ಮುಂಡರಗಿ: ಜಿಎಚ್ಎಚ್ ಆಗ್ರೋ ಕೇಂದ್ರದ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕೇಂದ್ರ ಜಪ್ತಿ ಮಾಡಿದ ಘಟನೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ರಸಗೊಬ್ಬರ ವಲ್ಲದೆ ದಾಸ್ತನನ್ನು ರಸಗೊಬ್ಬರ ವೆಂದು ಮಾರಾಟ ಮಾಡಲು ದಾಸ್ತಾನು ಮಾಡಿದ್ದನ್ನು ಜಪ್ತಿ ಮಾಡಲಾಗಿದೆ. ಬೆಳಗಾವಿ ವಿಭಾಗ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ನೇತೃತ್ವದಲ್ಲಿ ಬೆಳಗಾವಿ ಜಾಗೃತ ಕೋಶದ ಉಪನಿರ್ದೇಶಕ ವೆಂಕಟರಮಣಪ್ಪ, ಬೆಳಗಾವಿ ವಿಭಾಗ ವಿಭಾಗ ಜಾಗೃತ ಕೋಶದ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ಕಿಣಗಿ, ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಪಟ್ಟದಕಲ್, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್ ತುಂಬಲಳ ನೇತೃತ್ವದ ತಂಡ ಅನಿರೀಕ್ಷಿತವಾಗಿ ಇಂದು ಜಿ.ಎಚ್.ಎಚ್ ಆಗ್ರೂ ಕೇಂದ್ರದ ಮೇಲೆ ದಾಳಿ ನಡೆಸಿತು.
ಈ ವೇಳೆ ಕೇಂದ್ರದಲ್ಲಿ ಅನಧಿಕೃತವಾಗಿ ರಸಗೊಬ್ಬರ ವಲ್ಲದೆ ದಾಸ್ತನನ್ನು ರಸಗೊಬ್ಬರವೆಂದು ಮಾರಾಟ ಮಾಡಲು ದಾಸ್ತಾನು ಮಾಡಿದ್ದನ್ನು ಜಪ್ತಿ ಮಾಡಿದರು. ರಸಗೊಬ್ಬರ ನಿಯಂತ್ರಣ ಆಜ್ಞೆ 1985 ರ ನಿಯಮ 2 (ಹೆಚ್ )ಹಾಗೂ ನಿಯಮ 19 (ಸಿ) (6)ಉಲ್ಲಂಘನೆ ಮಾಡಿರುವುದು ದೃಢ ಪಟ್ಟಿರುತ್ತದೆ.
ಮುಂದುವರೆದು ನಿಯಮ 28 (ಡಿ)ಅಡಿಯಲ್ಲಿ ಕೃಷಿ ಮಳಿಗೆಯ ರಸಗೊಬ್ಬರ ದಾಸ್ತಾನು ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಗದಗ ಇವರಿಗೆ ಅಗತ್ಯ ವಸ್ತುಗಳ ಕಾಯ್ದೆ 1955 ನಿಯಮ 6A ರಂತೆ ಗಮನಕ್ಕೆ ತರಲಾಗಿದ್ದು ಅಗತ್ಯ ವಸ್ತುಗಳ ಕಾಯ್ದೆ 1955 ರ ಹಾದಿಯಲ್ಲಿ ಅಪರಾಧಿಗಳಿಗೆ ಮೂರು ರಿಂದ ಏಳು ವರ್ಷದವರೆಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ) ತಿಳಿಸಿದ್ದಾರೆ.