ಇದೀಗ ಕೊರೊನಾದಿಂದ ಕಂಗೆಟ್ಟ ಜನರಿಗೆ ಪ್ರವಾಹ ಗಾಯದ ಮೇಲೆ ಬರೆ ಎಳೆದಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಮಲಪ್ರಭಾ ನದಿ ಪ್ರವಾಹ ಬಂದಿದ್ದು ಕೊಣ್ಣೂರು ಗ್ರಾಮದ ಜನರ ಬದುಕು ಮೂರಾಬಟ್ಟೆಯಾಗಿದೆ. ನಿನ್ನೆಯಷ್ಟೆ ಪ್ರವಾಹ ಇಳಿಕೆಯಾಗಿದ್ದು, ನದಿ ನೀರು ಒಳಹೊಕ್ಕ ಪರಿಣಾಮ ಪುಸ್ತಕಗಳೆಲ್ಲ ನೀರಿನಲ್ಲಿ ತೋಯ್ದಿವೆ. ಇದರಿಂದ ಪುಸ್ತಕಗಳ ಸ್ಥಿತಿ ಕಂಡ ವಿದ್ಯಾರ್ಥಿಗಳು ಮಮ್ಮಲ ಮರಗುತ್ತಿದ್ದಾರೆ.
You May Also Like
ಮಳೆಗೆ ವೆಂಕಟಾಪೂರ ರಸ್ತೆ ಸಂಪೂರ್ಣ ಕಡಿತ
ಮಸ್ಕಿ: ಶುಕ್ರವಾರ ರಾತ್ರಿ ಸುರಿದ ಮಳೆಗೆ ಕಿರು ಹಳ್ಳ ಹರಿದು ಬಂದು ವೆಂಕಟಾಪೂರ ರಸ್ತೆ ಕಡಿತವಾಗಿದೆ. ಈ ರಸ್ತೆ ಮಾರ್ಗದಲ್ಲಿ ಕಿರು ಹಳ್ಳ ಹರಿದು ಡಾಂಬರ್ ರಸ್ತೆ ಕಿತ್ತು ಹೋಗಿ ರಸ್ತೆ ಸಂಪೂರ್ಣ ಕಡಿತವಾಗಿದೆ. ಈಚೆಗೆ ಮಸ್ಕಿ ಪಟ್ಟಣದಿಂದ ವೆಂಕಟಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು, ಕಾಮಗಾರಿ ಕೈಗೊಳ್ಳುವ ವೇಳೆಯಲ್ಲಿ ಹಳ್ಳ ಬರುವ ಜಾಗದಲ್ಲಿ ಕಿರು ಸೇತುವೆ ನಿರ್ಮಿಸಬೇಕೆಂಬ ಪರಿಜ್ಞಾನ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಇಲ್ಲವೇ ಎಂದು ಸಾರ್ವಜನಿಕರು ದೂರಿದ್ದಾರೆ.
- ಉತ್ತರಪ್ರಭ
- September 26, 2020