ಗದಗ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಈ ಕಾರಣದಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದ ವ್ಯಕ್ತಿ ನೆರವಿಗೆ ಯಾರೊಬ್ಬರು ಮುಂದಾಗದ ಘಟನೆ ಗದಗ ನಗರದ ಬೆಟಗೇರಿಯಲ್ಲಿ ನಡೆದಿದೆ.
ವ್ಯಕ್ತಿಯ ಸ್ಥಿತಿ ಕಂಡು ಕೊನೆಗೂ ಯುವಕನೋರ್ವ ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ ವ್ಯಕ್ತಿಯ ಸಹಾಯಕ್ಕೆ ಮುಂದಾಗಿ ಮಾನವೀಯತೆ ಮೆರೆದಿದ್ದಾನೆ. ಬಹುತೇಕರು ಕೊರೊನಾ ಆತಂಕದಿಂದ ದೂರದಿಂದ ನೋಡುತ್ತಿದ್ದರು. ಇಲ್ಲಿನ ಕುರಹಟ್ಟಿ ಪೇಟೆಯ ನಿವಾಸಿಯೊಬ್ಬರು ಗಂಟಲ ನೋವು, ಹೊಟ್ಟೆ ಉರಿ ಎಂದು ನರಳುತ್ತಾ ರಸ್ತೆ ಮದ್ಯೆದಲ್ಲಿ ಉರಾಳಾಡುತ್ತಿದ್ದರು.
ಈ ವ್ಯಕ್ತಿಗೆ ಕೊರೊನಾ ಇರಬಹುದು ಎಂಬ ಸಂಶಯದಿಂದ ಯಾರೂ ಆತನ ನೆರವಿಗೆ ಧಾವಿಸಲಿಲ್ಲ. ಈ ನರಳಾಟ ನೋಡದೇ ಯುವಕನೊಬ್ಬ ನರಳಾಡುತ್ತಿದ್ದ ವ್ಯಕ್ತಿಯನ್ನು ಆರೈಕೆ ಮಾಡಿದ್ದು ಮಾನವೀಯತೆಗೆ ಸಾಕ್ಷಿಯಾಗಿದೆ.