂಡಂತೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
1. ಸೋಮೇಶ ಜಗದೀಶ ಉಪನಾಳ (ಸಾಮಾನ್ಯ)
2. ಈರಣ್ಣ ಸೋಮಪ್ಪ ಮುಳುಗುಂದ (ಸಾಮಾನ್ಯ)
3. ಸುನಿಲ್ ಗಂಗಣ್ಣ ಮಹಾಂತಶೆಟ್ಟರ್ (“ಬ”ವರ್ಗ)
4. ವಿರುಪಾಕ್ಷಪ್ಪ ಗುಡ್ಡಪ್ಪ ಪಡಗೇರಿ (“ಅ” ವರ್ಗ)
5.ಲಲಿತಾ ಆನಂದ ಲಿಂಗಶೆಟ್ಟಿ (ಸಾಮಾನ್ಯ ಮಹಿಳೆ)
6.ಜಯಕ್ಕ ದುರ್ಗಪ್ಪ ಕಳ್ಳಿ (ಸಾಮಾನ್ಯ ಮಹಿಳೆ)
7.ಕುಬೇರಪ್ಪ ರಾಮಪ್ಪ ಬಾಗೇವಾಡಿ (ಪಪಂ)
8.ಮುತ್ತಪ್ಪ ಬಸವಣ್ಣೆಪ್ಪ ತುಂಬಣ್ಣವರ (ಪಜಾ)
ಅವಿರೋಧವಾಗಿ ಆಯ್ಕೆಯಾಗಲು ಶ್ರಮಿಸಿ, ಸಹಕರಿಸಿದ ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕರುಗಳಾದ ಜಿ.ಎಂ.ಮಹಾಂತಶೆಟ್ಟರ್, ಜಿ.ಎಸ್. ಗಡ್ಡದೇವರಮಠ, ಎಸ್.ಎನ್. ಪಾಟೀಲ್, ಶಿರಹಟ್ಟಿ ತಾಲೂಕಿನ ಮತ್ತು ಲಕ್ಷ್ಮೇಶ್ವರ ನಗರದ ವಿವಿಧ ಮುಖಂಡರು ಭಾಗಿಯಾಗಿದ್ದರು, ಅವಿರೋಧವಾಗಿ ಆಯ್ಕೆಯಾದ ಚುನಾಯಿತ ಸದಸ್ಯರಿಗೆ ಶುಭ ಹಾರೈಸಿದರು.