ಯಾವುದೇ ಬ್ಯಾಂಕ್ ತನ್ನ ಜಾಗವನ್ನು ಇತರೆ ಉದ್ದೇಶಗಳಿಗಾಗಿ ಲೀಸ್ ಅಥವಾ ಬಾಡಿಗೆಗೆ ಕೊಡುವಂತಿಲ್ಲ.

ಮುಂಬೈ: ಖಾಸಗಿ ಬ್ಯಾಂಕಿನ ಮುಖ್ಯಸ್ಥರೊಬ್ಬರು ತಮ್ಮ ಪತ್ನಿಯ ಎನ್.ಜಿ.ಒ.ಗೆ ತಮ್ಮ ಬ್ಯಾಂಕಿನ ಪಕ್ಕದ ಜಾಗವನ್ನು ಬಳಸಿಕೊಳ್ಳಲು ನೀಡಿದ್ದ ವಿಷಯ ಈಗ ಬೆಳಕಿಗೆ ಬಂದಿದೆ. ತಿಂಗಳಿಗೆ ನಾಮಕಾವಸ್ಥೆ ಒಂದೇ ಒಂದು ರೂಪಾಯಿ ಬಾಡಿಗೆಯಷ್ಟೇ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ.

ಯೆಸ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ ಗಳು ದಿವಾಳಿ ಹೊಂದಿದ್ದರ ಹಿಂದೆ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರ ಸ್ವಾರ್ಥವಿತ್ತು ಎನ್ನುವುದನ್ನು ನೋಡಿದ್ದೇವೆ.

ಈಗ ಐಡಿಎಫ್ಸಿ ಬ್ಯಾಂಕ್ ಅಧ್ಯಕ್ಷ ರಾಜೀವ್ ಲಾಲ್ ದಕ್ಷಿಣ ಮುಂಬೈನ ಬ್ಯಾಂಕಿನ ಕೇಂದ್ರ ಕಚೇರಿಯ ಪಕ್ಕದ ಬೆಲೆಬಾಳುವ ಜಾಗವನ್ನು 2015-19ರ ಅವಧಿಗೆ ಅವರ ಪತ್ನಿಯ ಎನ್.ಜಿ.ಒ ಏಷ್ಯಾ ಸೊಸೈಟಿ ಇಂಡಿಯಾ ಸೆಂಟರ್ (ಎ.ಎಸ್ಐ.ಸಿ)ಗೆ ಕೇವಲ ಒಂದು ರೂ. ಮಾಸಿಕ ಬಾಡಿಗೆಗೆ ನೀಡಿದ್ದರು.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 6 ಮತ್ತು 9ರ ಪ್ರಕಾರ ಇದು ಅಪರಾಧ. 2015-18ರ ಅವಧಿಯಲ್ಲಿ ಲಾಲ್ ಬ್ಯಾಂಕಿನ ಎಂಡಿಯಾಗಿದ್ದರು. 2016-17 ಮತ್ತು 2017-18ರ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಅವರು ಮರೆಮಾಚಿದ್ದರು. 2018ರಲ್ಲಿ ಅವರು ಬ್ಯಾಂಕಿನ ಚೇರ್ಮನ್ ಆದ ಬಳಿಕ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಎಂದು ಹೆಸರು ಬದಲಾಯಿಸಲಾಗಿದೆ.

ಬ್ಯಾಂಕುಗಳ ಮ್ಯಾನೇಜರುಗಳು, ಎಂಡಿಗಳು ಮತ್ತು ಚೇರ್ಮನ್ಗಳು ಆರ್.ಬಿ.ಐ ನಿಯಮಾವಳಿ ಉಲ್ಲಂಘಿಸಿ ಸ್ವಾರ್ಥ ಮೆರೆಯುವ ಕಾರಣದಿಂದ ಬಹುಪಾಲು ಖಾಸಗಿ ಬ್ಯಾಂಕುಗಳು ತಮ್ಮ ಸಾಮಾನ್ಯ ಗ್ರಾಹಕರನ್ನು ವಂಚಿಸುತ್ತಿವೆ. ಲಾಲ್ ಪ್ರಕರಣ ಒಂದು ತಾಜಾ ಉದಾಹರಣೆ ಅಷ್ಟೇ. ಆರ್.ಬಿ.ಐ. ಏನು ಕ್ರಮ ಕೈಗೊಳ್ಳುತ್ತದೆ ನೋಡಬೇಕು.

Leave a Reply

Your email address will not be published. Required fields are marked *

You May Also Like

ಹದಗೆಟ್ಟ ಸೊರಟೂರ – ಮುಳಗುಂದ ರಸ್ತೆ: ದಶಕ ಗತಿಸಿದರೂ ದುರಸ್ಥಿ ಭಾಗ್ಯ ಕಾಣದ ರಸ್ತೆ!

ಮುಳಗುಂದ: ಸಮೀಪದ ಸೊರಟೂರ ಗ್ರಾಮದಿಂದ ಮುಳಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು ದುರಸ್ಥಿ ಕಾಮಗಾರಿ ಕೈಗೊಳ್ಳಬೇಕಿದೆ.

ಲಕ್ಷ್ಮೇಶ್ವರ: ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನವಿ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಕೊರೊನಾದ ಮಧ್ಯೆಯೂ ಸಂಗ್ರಹವಾದ ಜಿಎಸ್ ಟಿ ಮೊತ್ತ ಎಷ್ಟು ಗೊತ್ತಾ?

ನವದೆಹಲಿ : ಹಣಕಾಸು ಇಲಾಖೆ ಜಿಎಸ್‌ಟಿ ಸಂಗ್ರಹದ ಮಾಹಿತಿ ಬಿಡುಗಡೆ ಮಾಡಿದ್ದು, ಜೂನ್ ತಿಂಗಳಲ್ಲಿ ಒಟ್ಟು…

ಪಕ್ಷದ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆದಿರುವ ಬಿ.ಎಸ್. ಯಡಿಯೂರಪ್ಪ

ಆಲಮಟ್ಟಿ:ಬಿ.ಎಸ್.ಯಡಿಯೂರಪ್ಪ, ರಾಜಕಾರಣದಿಂದ ನಿವೃತ್ತಿಯಾಗಲ್ಲ, ಅವರು ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತರಾಗುತ್ತಾರೆ, ಪಕ್ಷಕ್ಕೆ ಕೋಚ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ…