ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ನಿಮ್ಮ ಅರ್ಹತೆ ಸಾಬೀತು ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಅಲ್ಲಿವರೆಗೂ ಯಾವುದೇ ಪದವಿ ಪಡೆಯುವಂತಿಲ್ಲ ಎಂದಿತ್ತು ಕೂಡ.

ಗದಗ: ಎಚ್. ವಿಶ್ವನಾಥ್ ಅವರನ್ನು ಎಂ.ಎಲ್.ಸಿ.ಯಾಗಿ ನಾಮ ನಿರ್ದೇಶನ ಮಾಡುವ ಮೂಲಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂಬ ಅನುಮಾನ ಜನಸಾಮಾನ್ಯರನ್ನು ಕಾಡುತ್ತಿದೆ.

ಸುಪ್ರೀಂಕೋರ್ಟ್

ಈ ಪ್ರಶ್ನೆ ಅವರನ್ನು ಸಾಹಿತ್ಯ ಕೋಟಾದಲ್ಲಿ ನೇಮಿಸಿದ್ದಕ್ಕೆ ಅಲ್ಲ, ಅವರು ಒಂದ್ ನಾಕು ಪುಸ್ತಕ ಗೀಚಿದ್ದನ್ನೇ ತೋರಿಸಿ ಸರ್ಕಾರ ಸಮರ್ಥಿಸಿಕೊಳ್ಳಬಹುದು. ಹಿಂದೆಯೂ ಹೀಗೆಯೇ ಮೇಲ್ಮನೆ ನಿರಾಶ್ರಿತರ ತಾಣವಾಗಿದೆ.

ಈಗ ಅದು ಬಿಡಿ, ಪ್ರಶ್ನೆ ಇರುವುದು ವಿಶ್ವನಾಥ್ ಅವರ ಅನರ್ಹತೆಯ ಟ್ಯಾಗ್ ಅಥವಾ ಕಳಂಕ ತೊಡೆದು ಹೋಯಿತೆ? ಸು್ಪ್ರೀಂಕೋರ್ಟ್ ಆದೇಶವನ್ನೇ ಉಲ್ಲಂಘಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಈ ದುಸ್ಸಾಹಸಕ್ಕೆ ಕೈ ಹಾಕಿದರೆ?

ನವೆಂಬರ್ 13ರ ಆದೇಶ

ಸಂವಿಧಾನದ 10 ನೆ ಶೆಡ್ಯೂಲ್ ಪ್ರಕಾರ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅಂದಿನ ಸ್ಪೀಕರ್ ರಮೇಶಕುಮಾರ್ ಶಾಸಕರನ್ನು ಅವರ ಶಾಸಕತ್ವದಿಂದ ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟಿಗೆ ಹೋಗಿದ್ದರು.

ಎರಡೂ ಕಡೆಯ ವಾದ ವಿವಾದ ಆಲಿಸಿದ ಸುಪ್ರೀಂಕೋರ್ಟ್ ಪೀಠ, ಸ್ಪೀಕರ್ ಕ್ರಮವನ್ನು ಎತ್ತಿ ಹಿಡಿದಿತ್ತು.  ಆದೇಶವನ್ನು ಬರೆದಿದ್ದ ನ್ಯಾಯಮೂರ್ತಿ ಎನ್.ವಿ ರಮಣ ಅವರು, ಈ ಪ್ರಕರಣದಲ್ಲಿ ಸ್ಪೀಕರ್ ತೆಗೆದುಕೊಂಡ ನಿರ್ಣಯ ಸರಿಯಾಗಿದೆ. ಆದರೆ ಈ ಅನರ್ಹ ಶಾಸಕರು ತೆರವು ಮಾಡಿದ ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಅಲ್ಲಿ ತಮ್ಮ ಅನರ್ಹತೆ ಕಳಂಕವನ್ನು ಪಣಕ್ಕಿಟ್ಟು ಹೋರಾಡಬಹುದು ಎಂದು ಆದೇಶಿಸಿದ್ದರು.

ಹಾಗೆಯೇ, ಸಂವಿಧಾನದ 75 (1 ಬಿ ), 164(1 ಬಿ) ಮತ್ತು 36(1 ಬಿ) ಪರಿಚ್ಛೇದಗಳನ್ನು ಉಲ್ಲೇಖಿಸಿದ್ದ ಸುಪ್ರೀಂಕೋರ್ಟ್ ಪುನ: ಅದನ್ನೇ ಒತ್ತಿ ಹೇಳಿತ್ತು:

“In the light of the existing constitutional mandate, the Speaker is not empowered to disqualify any member till the end of the term. However, a member disqualified under the Tenth Schedule shall be subjected to sanctions provided under Articles 75(1B), 164(1B) and 361B of Constitution, which provides for a bar from being appointed as a Minister or from holding any remunerative political post from the date of disqualification till the date on which the term of his office would expire or if he is re-elected to the legislature, whichever is earlier,” the court held.

