ಸಚಿವ ಸಿ.ಟಿ.ರವಿ ಎರಡು ದಿನದಿಂದ ತಮ್ಮ ಕೋರೊನಾ ಪರೀಕ್ಷೆಯ ಕುರಿತು ಟ್ವೀಟ್ ಮಾಡಿದ್ದೇ ಮಾಡಿದ್ದು. ಅವರ ಅನುಭವ ನೋಡಿದರೆ ಟೆಸ್ಟ ಫಲಿತಾಂಶ ‘ಪಾಸಿಟಿವ್, ನೆಗೆಟಿವ್’ ಎಂಬ ಎರಡು ಚೀಟಿಯಲ್ಲಿ ಒಂದನ್ನು ಎತ್ತಿಕೊಳ್ಳುವ ಆಟದಂತಿದೆ. ಇದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯೂ ಆಗಿದೆ.

ಬೆಂಗಳೂರು: ಪುಣ್ಯಕ್ಕೆ ನಾಲ್ಕನೆ ಟೆಸ್ಟ ಮೊರೆ ಹೋಗಿಲ್ಲ ಸಚಿವ ಸಿ.ಟಿ ರವಿಯವರು. ಮೂರಕ್ಕೇ ಸಾಕು ಎಂದಿದ್ದಾರೆ.

ಮೊದಲ ಟೆಸ್ಟ ಪಾಸಿಟಿವ್ ಬಂತಂತೆ. ತಮ್ಮ ಸರ್ಕಾರ ನಡೆಸುತ್ತಿರುವ ಟೆಸ್ಟಿಂಗ್ ಮೇಲೇಯೇ ವಿಶ್ವಾಸವಿಲ್ಲದ ಸಚಿವರು, ಮತ್ತೊಮ್ಮೆ ಗಂಟಲು ದ್ರವವನ್ನು ಹೆಕ್ಕಿಸಿಕೊಂಡು ಎರಡನೇ ಟೆಸ್ಟ್ ಮಾಡಿಸಿಕೊಂಡರಂತೆ. ಅದು ನೆಗೆಟಿವ್ ಬಂತಂತೆ. ಅಷ್ಟೊತ್ತಿಗೆ ಸಚಿವರಿಗೆ ಇದು ಆಟದ ತರಹ ಕಂಡಿತೇನೋ? ಮೂರನೇ ಟೆಸ್ಟ್ ಮಾಡಿಸಿಕೊಂಡರು. ಫಲಿತಾಂಶಕ್ಕೆ ಕಾಯುತ್ತ ‘ಥರ್ಢ್ ಅಂಪೈರ್ ರಿಸಲ್ಟ ಗೆ ಕಾಯುತ್ತಿರುವೆ’ ಎಂದು ಹುಡುಗಾಟಿಕೆಯ ಮಾತಿನಲ್ಲಿ ಟ್ವೀಟ್ ಮಾಡಿದರು.

ಮೂರನೆ ಫಲಿತಾಂಶ ಇವತ್ತು ಪಾಸಿಟಿವ್ ಬಂದಾಗ. ‘ಥರ್ಡ್ ಅಂಪೈರ್ ಫಲಿತಾಂಶ ಪಾಸಿಟಿವ್ ಬಂದಿದೆ. ನಾನು ಆರೋಗ್ಯವಾಗಿದ್ದೇನೆ’ ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

ಸಿ.ಟಿ. ರವಿಯವರ ಒಟ್ಟೂ ಈ ಟೆಸ್ಟಿಂಗ್ ಪ್ರಹಸನ ರಾಜ್ಯದಲ್ಲಿ ಸರ್ಕಾರ ಟೆಸ್ಟಿಂಗ್ ಬಗ್ಗೆ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಚಿವರಿಗೆ ಮಾತ್ರ ‘ಬೆಸ್ಟ ಆಫ್ ಥ್ರೀ’ ಆಪ್ಷನ್ ಇದೆಯೋ, ಜನಸಾಮಾನ್ಯರಿಗೂ ಇದೆಯೋ ಎಂಬುದನ್ನು ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಸ್ಪಷ್ಟಪಡಿಸಲಿ.

ಒಟ್ಟಿನಲ್ಲಿ ಮೂರು ಟ್ವೀಟ್ ಗಳ ಮೂಲಕ ಟೆಸ್ಟಿಂಗ್ ಎಂಬುದು ಚೀಟಿ ಎತ್ತುವ ಆಟ ಎಂಬಂತೆ ಸಿ.ಟಿ. ರವಿ ಚಿತ್ರಿಸಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

You May Also Like

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿ

ಬೆಂಗಳೂರು: ಲಾಕ್‌ಡೌನ್‌ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಗೊಳಿಸಿದೆ.…

ಅಭಿನವ ಅನ್ನದಾನ ಶ್ರೀ ಗಳ ದರ್ಶನ ಪಡೆದ ಸಿಎಂ ಬೊಮ್ಮಾಯಿ ಹಾಗೂ ಸಚಿವ ಸಿ,ಸಿ,ಪಾಟೀಲ

ಲಿಂಗೈಕ್ಯ ಶ್ರೀ ಗಳ ದರ್ಶನ ಪಡೆದ ಮುಖ್ಯಮಂತ್ರಿ ಮಾತನಾಡಿ ತ್ರಿವಿಧ ದಾಸೋಹಿಗಳು ಅನ್ನ ಅಕ್ಷರ ನೀಡುವ ಮೂಲಕ ಶೈಕ್ಷಣಿಕವಾಗಿ ಧಾರ್ಮಿಕವಾಗಿ ನಾಡಿಗೆ ಕೊಟ್ಟ ಕೊಡುಗೆ ತುಂಬಾ ದೊಡ್ಡದು ಎಂದು ಹೇಳಿದರು.

22ನೆ ಸ್ಥಾನದಲ್ಲಿ ಗದಗ ಜಿಲ್ಲೆ : ಕಲಾ ವಿಭಾಗದಲ್ಲಿ ಕಳಪೆ, ಪಿಯುಸಿ-2 ಫಲಿತಾಂಶ ವಿವರ

ಕಳೆದ ಬಾರಿ ಶೇ. 57ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ ಈ ಬಾರಿ ಶೇ.63 ಸಾಧನೆ ಮಾಡಿದೆ. ಒಟ್ಟಾರೆ ಜಿಲ್ಲಾವಾರು ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ್ದು, 22 ನೆ ಸ್ಥಾನದಲ್ಲಿದೆ.

ಕಾಲುವೆಗೆ ಉರುಳಿ ಬಿದ್ದ ಕಾರು: ಇಬ್ಬರು ಸ್ಥಳದಲ್ಲೆ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ನಡೆದಿದೆ.