ಯಾವುದೇ ಬ್ಯಾಂಕ್ ತನ್ನ ಜಾಗವನ್ನು ಇತರೆ ಉದ್ದೇಶಗಳಿಗಾಗಿ ಲೀಸ್ ಅಥವಾ ಬಾಡಿಗೆಗೆ ಕೊಡುವಂತಿಲ್ಲ.

ಮುಂಬೈ: ಖಾಸಗಿ ಬ್ಯಾಂಕಿನ ಮುಖ್ಯಸ್ಥರೊಬ್ಬರು ತಮ್ಮ ಪತ್ನಿಯ ಎನ್.ಜಿ.ಒ.ಗೆ ತಮ್ಮ ಬ್ಯಾಂಕಿನ ಪಕ್ಕದ ಜಾಗವನ್ನು ಬಳಸಿಕೊಳ್ಳಲು ನೀಡಿದ್ದ ವಿಷಯ ಈಗ ಬೆಳಕಿಗೆ ಬಂದಿದೆ. ತಿಂಗಳಿಗೆ ನಾಮಕಾವಸ್ಥೆ ಒಂದೇ ಒಂದು ರೂಪಾಯಿ ಬಾಡಿಗೆಯಷ್ಟೇ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ.

ಯೆಸ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ ಗಳು ದಿವಾಳಿ ಹೊಂದಿದ್ದರ ಹಿಂದೆ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರ ಸ್ವಾರ್ಥವಿತ್ತು ಎನ್ನುವುದನ್ನು ನೋಡಿದ್ದೇವೆ.

ಈಗ ಐಡಿಎಫ್ಸಿ ಬ್ಯಾಂಕ್ ಅಧ್ಯಕ್ಷ ರಾಜೀವ್ ಲಾಲ್ ದಕ್ಷಿಣ ಮುಂಬೈನ ಬ್ಯಾಂಕಿನ ಕೇಂದ್ರ ಕಚೇರಿಯ ಪಕ್ಕದ ಬೆಲೆಬಾಳುವ ಜಾಗವನ್ನು 2015-19ರ ಅವಧಿಗೆ ಅವರ ಪತ್ನಿಯ ಎನ್.ಜಿ.ಒ ಏಷ್ಯಾ ಸೊಸೈಟಿ ಇಂಡಿಯಾ ಸೆಂಟರ್ (ಎ.ಎಸ್ಐ.ಸಿ)ಗೆ ಕೇವಲ ಒಂದು ರೂ. ಮಾಸಿಕ ಬಾಡಿಗೆಗೆ ನೀಡಿದ್ದರು.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 6 ಮತ್ತು 9ರ ಪ್ರಕಾರ ಇದು ಅಪರಾಧ. 2015-18ರ ಅವಧಿಯಲ್ಲಿ ಲಾಲ್ ಬ್ಯಾಂಕಿನ ಎಂಡಿಯಾಗಿದ್ದರು. 2016-17 ಮತ್ತು 2017-18ರ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಅವರು ಮರೆಮಾಚಿದ್ದರು. 2018ರಲ್ಲಿ ಅವರು ಬ್ಯಾಂಕಿನ ಚೇರ್ಮನ್ ಆದ ಬಳಿಕ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಎಂದು ಹೆಸರು ಬದಲಾಯಿಸಲಾಗಿದೆ.

ಬ್ಯಾಂಕುಗಳ ಮ್ಯಾನೇಜರುಗಳು, ಎಂಡಿಗಳು ಮತ್ತು ಚೇರ್ಮನ್ಗಳು ಆರ್.ಬಿ.ಐ ನಿಯಮಾವಳಿ ಉಲ್ಲಂಘಿಸಿ ಸ್ವಾರ್ಥ ಮೆರೆಯುವ ಕಾರಣದಿಂದ ಬಹುಪಾಲು ಖಾಸಗಿ ಬ್ಯಾಂಕುಗಳು ತಮ್ಮ ಸಾಮಾನ್ಯ ಗ್ರಾಹಕರನ್ನು ವಂಚಿಸುತ್ತಿವೆ. ಲಾಲ್ ಪ್ರಕರಣ ಒಂದು ತಾಜಾ ಉದಾಹರಣೆ ಅಷ್ಟೇ. ಆರ್.ಬಿ.ಐ. ಏನು ಕ್ರಮ ಕೈಗೊಳ್ಳುತ್ತದೆ ನೋಡಬೇಕು.

Leave a Reply

Your email address will not be published. Required fields are marked *

You May Also Like

Игровые Автоматы Онлайн Бесплатно и на Реальные Деньги

Игровые Автоматы Онлайн Бесплатно и на Реальные Деньги Игровые автоматы играть бесплатно…

ಪೇಶೆಂಟ್ ನಂ.419 ಸೃಷ್ಟಿಸಿದ ಅವಾಂತರಕ್ಕೆ ಇಡೀ ರಾಜ್ಯವೇ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ?

ಕ್ವಾರೆಂಟೈನ್ ಮುಗಿಸಿ ಬಂದ 419 ವ್ಯಕ್ತಿಯಿಂದಾಗಿ ಬೆಂಗಳೂರಿನಲ್ಲಿ ಆತಂಕ ಮನೆ ಮಾಡಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ನಿನ್ನೆ ಈ ವ್ಯಕ್ತಿ ಐಸಿಯುನಲ್ಲಿಯೇ ಇದ್ದಾನೆ ಎಂದು ಹೇಳಲಾಗಿತ್ತು.

ಇಂಧಿರಾಗಾಂಧಿ ಭಾವಚಿತ್ರಕ್ಕೆ ಮಸಿ: ಆರೋಪಿ ಬಂಧನ

ದಾವಣಗೆರೆ: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ…

ಚಂದನ ಶಾಲೆಯ ಪುಟಾಣಿಗಳ ಕೊರೋನಾ ಜಾಗೃತಿ

ಶಾಲೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಕೊರೋನಾ ಬಗ್ಗೆ ನೀಡಿದ ಜಾಗೃತಿ ಸಂದೇಶ ಅದ್ಭುತವಾದದ್ದು. ಇಂತಹ ಪ್ರಯತ್ನಕ್ಕೆ ಮುಂದಾದ ಚಂದನ್ ಶಾಲೆಯ ಪ್ರಯತ್ನ ಕೂಡ ಸಾಮಾಜಿಕ ಕಾಳಜಿ ತೋರಿಸುವಂತಹದ್ದು.