ಇಲ್ಲಿನ 2 ವಿಷಯ ಗಮನಿಸಿ:

1.          ಅವರ ಅವಧಿ ಮುಗಿಯುವವರೆಗೂ ರಾಜಕೀಯ ಲಾಭಕರ ಹುದ್ದೆ ಕೊಡಬಾರದು.

2.        ಅವರು ಪುನರಾಯ್ಕೆ ಆಗುವವರೆಗೂ ರಾಜಕೀಯ ಲಾಭಕರ ಹುದ್ದೆ ಕೊಡಬಾರದು.

ಇವೆರಡರಲ್ಲಿ ಮೊದಲು ಯಾವುದು ಆಗುತ್ತದೋ ಅದು ಅನ್ವಯ ಆಗುತ್ತದೆ.

ಇಲ್ಲಿ re-elected ಪದದ ಸುತ್ತ ಹೋಗೋಣ. ಹುಣಸೂರು ಮತ್ತು ಹೊಸಕೋಟೆ ಉಪ ಚುನಾವಣೆಗಳಲ್ಲಿ ಎಂಟಿಬಿ ನಾಗರಾಜ್ ಮತ್ತು ಎಚ್. ವಿಶ್ವನಾಥ್ ಸೋತರು. ಅಂದರೆ ಅವರ ‘ಅನರ್ಹತೆ’ ಟ್ಯಾಗ್ ಹಾಗೇ ಇತ್ತು.

ಆದರೆ ಎಂಟಿಬಿ ನಾಗರಾಜ್ ಅವರು ಎಂಎಲ್ಸಿ ಚುನಾವಣೆಗೆ ‘ಸ್ಪರ್ಧಿಸಿ’ ಆಯ್ಕೆಯಾದರು ಎಂದು ಸಬೂಬು ಕೊಡಬಹುದು.

 ಆದರೆ, ವಿಶ್ವನಾಥ್ ನಾಮ ನಿರ್ದೇಶನಗೊಂಡಿದ್ದಾರೆ. ಇಲ್ಲಿ ಸುಪ್ರೀಂ ಹೇಳಿದ re-elect ಎಂಬ ಪದಕ್ಕೆ ಅರ್ಥ ಇದೆಯೇ? ಅವರು 2018ರಲ್ಲಿ ಗೆದ್ದಿದರಲ್ಲ, ಆ ಅವಧಿಯೂ ಮುಗಿದಿಲ್ಲ. ಅಂದ ಮೇಲೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆದಂತೆಯೇ ಅಲ್ಲವೇ?

Leave a Reply

Your email address will not be published. Required fields are marked *

You May Also Like

ಈ ನಟ ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲಿಗ!

ಡಿಯರ್‌ ಕಾಮ್ರೇಡ್‌, ಟ್ಯಾಕ್ಸಿವಾಲ, ನೋಟಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಧನೆ ಮಾಡಲಿಲ್ಲ. ಆದರೂ ಬಾಲಿವುಡ್ ನ ಕೆಲವು ನಾಯಕರನ್ನು ಮಣಿಸಿ ದೇವರಕೊಂಡ ಮುನ್ನುಗ್ಗುತ್ತಿದ್ದಾರೆ.

ಸತ್ತಲ್ಲಿ 20 ಜನರಿರಬೇಕು…ಮದ್ಯಕ್ಕೆ ಮಾತ್ರ ಸಾವಿರ ಜನರಿದ್ದರೂ ಸೈ!!

ಅಂತ್ಯ ಸಂಸ್ಕಾರಕ್ಕೆ 20 ಜನರ ಸೇರುವಂತಿಲ್ಲ. ಆದರೆ, ಮದ್ಯದಂಗಡಿಯ ಮುಂದೆ 1 ಸಾವಿರ ಜನರು ನಿಲ್ಲಬಹುದೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಟೀಕೆ ಮಾಡಿದೆ.

ಆಲಮಟ್ಟಿ ಹಳಕಟ್ಟಿ ಶಾಲೆಯಲ್ಲಿ ಅಮೃತ ಮಹೋತ್ಸವ ಸಂಭ್ರಮ ದೇಶಪ್ರೇಮ ಯುವಜನತೆಯಲ್ಲಿ ಚಿರಾಯುವಾಗಲಿ – ಜಿ.ಎಂ.ಕೋಟ್ಯಾಳ

ಉತ್ತರಪ್ರಭ ಸುದ್ದಿ ಆಲಮಟ್ಟಿ: ಜಾತಿ, ಮಥ, ಪಂಥ, ಧರ್ಮಕ್ಕಿಂತ ದೇಶ ದೊಡ್ಡದು. ಆ ಅಭಿಮಾನ,ಗೌರವಯುಳ್ಳ ದೇಶ…

ಯುವ ಘಟಕದ ಅಧ್ಯಕ್ಷರಾಗಿ ಅನಿಲ್ ಸಿದ್ದಮ್ಮನಹಳ್ಳಿ ನೇಮಕ

ಅನಿಲ್ ಕುಮಾರ್ ಸಿದ್ದಮ್ಮನಹಳ್ಳಿ ಅವರನ್ನು ಯುವ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ ಪತ್ರವನ್ನು ವಿತರಿಸಲಾಯಿತು.