ಅಂಕಗಳೇ ಎಲ್ಲವನ್ನೂ ನಿರ್ಧರಿಸುವುದಿಲ್ಲ ಎಂದು ಐಎಎಸ್  ಅಧಿಕಾರಿ ಮಾಡಿದ ಟ್ವೀಟ್ನಿಂದ ಸಾವಿರಾರು ಫೇಲಾದ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿದೆ.

ನವದೆಹಲಿ: ಸದ್ಯ ಐಎಎಸ್ ಅಧಿಕಾರಿಯಾಗಿರುವ ನಿತಿನ್ ಸಂಗ್ವಾನ್ ಮೊನ್ನೆ 12ನೆ ತರಗತಿ ಫಲಿತಾಂಶ ಬಂದಾಗ ತಮ್ಮ 12ನೆ ತರಗತಿ ಅಂಕಪಟ್ಟಿ ಹಾಕಿ, ‘ಜೀವನ ಬೋರ್ಡ್ ಫಲಿತಾಂಶಕ್ಕಿಂತ ವಿಶಾಲವಾಗಿದೆ’ ಎಂದು ಟ್ವೀಟ್ ಮಾಡಿದ್ದರು.

ಯಾವ ಉದ್ದೇಶಕ್ಕೆ ಹೀಗೆ ಟ್ವೀಟ್ ಮಾಡಿದ್ದು ಎಂದು ಕೇಳಿದಾಗ, ‘ನನ್ನ ಪರಿಚಿತರನೇಕರು ತಮ್ಮ ಮಕ್ಕಳು ಕಡಿಮೆ ಸ್ಕೋರ್ ಮಾಡಿದ್ದಕ್ಕೆ ಬೇಸರ ಮತ್ತು ಒತ್ತಡಕ್ಕೆ ಒಳಗಾಗಿದ್ದರು. 12ನೆ ತರಗತಿ ಫಲಿತಾಂಶ ಬಂದಾಗ ನನ್ನ ಹಾಲತ್ ಇದಕ್ಕೂ ಕೆಟ್ಟದಾಗಿತ್ತು. ಅಂದು ಕೆಮಿಸ್ಟ್ರಿಯಲ್ಲಿ 24 ಪಡೆದ ನಾನು ಇಂದು ಐಎಎಸ್ ಅಧಿಕಾರಿ. ಇದು ಫೇಲ್ ಆದವರಿಗೆ, ಕಡಿಮೆ ಅಂಕ ಪಡೆದವರಿಗೆ ಧೈರ್ಯ ತರಲಿ ಎಂಬ ಕಾರಣಕ್ಕೆ ಆ ರೀತಿ ಟ್ವೀಟ್ ಮಾಡಿದ್ದೆ’ ಎಂದಿದ್ದಾರೆ.

ಅವರ ಟ್ವೀಟ್ ಸಾರಾಂಶ:

‘ನನ್ನ 12 ನೆ ತರಗತಿ ಪರೀಕ್ಷೆಯಲ್ಲಿ ನಾನು ಕೆಮಿಸ್ಟ್ರಿಯಲ್ಲಿ 70ಕ್ಕೆ ಕೇವಲ 24 ಪಡೆದಿದ್ದೆ. ಪಾಸ್ ಆಗಲು ಬೇಕಾದ ಕನಿಷ್ಠ ಅಂಕ 23ಕ್ಕಿಂತ ಒಂದು ಹೆಚ್ಚು ಮಾತ್ರ. ಆದರೆ ಜೀವನದಲ್ಲಿ ನಾನು ಏನಾಗಬೇಕು ಎಂದುಕೊಂಡಿದ್ದೇನೋ ಅದನ್ನು ಆ ಅಂಕ ನಿರ್ಧರಿಸಲಿಲ್ಲ.

·     ಅಂಕಗಳಿಗೆ ಸಂಬಂಧಿಸಿದಂತೆ ಮಕ್ಕಳ ಮೇಲೆ ಒತ್ತಡ ಹಾಕಿ ಅವರನ್ನು ಕುಂದಿಸಬೇಡಿ.

·     ಜೀವನ ಅಂಕಗಳಿಗಿಂತ ವಿಶಾಲವಾಗಿದೆ.

·     ಫಲಿತಾಂಶಗಳು ಆತ್ಮಾವಲೋಕನಕ್ಕೆ ದಾರಿ ಮಾಡಲಿ, ಟೀಕೆಗೆ ಅಲ್ಲ.’

ಅವರ ಈ ಟ್ವೀಟ್ ಸಾವಿರಾರು ಸಲ ರಿಟ್ವೀಟ್ ಆಗಿದೆ. ಫೇಲ್ ಆದ ಮತ್ತು ಕಡಿಮೆ ಅಂಕ ಪಡೆದ ಸಾವಿರಾರು ವಿದ್ಯಾರ್ಥಿಗಳು ಆತ್ಮಸ್ಥೈರ್ಯ ತುಂಬಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕೇಂದ್ರ ಸರ್ಕಾರದ ಅನುಮತಿ : ಸಚಿವ ಎಸ್.ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಪ್ಲಾಸ್ಮಾಥೆರಪಿ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ಕೇಂದ್ರ…

ಗಡಿಯಲ್ಲಿ 60 ಸಾವಿರ ಸೈನಿಕರನ್ನು ನಿಯೋಜಿಸಿದ ಚೀನಾ!

ವಾಷಿಂಗ್ಟನ್ : ಗಡಿಯಲ್ಲಿ ಚೀನಾ ರಾಷ್ಟ್ರದ ಉಪಟಳ ಮುಂದುವರೆದಿದೆ. ಚೀನಾ ಭಾರತದ ಮೇಲೆ ದಾಳಿ ಮಾಡುವ ಹುನ್ನಾರ ನಡೆಸುತ್ತಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಗಡಿಯಲ್ಲಿ 60 ಸಾವಿರ ಸೈನಿಕರನ್ನು ನಿಯೋಜಿಸಿದ್ದೆ ಈ ಸಂಶಯಕ್ಕೆ ಕಾರಣವಾಗುತ್ತಿದೆ.

ಹಸಿವು ತಾಳದೆ ಸತ್ತ ನಾಯಿಯನ್ನೇ ತಿಂದ ವ್ಯಕ್ತಿ!

ಹಸಿವು ತಾಳಲಾರದೆ ವ್ಯಕ್ತಿಯೋರ್ವ ರಸ್ತೆಯಲ್ಲಿ ಅಪಘಾತವಾಗಿ ಸತ್ತು ಬಿದ್ದಿದ್ದ ನಾಯಿಯನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ.